ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ರನ್ನು ಪ್ರಧಾನಿಯಾಗಿ ನೋಡುವಾಸೆ : ಸುಧೀಂದ್ರ ಕುಲಕರ್ಣಿ

|
Google Oneindia Kannada News

Recommended Video

ರಾಹುಲ್ ಗಾಂಧಿ ಮಾತ್ರ ದೇಶದ ಪ್ರಧಾನಿಯಾಗಲು ಸಾಧ್ಯ ಎಂದ ಸುಧೀಂದ್ರ ಕುಲಕರ್ಣಿ | Oneindia Kannada

ಮುಂಬೈ, ಜೂನ್ 18: ಭಾರತಕ್ಕೆ ಅಗತ್ಯವಿರುವುದು ಕಾಶ್ಮೀರದಂಥ 'ಮಹಾನ್ ಸಮಸ್ಯೆ'ಗಳನ್ನು ಬಗೆಹರಿಸಬಲ್ಲ ನಾಯಕರು. ಅದಕ್ಕೆಂದೇ ನಾನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ನೋಡಲು ಬಯಸುತ್ತೇನೆ ಎಂದು ಬಿಜೆಪಿ ಮಾಜಿ ನಾಯಕ, ಅಂಕಣಕಾರ ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.

ಶಿವಸೇನೆಯಿಂದ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿಶಿವಸೇನೆಯಿಂದ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ

ಬಿಜೆಪಿ ನಾಯಕ ಎಲ್ ಕೆ ಆಡ್ವಾಣಿ ಅವರ ಒಂದು ಕಾಲದ ಆಪ್ತರಾಗಿದ್ದ ಸುಧೀಂದ್ರ ಕುಲಕರ್ಣಿ , ಮುಂಬೈಯಲ್ಲಿ ಪ್ಯಾನಲ್ ಚರ್ಚೆಯೊಂದರಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ ಈ ರೀತಿ ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನ ಮತ್ತು ಚೀನಾ ವಿಷಯಗಳನ್ನು ಬಗೆಹರಿಸುವಲ್ಲಿ ಸಫಲರಾಗಿಲ್ಲ ಎಂದು ಅವರು ಹೇಳಿದರು.

ಎಚ್‌ಡಿಕೆ-ರಾಹುಲ್ ಭೇಟಿಯಿಂದ ಸಿದ್ದರಾಮಯ್ಯಗೆ ಗುದ್ದು!ಎಚ್‌ಡಿಕೆ-ರಾಹುಲ್ ಭೇಟಿಯಿಂದ ಸಿದ್ದರಾಮಯ್ಯಗೆ ಗುದ್ದು!

ರಾಹುಲ್ ಗಾಂಧಿ ಒಬ್ಬ 'ಉತ್ತಮ ವ್ಯಕ್ತಿ. ಭಾರತ ಸುದೀರ್ಘ ಸಮಯದಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ರಾಹುಲ್ ಗಾಂಧಿ ಅವರಿಗೆ ಮಾತ್ರ ಸಾಧ್ಯ' ಎಂದು ಅವರು ಹೇಳಿದರು.

Sudheendra Kulakarni wants to see Rahul Gandhi as Prime minister

'ರಾಹುಲ್ ಗಾಂಧಿ ಯುವ ಮತ್ತು ಆದರ್ಶ ವ್ಯಕ್ತಿ. ಅವರು ಪ್ರೀತಿ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ಅವರನ್ನು ಈಗಿನ ಯಾವ ರಾಜಕಾರಣಿಗಳೂ ಪ್ರೀತಿ, ಅಕ್ಕರೆ, ಸಹಬಾಳ್ವೆಯ ಮಾತನ್ನಾಡುವುದನ್ನು ನಾನು ನೋಡಿಲ್ಲ' ಎಂದು ರಾಹುಲ್ ಗಾಂಧಿ ಅವರ ಮೇಲೆ ಹೊಗಳಿಕೆಯ ಸುರಿಮಳೆ ಸುರಿಸಿದರು.

ಸುಧೀಂದ್ರ ಕುಲಕರ್ಣಿಯವರಿಂದ ಕನ್ನಡಿಗರಿಗೆ ಹಿಂದೀ ಪಾಠ!ಸುಧೀಂದ್ರ ಕುಲಕರ್ಣಿಯವರಿಂದ ಕನ್ನಡಿಗರಿಗೆ ಹಿಂದೀ ಪಾಠ!

'ರಾಜೀವ್ ಗಾಂಧಿ ವಿರೋಧಪಕ್ಷದಲ್ಲಿದ್ದಾಗ ಅಫ್ಘಾನಿಸ್ತಾನಕ್ಕೆ ತೆರಳಿದಂತೆ, ರಾಹುಲ್ ಗಾಮಧಿಯವರು ಸಹ ಈಗ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳಿಗೆ ತೆರಳಿ ಅಲ್ಲಿನ ಮುಖಂಡರೊಂದಿಗೆ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಯೋಚನೆಗಳೇನು ಎಂಬ ಬಗ್ಗೆ ಚರ್ಚೆ ನಡೆಸಬೇಕು. ಮೋದಿಜೀಯವರಿಗೂ ಈ ಸಮಸ್ಯೆಗಳನ್ನು ಪರಿಹರಿಸಲಾಗಿಲ್ಲ. ಆದ್ದರಿಂದ ರಾಹುಲ್ ಗಾಂಧಿಯವರು ಆ ನಿಟ್ಟಿನಲ್ಲಿ ಚಿಂತಿಸಬೇಕು' ಎಂದು ಅವರು ಸಲಹೆ ನೀಡಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ಅವರಾದ ಕನ್ನಡಿಗ ಸುಧೀಂದ್ರ ಕುಲಕರ್ಣಿ ಉತ್ತಮ ಅಂಕಣಕಾರರಾಗಿಯೂ ಪ್ರಸಿದ್ಧರಾಗಿದ್ದಾರೆ.

English summary
Sudheendra Kulakarni, former aide of BJP leader LK Advani praises Rahul Gandhi. And he says, "I would like to see Rahul gandhi as our prime minister. He is a leader with good heart. Only he can solve issues like Kashmir and all"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X