ಚಿಕನ್ ಮತ್ತು ಮೊಟ್ಟೆ ಕೂಡ ಸಸ್ಯಾಹಾರ ಎಂದು ಪರಿಗಣಿಸಿ: ಶಿವಸೇನಾ ಸಂಸದ
ಮುಂಬೈ, ಜುಲೈ 18: ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಕೂಡ ಸಸ್ಯಾಹಾರ ಎಂದು ಪರಿಗಣಿಸಬೇಕು ಎಂದು ರಾಜ್ಯಸಭಾ ಸಂಸದ, ಶಿವಸೇನಾ ಮುಖಂಡ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.
ಸೋಮವಾರ ರಾಜ್ಯಸಭೆಯಲ್ಲಿ ಆಯುರ್ವೇದದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಈ ವಿಚಿತ್ರ ಬೇಡಿಕೆ ಮುಂದಿಟ್ಟಿದ್ದಾರೆ.
ಚಿಕನ್ ಸಸ್ಯಾಹಾರವೋ ಅಥವಾ ಮಾಂಸಾಹಾರವೋ ಎಂಬುದನ್ನು ನಿರ್ಧರಿಸಲು ಆಯುಷ್ ಸಚಿವಾಲಯವು ಗಮನ ಹರಿಸಬೇಕು ಎನ್ನುವ ಮೂಲಕ ಅವರು ಸದನವನ್ನು ಅಚ್ಚರಿಗೆ ನೂಕಿದರು.

'ನಾನು ಒಮ್ಮೆ ನಂದುರ್ಬಾರ್ ಪ್ರದೇಶದ ಸಣ್ಣ ಹಳ್ಳಿಯೊಂದಕ್ಕೆ ಹೋಗಿದ್ದೆ. ಅಲ್ಲಿನ ಆದಿವಾಸಿ ಸಮುದಾಯದವರು ನಮಗೆ ಆಹಾರ ನೀಡಿದರು. ಇದೇನು ಎಂದು ಅವರನ್ನು ಕೇಳಿದೆ. ಇದು ಆಯುರ್ವೇದಿಕ್ ಚಿಕನ್. ಇದನ್ನು ತಿಂದರೆ ನಿಮ್ಮ ಎಲ್ಲ ಕಾಯಿಲೆಗಳೂ ದೂರವಾಗುತ್ತದೆ. ಆ ಕೋಳಿಯನ್ನು ಹಾಗೆ ಬೆಳೆಸಿದ್ದೇವೆ ಎಂದರು ಎಂದು ರಾವತ್ ಹೇಳಿದ್ದಾರೆ.
'ಆಯುರ್ವೇದಿಕ್ ಆಹಾರವನ್ನು ನೀಡಿದರೆ ಕೋಳಿಯೂ ಆಯುರ್ವೇದಿಕ್ ಮೊಟ್ಟೆ ಇಡುತ್ತದೆ ಎಂದು ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ನನಗೆ ತಿಳಿಸಿದ್ದರು' ಎಂದೂ ಅವರು ಹೇಳಿಕೆ ನೀಡಿದ್ದಾರೆ.
ಆಯರ್ವೇದಿಕ್ ಆಹಾರವನ್ನು ಮಾತ್ರ ನೀಡಿದರೆ ಕೋಳಿ ಆಯುರ್ವೇದಿಕ್ ಮೊಟ್ಟೆಯನ್ನೇ ನೀಡುತ್ತದೆ. ಹೀಗಾಗಿ ಸಸ್ಯಾಹಾರಿಗಳು ಪ್ರೋಟೀನ್ ಪಡೆದುಕೊಳ್ಳಲು ಈ ರೀತಿಯ ಆಯುರ್ವೇದಿಕ್ ಕೋಳಿಗಳನ್ನು ಆಹಾರವಾಗಿ ಸೇವಿಸಬಹುದು ಎಂದು ಹೇಳಿದ್ದಾರೆ.
ಸಂಜಯ್ ರಾವತ್ ಅವರ ಹೇಳಿಕೆ ವಿಪರೀತ ಟ್ರೋಲ್ಗೆ ಒಳಗಾಗಿದೆ. ನೆಟ್ಟಿಗರು ಅವರ ಹೇಳಿಕೆಯನ್ನು ಆಧರಿಸಿ ತಮಾಷೆಯ ಮೀಮ್ಗಳನ್ನು ಮಾಡುತ್ತಿದ್ದಾರೆ.
ಚಿಕನ್ ಮತ್ತು ಮೊಟ್ಟೆ ಮಾತ್ರ ಏಕೆ? ಮಟನ್ ಹಾಗೂ ಬೀಫ್ ಅನ್ನೂ ಈ ಪಟ್ಟಿಯಲ್ಲಿ ಸೇರಿಸಬೇಕು. ಈ ಪ್ರಾಣಿಗಳು ಸಸ್ಯವನ್ನೇ ಆಹಾರವಾಗಿ ಸೇವಿಸುವುದರಿಂದ ಅವು ಕೂಡ ಆಯುರ್ವೇದಿಕ್ ಪ್ರಾಣಿಗಳಾಗಿರುತ್ತವೆ ಎಂದು ಕಾಲೆಳೆದಿದ್ದಾರೆ.
ಈ ರೀತಿಯ ಮನೋಭಾವದ ಜನರು ನಮ್ಮ ದೇಶವನ್ನು ಆಳುತ್ತಿದ್ದಾರೆ, ಕ್ಷಮಿಸಿ ಹಾಳು ಮಾಡುತ್ತಿದ್ದಾರೆ. ನಮ್ಮ ದೇಶವನ್ನು ದೇವರೇ ರಕ್ಷಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಹಾಗಾದರೆ, ಇನ್ನು ಮುಂದೆ ವೆಜ್ ಬಿರಿಯಾನಿಯಲ್ಲಿ ಲೆಗ್ ಪೀಸ್ಗಳೂ ಸಿಗುತ್ತವೆಯೇ? ಎಂದು ಒಬ್ಬರು ಪ್ರಶ್ನಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications