ಗುದ್ದೋಡು ತೀರ್ಪು: ಮುಂಬೈ ಹೈಕೋರ್ಟ್ ಹೇಳಿದ್ದೇನು?
ಮುಂಬೈ, ಡಿಸೆಂಬರ್, 10 : ಗುದ್ದೋಡು ಸನ್ಮಾನ್ ಖಾನ್ ಮೇಲಿನ ಯಾವುದೇ ಆರೋಪಗಳು ಸಾಬೀತಾಗಿಲ್ಲ, ಅವರು ನ್ಯಾಯಾಲಯದಿಂದ ನಿರ್ದೋಷಿ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದ್ದಾರೆ.
ಹಾಗಾದರೆ ಮುಂಬೈ ಹೈ ಕೋರ್ಟ್ ಸಲ್ಮಾನ್ ಖಾನ್ ಪ್ರಕರಣದ ಕುರಿತು ಹೇಳಿದ್ದೇನು? ತೀರ್ಪು ನೀಡುವಾಗ ಯಾವ ಯಾವ ಅಂಶಗಳನ್ನು ಗಣನೆಗೆ ತೆಗೆದುಕೊಂಡಿತು ಎಂಬುದನ್ನು ನೋಡಲೇಬೇಕು.[ಟ್ವೀಟ್ಸ್ : 'ಗುದ್ದೋಡು, ಫೈಲ್ ಸುಡು, ಸಾಕ್ಷಿ ಸಾಯಿಸು, ಖುಲಾಸೆಗೊಳ್ಳು']

* ಸಲ್ಮಾನ್ ಖಾನ್ ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಶನ್ ಸಂಪೂರ್ಣ ವಿಫಲವಾಗಿದೆ
* ಸಲ್ಮಾನ್ ಖಾನ್ ಅಪಘಾತ ಮಾಡಿದ್ದಾರೆ ಎಂದು ಅನುಮಾನ ಪಡಬಹುದೇ ವಿನಃ ಅವರೇ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ
* ಸರಾಯಿ ನಶೆಯಲ್ಲಿ ವಾಹನ ಚಲಾಯಿಸುತ್ತಿರುವುದರಿಂದ ಅಪಘಾತವಾಯಿತೋ ಅಥವಾ ಟೈರ್ ಬ್ಲಾಸ್ಟ್ ಆದ ಕಾರಣದಿಂದ ಅಪಘಾತವಾಯಿತೋ ಎಂಬುದಕ್ಕೂ ಸ್ಪಷ್ಟ ದಾಖಲೆಗಳಿಲ್ಲ.[ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ರಿಲೀಸ್ ಟೈಮ್ ಲೈನ್]
* ಪ್ರಾಸಿಕ್ಯೂಶನ್ ವಾದಗಳಲ್ಲಿ ಅನೇಕ ಲೋಪವಿದೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯಲ್ಲಿ ವ್ಯತಿರಿಕ್ತ ಅಂಶಗಳನ್ನು ಕಾಣಬಹುದು.
* ಗಾಯಗೊಂಡಿದ್ದ ವ್ಯಕ್ತಿಯ ಹೇಳಿಕೆಗಳೆ ಬದಲಾಗಿದೆ. ಒಮ್ಮೆ ಸಲ್ಮಾನ್ ಖಾನ್ ಘಃಟನೆ ನಡೆದ ತಕ್ಷಣ ಓಡಿಹೋಗಿದ್ದರೂ ಎಂದಿದ್ದರೆ ಇನ್ನೊಮ್ಮೆ ನೆಲಕ್ಕೆ ಉರುಳಿದ್ದರು ಎಂಬ ಹೇಳಿಕೆ ನೀಡಿದ್ದಾರೆ.
* ಒಟ್ಟಿನಲ್ಲಿ ಘಟನೆ ನಡೆದಾಗ ಸಲ್ಮಾನ್ ಖಾನ್ ಇದ್ದರು ಎಂದು ಊಹೆ ಮಾಡಬಹುದೇ ವಿನಃ ಯಾವ ಸಾಕ್ಷಿಗಳು ಅವರೇ ಮಾಡಿದ್ದಾರೆ ಎಂದು ಪುರಾವೆ ನೀಡುವಷ್ಟು ಶಕ್ತವಾಗಿಲ್ಲ.












Click it and Unblock the Notifications