'15 ಲಕ್ಷ ರೂ. ಎಲ್ಲರ ಖಾತೆಗೂ ಬರುತ್ತದೆ, ಆದರೆ ಸ್ವಲ್ಪ ತಡವಾಗಿ!'
Recommended Video

ಮುಂಬೈ, ಡಿಸೆಂಬರ್ 19: "ವಿದೇಶದಲ್ಲಿರುವ ಕಪ್ಪು ಹಣವನ್ನೆಲ್ಲ ದೇಶಕ್ಕೆ ತಂದು, ಈ ದೇಶದ ಪ್ರತಿಯೊಬ್ಬರ ಖಾತೆಗೂ ತಲಾ 15 ಲಕ್ಷ ರೂ.ಗಳನ್ನು ಜಮಾ ಮಾಡುತ್ತೇವೆ..." ಇದು 2014 ರ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೊದಿಯವರ ಬಾಯಲ್ಲಿ ಸದಾ ಉಚ್ಚಾರವಾಗುತ್ತಿದ್ದ ವಾಕ್ಯ.
ಈಗ ಮತ್ತೆ ಲೋಕಸಭಾ ಚುನಾವಣೆಯ ದಿನ ಸನ್ನಿಹಿತವಾಗುತ್ತಿರುವ ಹೊತ್ತಲ್ಲಿ ಮತ್ತೊಮ್ಮೆ ಇದೇ 'ಡೈಲಾಗ್' ಮುನ್ನೆಲೆಗೆ ಬಂದಿದೆ!
ಈ ಬಾರಿ ಈ ಸಾಲನ್ನು ಉಚ್ಚರಿಸಿದ್ದು ಪ್ರಧಾನಿ ಮೋದಿಯವರಲ್ಲ. ಕೇಂದ್ರ ಸಚಿವ ರಾಮದಾಸ್ ಅಠಾವಳೆ! 'ಪ್ರತಿಯೊಬ್ಬ ಭಾರತೀಯರ ಖಾತೆಗೂ 15 ಲಕ್ಷ ರೂ.ಜಮೆಯಾಗುತ್ತದೆ. ಆದರೆ ಒಂದೇ ಬಾರಿ ಆಗೋಲ್ಲ. ಹಂತ ಹಂತವಾಗಿ, ನಿಧಾನವಾಗಿ ಜಮೆಯಾಗುತ್ತದೆ' ಎಂದು ಅಠಾವಳೆ ಹೇಳಿದ್ದಾರೆ.
ಸರ್ಕಾರದ ಬಳಿ ಅಷ್ಟೊಂದು ಹಣವಿಲ್ಲ, ಆರ್ ಬಿಐ ಬಳಿ ಕೇಳಿದ್ದೇವೆ. ಕೆಲವು ತಾಂತ್ರಿಕ ದೋಷದ ಕಾರಣ ಹಣ ಸಂಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಹಣವು ಖಾತೆಗೆ ಜಮೆಯಾಗುವುದಂತೂ ಸತ್ಯ ಎಂದು ಅಠಾವಳೆ ಭರವಸೆ ನೀಡಿದ್ದಾರೆ.

15 ಲಕ್ಷ, ರಾಹುಲ್ ಗಾಂಧಿಗೆ ಪ್ರಚಾರದ ಅಸ್ತ್ರ!
15 ಲಕ್ಷ ರೂ.ಗಳನ್ನು ಪ್ರತಿಯೊಬ್ಬ ಭಾರತೀಯನ ಖಾತೆಗೂ ಜಮಾ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಯಾರದ್ದಾದರೂ ಖಾತೆಗೆ ಮೋದಿ ಒಂದು ಲಕ್ಷ ಹೋಗಲಿ, ಒಂದು ರೂಪಾಯಿಯನ್ನಾದರೂ ಜಮಾ ಮಾಡಿದ್ದಾರಾ? ಎಂದು ಮೇ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರತಿ ಪ್ರಚಾರದಲ್ಲೂ ರಾಹುಲ್ ಗಾಮಧಿ ಕೇಳಿದ್ದರು. ಮೋದಿಯವರ 15 ಲಕ್ಷದ ಹೇಳಿಕೆ ರಾಹುಲ್ ಗಾಂಧಿ ಅವರ ಪ್ರಚಾರದ ಅಸ್ತ್ರವಾಗಿತ್ತು.

ಮತ್ತೆ ನೆನಪಾದ 15 ಲಕ್ಷ ರೂ.
ಲೋಕಸಭಾ ಚುನಾವಣೆ 2019 ರ ಮೇ ತಿಂಗಳಿನಲ್ಲಿ ನಡೆಯಲಿದ್ದು, ಅದಕ್ಕಾಗಿ ಬೇಕೆಂದೇ ಬಿಜೆಪಿ ಮತ್ತು ಮೈತ್ರಿಕೂಟ 15 ಲಕ್ಷ ರೂ. ಗಳ ಬಗ್ಗೆ ಮತ್ತೆ ಮಾತನಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ. ರಾಮಜನ್ಮಭೂಮಿ ವಿಷಯವನ್ನೂ ಚುನಾವಣೆಯ ಹೊತ್ತಲ್ಲಿ ಮತ್ತೆ ನೆನಪಿಸುತ್ತಿರುವ ಬಿಜೆಪಿ 15 ಲಕ್ಷ ರೂಪಾಯಿಯನ್ನೂ ಮತ್ತೆ ತನ್ನ ಪ್ರಚಾರದ ವಿಷಯವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ವಿಪಕ್ಷಗಳು ದೂರಿವೆ.

ಆರ್ ಬಿಐ ಮೇಲೆ ಗೂಬೆ?
15 ಲಕ್ಷ ರೂ.ಗಳನ್ನು ಬಡವರ ಖಾತೆಗೆ ಜಮೆ ಮಾಡಲು ಸರ್ಕಾರ ಸಿದ್ಧವಿದೆ. ಆದರೆ ಸರ್ಕಾರದ ಬಳಿ ಹಣವಿಲ್ಲ. ಆರ್ ಬಿಐ ಬಳಿ ಹಣ ಕೇಳಿದ್ದೇವೆ. ಅದು ಹಣ ನೀಡಲು ಒಪ್ಪುತ್ತಿಲ್ಲ. ತನ್ನಲ್ಲಿ ಕೆಲವು ತಾಂತ್ರಿಕ ದೋಷಗಳಿವೆ ಎಂದು ಅದು ಹೇಳಿದೆ ಎಂದು ಅಠಾವಳೆ ಹೇಳಿದ್ದಾರೆ. ರಾಮದಾಸ್ ಅವರ ಈ ಹೇಳಿಕೆ ವಿವಾದ ಸೃಷ್ಟಿಸಸುವ ಸಾಧ್ಯತೆ ಇದೆ.

ಮೋದಿ ನೀಡಿದ್ದ ಆಶ್ವಾಸನೆ ಏನು?
ಸ್ವಿಸ್ ಬ್ಯಾಂಕಿನಲ್ಲಿದ್ದ ಭಾರತೀಯರ ಕಪ್ಪು ಹಣವನ್ನು ವಾಪಸ್ ದೇಶಕ್ಕೆ ತಂದು, ಆ ಹಣವನ್ನು ದೇಶದ ಪ್ರತಿ ಬಡ ಭಾರತೀಯ ಖಾತೆಗೂ ತಲಾ 15 ಲಕ್ಷ ರೂ.ನಂತೆ ಜಮಾ ಮಾಡುವುದಾಗಿ ಪ್ರಧಾನಿ ಮೋದಿ 2014 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಹೇಳಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications