ರಾಜ್ ಠಾಕ್ರೆ ಪತ್ನಿ ಶರ್ಮಿಳಾಗೆ ಸಾಕುನಾಯಿ ಕಚ್ಚಿದ್ದೇಕೆ?
ಮುಂಬೈ, ಆಗಸ್ಟ್ 21: ಮಹಾರಾಷ್ಟ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪತ್ನಿ ಶರ್ಮಿಳಾ ಅವರು 'ನಾಯಿ ಕಡಿತ' ದ ಆಘಾತದಿಂದ ಹೊರ ಬಂದಿದ್ದಾರೆ. ಮುಖಕ್ಕೆ ಸರ್ಜರಿಯಾಗಿದೆ. ಸಾಕಿದ ನಾಯಿ 'ಬಾಂಡ್' ಗೆ ರಾಜ್ ಠಾಕ್ರೆ ಅವರು ಶಿಕ್ಷೆಯನ್ನು ನೀಡಿದ್ದಾರಂತೆ. ಈ ನಡುವೆ ಪ್ರೀತಿಯ ನಾಯಿ ತನ್ನ ಒಡತಿಯನ್ನೇ ಕಚ್ಚಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಬಹುಶಃ ರಾಜ್ ಠಾಕ್ರೆ ಅವರು ಈ ನಾಯಿಯನ್ನು ಬಿಹಾರದಿಂದ ತಂದಿರಬೇಕು. ಮರಾಠಿ ಮಾನುಷ್ ಗಳ ಮಾತು ಕೇಳಲಾಗದೆ ಕಚ್ಚಿಬಿಟ್ಟಿದೆ ಎಂಬ ಜೋಕ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ಅದರೆ, ನಾಯಿ ಕಡಿತದ ಬಗ್ಗೆ ವೈಜ್ಞಾನಿಕ ಕಾರಣವನ್ನು ಹುಡುಕಿರುವ ಹಿಂದೂಜಾ ಆಸ್ಪತ್ರೆ ವೈದ್ಯರು, ನಾಯಿಗೆ ಕಡಿವಾಣ ಹಾಕಿದರೆ, ರೋಷ ಹೆಚ್ಚಾದರೆ ಈ ರೀತಿ ವರ್ತಿಸುತ್ತವೆ ಎಂದಿದ್ದಾರೆ.
ಮುದ್ದಿನಿಂದ ಸಾಕಿದ ನಾಯಿಗೆ 'ಬಾಂಡ್' ಎಂದು ಇಂಗ್ಲೀಷ್ ಹೆಸರಿಟ್ಟ ರಾಜ್ ಠಾಕ್ರೆ ಅವರು ಈಗ ಪತ್ನಿ ಪಕ್ಕದಲ್ಲಿ ಕುಳಿತು ಆರೈಕೆ ಮಾಡಿದ್ದಾರೆ. ನೆಚ್ಚಿನ ನಾಯಿ ತನ್ನ ಒಡತಿಯ ಮುಖವನ್ನು ವಿರೂಪಗೊಳಿಸಿ ಆಕೆಗೆ ಆಘಾತ ನೀಡಿದೆ. ಇತ್ತ ರಾಜ್ ಠಾಕ್ರೆಗೆ ರಾಜಕೀಯವಾಗಿ ಹಿನ್ನಡೆ ಹಾಗೂ ಮನೆಯಲ್ಲಿ ನಡೆದ ಘಟನೆಯಿಂದ ವಿಚಲಿತರಾಗಿದ್ದಾರೆ.

ಮಹಾರಾಷ್ಟ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪತ್ನಿ ಶರ್ಮಿಳಾ ಅವರು ಸಾಕಿರುವ ನಾಯಿಯೇ ಅವರನ್ನು ಕಚ್ಚಿದ ಘಟನೆ ಮಂಗಳವಾರ ನಡೆದಿತ್ತು. ರಾಜ್ ಠಾಕ್ರೆ ದಂಪತಿಗಳಿಗೆ ನಾಯಿಗಳೆಂದರೆ ಇಷ್ಟ. ಒಂದು ನಾಯಿಗೆ ಮುದ್ದಿನಿಂದ 'ಬಾಂಡ್' ಎಂದು ಹೆಸರಿಟ್ಟಿದ್ದರು. ಗಂಭೀರ ಸ್ವಭಾವದ ಈ ರೀತಿ ಕರೆಯುತ್ತಿದ್ದಾರೆ. ಮತ್ತೊಂದು ನಾಯಿಗೆ 'ಜೇಮ್ಸ್' ಎಂದು ಹೆಸರಿಟ್ಟಿದ್ದಾರೆ.
ಶರ್ಮಿಳಾ ಅವರ ಮುಖಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಮುಖದ ಮೂಳೆಗಳಿಗೆ ಹಾನಿಯಾಗುವಷ್ಟು ಆಳಕ್ಕೆ ನಾಯಿಯ ಹಲ್ಲಿನ ಗುರುತು ಕಂಡು ಬಂದಿತ್ತು. ಮುಖ ಹಾಗೂ ಗಲ್ಲ ಎರಡು ಸೇರಿ 65ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ.
ಏನು ಕಾರಣ: ಸಾಮಾನ್ಯವಾಗಿ ನಾಯಿಗಳು ರೊಚ್ಚಿಗೇಳುವುದು ಅವುಗಳಿಗೆ ವಿರಹ ವೇದನೆ ಉಂಟಾದಾಗ. ಸರಿಯಾದ ಸಮಯಕ್ಕೆ ಸಂಭೋಗಕ್ಕೆ ಆಸ್ಪದ ಸಿಗದಿದ್ದರೆ ಯಾರನ್ನು ಲೆಕ್ಕಿಸದೆ ದಾಳಿ ಮಾಡಿಬಿಡುತ್ತವೆ. ಈ ಹಿಂದೆ ಬೆಂಗಳೂರಿನಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾದಾಗ ಬೀದಿನಾಯಿಗಳನ್ನು ಹಿಡಿದು ತಂದು ಸಂತಾನ ಹರಣ ಚಿಕಿತ್ಸೆ ಮಾಡಲು ಪಾಲಿಕೆ ಮುಂದಾಗಿತ್ತು. ನಂತರ ಪೆಟಾ, ಕೂಪಾ ಸೇರಿದಂತೆ ಪ್ರಾಣಿ ಪ್ರಿಯ ಸಂಸ್ಥೆಗಳ ವಿರೋಧದಿಂದ ನಾಯಿಗಳು ಬಚಾವ್ ಆಗಿದ್ದವು.
ಅದರೆ, ಸಾಕಿದ ನಾಯಿಗೆ ಆರೈಕೆ ಹೆಚ್ಚಾಗೇ ಸಿಗುತ್ತದೆ. ಆದರೂ ಕೆಲ ಋತುಗಳಲ್ಲಿ ನಾಯಿಗಳಿಗೆ ಸ್ವತಂತ್ರವಾಗಿ ವಿಹರಿಸಲು, ಆಸೆಯಿಂದ ಕಾಣುವ ನಾಯಿಯನ್ನು ರಮಿಸಲು ಬಿಡದಿದ್ದರೆ ರೊಚ್ಚಿಗೇಳುತ್ತವೆ. ಈ ಪ್ರಕರಣದಲ್ಲೂ ಇದೇ ರೀತಿ ಆಗಿರುವ ಶಂಕೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಪತ್ನಿಯನ್ನು ಕಚ್ಚಿದ ನಾಯಿ ಬಾಂಡ್ ಜೊತೆಗೆ ಜೇಮ್ಸ್ ನನ್ನು ರಾಜ್ ಠಾಕ್ರೆ ಶಿಕ್ಷಿಸಿದ್ದಾರೆ. ಎರಡು ನಾಯಿಗಳನ್ನು ಮುಂಬೈನ ದಾದರ್ ನಿವಾಸವಾದ ಕೃಷ್ಣ ಕುಂಜ್ ನಿಂದ ನಾಯಿಗಳನ್ನು ಕರ್ಜಾತ್ ನಲ್ಲಿರುವ ತೋಟದ ಮನೆಗೆ ಕಳಿಸಿದ್ದಾರೆ.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications