ಬಿಜೆಪಿಯಿಂದ ಭಾರತಕ್ಕೆ ಮುಖಭಂಗ: ಉದ್ಧವ್ ಠಾಕ್ರೆ

ಮುಂಬೈ, ಜೂ. 9: "ಬಿಜೆಪಿಯ ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಕುರಿತ ವಿವಾದದಿಂದ ಭಾರತ ದೇಶ ಮುಜುಗರ ಅನುಭವಿಸುವಂತಾಗಿದೆ . ಇದಕ್ಕೆ ಗಲ್ಫ್‌ ದೇಶಗಳು ಭಾರತವನ್ನು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದೇ ಸಾಕ್ಷಿ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದರು.

ಭಾರತದಲ್ಲಿ ಹಣದುಬ್ಬರ ಏರಿಕೆಯಾಗುತ್ತಿದ್ದು, ರೂಪಾಯಿ ಮೌಲ್ಯವು ಕುಸಿಯುತ್ತಿದೆ. ಆದರೆ ಬಿಜೆಪಿ ಯಾವ ಮಸೀದಿಯ ಕೆಳಗೆ ಶಿವಲಿಂಗ ಇದೆ ಎಂದು ಹುಡುಕುತ್ತಿದೆ ಎಂದು ಮುಂಬೈ ಹೊರವಲಯದಲ್ಲಿ ನಡೆದ ರ್‍ಯಾಲಿಯೊಂದರಲ್ಲಿ ಹೇಳಿದರು.

ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡ ಅವರು, ಸರ್ಕಾರ ತಮ್ಮ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಮೂಲಕ ಮಹಾ ವಿಕಾಸ ಅಘಾಡಿ ನಾಯಕರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನುಪೂರ್‌ ಶರ್ಮಾ ಅವಹೇಳನಕಾರಿಯಾಗಿ ಮಾತನಾಡಿದ್ದು, ಮುಸ್ಲಿಂ ರಾಷ್ಟ್ರಗಳು ಭಾರತ ಕ್ಷಮೆ ಕೋರುವಂತೆ ಒತ್ತಾಯಿಸಿವೆ. ಭಾರತ ಏನು ಮಾಡಿದೆ? ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದರು.

 ದೇಶದ ಹಿರಿಮೆಗೆ ಧಕ್ಕೆ

ದೇಶದ ಹಿರಿಮೆಗೆ ಧಕ್ಕೆ

ಬಿಜೆಪಿ ವಕ್ತಾರರು ಇಲ್ಲವೇ ಬಿಜೆಪಿಯವರು ಹೇಳುವ ಮಾತುಗಳು ಯಾವುದೇ ವಿಷಯದ ಬಗ್ಗೆ ಭಾರತದ ನಿಲುವಾಗಲು ಸಾಧ್ಯವಿಲ್ಲ. ಬಿಜೆಪಿ ವಕ್ತಾರರು ಪ್ರವಾದಿ ಬಗ್ಗೆ ಬಳಸಿದ ಮಾತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳುಮಾಡಿದವು. ಇದು ನನ್ನ ದೇಶದ ಹಿರಿಮೆಗೆ ಧಕ್ಕೆ ತಂದಿದೆಯೇ ಹೊರತು ಬಿಜೆಪಿಯದ್ದಲ್ಲ. ಶಿವಸೇನೆ ಮತ್ತು ಬಿಜೆಪಿ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಆದರೆ ನರೇಂದ್ರ ಮೋದಿ ನಮ್ಮ ದೇಶದ ಪ್ರಧಾನಿ. ಅವರ ಫೊಟೋ ಕೆಲವು ದೇಶಗಳಲ್ಲಿ ಕಸದ ಬುಟ್ಟಿ ಸೇರಿದೆ ಇದನ್ನು ನಾವು ಕಂಡಿದ್ದೇವೆ. ಇದಕ್ಕೆ ದೇಶ ಯಾಕೆ ಕ್ಷಮೆ ಕೇಳಬೇಕು. ಆದರೆ ಬಿಜೆಪಿ ಮತ್ತು ಅದರ ವಕ್ತಾರರು ಮಾಡಿದ ತಪ್ಪಿಗೆ ದೇಶ ಏಕೆ ಕ್ಷಮೆಯಾಚಿಸಬೇಕು ಎಂದು ಠಾಕ್ರೆ ಹೇಳಿದರು.

 ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ

ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ

ಪ್ರವಾದಿ ಮೊಹಮ್ಮದ್ ಅವರ ವಿರುದ್ಧದ ಅವಹೇಳನಕಾರಿ ಹೇಳಿಕೆಗಳು ಕೆಲವು ಮುಸ್ಲಿಂ ರಾಷ್ಟ್ರಗಳಿಂದ ಪ್ರತಿಭಟನೆಯೊಂದಿಗೆ ಕಾಣಿಸಿಕೊಂಡ ನಂತರ ಬಿಜೆಪಿ ಭಾನುವಾರ ವಕ್ತಾರೆ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ ಮತ್ತು ದೆಹಲಿ ಘಟಕದ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.

 ಭಾರತೀಯ ಉತ್ಪನ್ನಗಳನ್ನು ಬಹಿಷ್ಕಾರ

ಭಾರತೀಯ ಉತ್ಪನ್ನಗಳನ್ನು ಬಹಿಷ್ಕಾರ

ಇತ್ತೀಚೆಗೆ ಟಿವಿ ಚರ್ಚೆಯಲ್ಲಿ ನುಪೂರ್‌ ಶರ್ಮಾ ಅವರ ಹೇಳಿಕೆಗಳು ಮತ್ತು ಜಿಂದಾಲ್ ಅವರ ಈಗ ಅಳಿಸಲಾದ ಕೆಲವು ಟ್ವೀಟ್‌ಗಳು ಕೆಲವು ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡುವ ಟ್ವಿಟ್ಟರ್ ಟ್ರೆಂಡ್‌ ಆಗಿತ್ತು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಿಜೆಪಿಯ ಈ ರೀತಿಯ ನಡವಳಿಕೆಯನ್ನು ನೀವು ನಿರೀಕ್ಷಿಸಿದ್ದೀರಾ ಎಂದು ನಾನು ಕೇಳಲು ಬಯಸುತ್ತೇನೆ. ಹಿಂದುತ್ವವನ್ನು ತೊರೆದಿದ್ದೇವೆ ಎಂದು ಹೇಳಲು ನಾವೇನು ​​ಮಾಡಿದ್ದೇವೆ. ಹಿಂದುತ್ವಕ್ಕಾಗಿ ಶಿವಸೇನೆ ಏನು ಮಾಡಿದೆ ಮತ್ತು ಬಿಜೆಪಿ ಅದಕ್ಕಾಗಿ ಏನು ಮಾಡಿದೆ ಎಂದು ಚರ್ಚಿಸೋಣ ಎಂದು ಅವರು ಹೇಳಿದರು.

 ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಅಧಿಕಾರ

ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಅಧಿಕಾರ

ತಮ್ಮ ತಂದೆ ಬಾಳ್ ಠಾಕ್ರೆ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳದಿದ್ದರೆ ಮತ್ತು ಶಿವಸೇನೆ ಸೈನಿಕರು ಬಾಬರಿಯನ್ನು ಧ್ವಂಸಗೊಳಿಸಿದ್ದರೆ ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯಿಂದ ಹಿಂದುತ್ವದ ಪಾಠಗಳನ್ನು ಕಲಿಯಲು ಶಿವಸೇನೆ ಪೊಳ್ಳು ಹಿಂದುತ್ವವಾದಿ ಅಲ್ಲ. ಅಯೋಧ್ಯೆ ಚಳವಳಿಯ ಸಂದರ್ಭದಲ್ಲಿ ಹಿಂದೂಗಳ ಕಲ್ಯಾಣದ ಬಗ್ಗೆ ಯೋಚಿಸುವವನು ದೇಶವನ್ನು ಆಳುತ್ತಾನೆ ಎಂಬ ಘೋಷಣೆ ಇತ್ತು ಎಂಬುದನ್ನು ಠಾಕ್ರೆ ನೆನಪಿಸಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+