8 ವರ್ಷದಿಂದ ಕಿಂಗ್ ಫಿಷರ್ ಲಾಭವನ್ನೇ ಮಾಡಿಲ್ಲ!
ಮುಂಬೈ, ಫೆ.12: ಒಟ್ಟು 17 ಸಾರ್ವಜನಿಕ ಬ್ಯಾಂಕುಗಳಿಗೆ 12,000 ಕೋಟಿ ರೂ ಸಾಲ ಉಳಿಸಿಕೊಂಡಿರುವ ಕನ್ನಡಿಗ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯು ಮೂರನೆಯ ತ್ರೈಮಾಸಿಕ ಫಲಿತಾಂಶದಲ್ಲಿಯೂ ಶೂನ್ಯ ಗಳಿಸಿದೆ. ಲಾಭ ಗಳಿಸುವುದು ಹಾಗಿರಲಿ 822 ಕೋಟಿ ರೂಪಾಯಿ ನಿವ್ವಳ ನಷ್ಟ ಅನುಭವಿಸಿದೆ.
ದುರಂತವೆಂದರೆ ಕಳೆದ 8 ವರ್ಷಗಳಿಂದ ಚಾಲ್ತಿಯಲ್ಲಿರುವ Kingfisher Airlines (KFA) ಸಂಸ್ಥೆಯು ಯಾವುದೇ ತ್ರೈಮಾಸಿಕದಲ್ಲೂ ಲಾಭ ದಾಖಲಿಸಿಲ್ಲ. ಬಹುಶಃ ಇದೇ KFAಯ ಇಡೀ ಕರ್ಮಕಾಂಡವನ್ನು ಬಿಡಿಸಿ ಹೇಳುತ್ತದೆ.

ಅಂದಹಾಗೆ 12,000 ಕೋಟಿ ರೂ ಸಾಲದ ಹೊರೆ ಹೊತ್ತಿರುವ ವಿಜಯ್ ಮಲ್ಯ ಅವರು ಇಂದು ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಐಪಿಎಲ್ ಕ್ರಿಕೆಟ್ಟನಿಂದ ಹಣ ಗಳಿಸಿ, KFA ಸಾಲವನ್ನು ಕಟ್ಟುವ ಮಲ್ಯರ ಪ್ರಯತ್ನವಾ ಇದು? ಗೊತ್ತಿಲ್ಲ. [ಕಿಂಗ್ ಫಿಷರ್ 12000 ಕೋಟಿ ಸಾಲ ನೀರಿನಲ್ಲಿ ಹೋಮ]
2012ರ ಅಕ್ಟೋಬರ್ ತಿಂಗಳಿಂದ KFA ವಿಮಾನಗಳು ಒಂದೂ ಮೇಲಕ್ಕೆ ಹಾರಿಲ್ಲ. ಹಾಗಾಗಿ, ಮತ್ತೊಂದು ತ್ರೈಮಾಸಿಕ ಫಲಿತಾಂಶದಲ್ಲಿ ಲಾಭ ಗಳಿಸಲು ಸಾಧ್ಯವಾಗದೆ ನಷ್ಟವನ್ನು ಕಂಡಿದೆ.
ಹಿಂದೊಮ್ಮೆ ಭಾರತದ ನಂಬರ್ 2ನೆಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆ ಸಂಪಾದಿಸಿದ್ದ KFA, ಡಿಸೆಂಬರ್ ಅಂತ್ಯಕ್ಕೆ 8.22 billion rupees ($132 million) ನಷ್ಟ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 7.55 billion rupees ನಷ್ಟ ಅನುಭವಿಸಿತ್ತು.
ವಿಜಯ್ ಮಲ್ಯ ಅವರ KFA ಸಂಸ್ಥೆಯು ಬ್ಯಾಂಕುಗಳಿಗೇ 12,000 ಕೋಟಿ ರೂ ಸಾಲ ಉಳಿಸಿಕೊಂಡಿಲ್ಲ. ಜತೆಗೆ ವಿಮಾನ ನಿಲ್ದಾಣಗಳಿಗೆ ಬಾಡಿಗೆ ಕಟ್ಟಬೇಕಿದೆ ಮತ್ತು ಭಾರಿ ಮೊತ್ತದ ತೆರಿಗೆಗಳನ್ನೂ ಉಳಿಸಿಕೊಂಡಿದೆ ಎಂಬುದು ಗಮನಾರ್ಹ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications