ಆ್ಯಂಬಿ ವ್ಯಾಲಿ ಹರಾಜು: ಕೇವಲ ಇಬ್ಬರಿಂದ ಮಾತ್ರ ಬಿಡ್
ಪುಣೆ ಬಳಿಯ ಆ್ಯಂಬಿ ವ್ಯಾಲಿ ಹರಾಜಿಗೆ ಕೇವಲ 2 ಕಂಪನಿಗಳಿಂದ ಬಿಡ್ ಸಲ್ಲಿಕೆ. ಸುಪ್ರೀಂ ಕೋರ್ಟ್ ನ ಸೂಚನೆಯಂತೆ ನಡೆಯುತ್ತಿರುವ ಹರಾಜು ಪ್ರಕ್ರಿಯೆ.
ಮುಂಬೈ, ಸೆಪ್ಟೆಂಬರ್ 18: ಸುಪ್ರೀಂ ಕೋರ್ಟ್ ನ ಆದೇಶದಂತೆ ಹಾರಾಜಿಗೆ ಸಿದ್ಧವಾಗಿರುವ ಆ್ಯಂಬಿ ವ್ಯಾಲಿಗಾಗಿ ಕೇವಲ ಎರಡು ಸಂಸ್ಥೆಗಳು ಮಾತ್ರ ಬಿಡ್ ಮಾಡಿವೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ಹೇಳಿದೆ.
'ಸಹಾರ' ಕಂಪನಿಯ ಒಡೆತನದ ಈ ವ್ಯಾಲಿಯನ್ನು ಹರಾಜು ಹಾಕುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು. ಅದರಂತೆ, ಮುಂಬೈ ಹೈಕೋರ್ಟ್ ನ ಲಿಕ್ವಿಡೇಟರ್ ವತಿಯಿಂದ ಸುಮಾರು 37 ಸಾವಿರ ಕೋಟಿ ರು. ಮೌಲ್ಯವನ್ನು ಈ ವ್ಯಾಲಿಗೆ ನಿಗದಿಗೊಳಿಸಲಾಗಿದೆ. ಅಕ್ಟೋಬರ್ 10, 11ರಂದು ಈ ವ್ಯಾಲಿಯ ಬಹಿರಂಗ ಹರಾಜು ನಡೆಯಲಿದ್ದು, ಈಗಾಗಲೇ ಇದಕ್ಕೆ ಬಿಡ್ ಆಹ್ವಾನಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಡ್ ಗೆ ಮುಕ್ತ ಆಹ್ವಾನ ನೀಡಲಾಗಿತ್ತು. ಈ ಐಶಾರಾಮಿ ಟೌನ್ ಶಿಪ್ ಕೊಳ್ಳಲು ನಾನಾ ಕಂಪನಿಗಳು ಭಾರೀ ಸ್ಪರ್ಧೆಯೊಡ್ಡಲಿವೆ ಎಂದೂ ನಿರೀಕ್ಷಿಸಲಾಗಿತ್ತು. ಆದರೆ, ನಿರೀಕ್ಷೆಯ ಸ್ಪರ್ಧೆಯ ಬಿಡ್ ಬಂದಿಲ್ಲ. ಕೇವಲ ಎರಡು ಕಂಪನಿಗಳು ಮಾತ್ರ ಇದಕ್ಕೆ ಬಿಡ್ ಸಲ್ಲಿಸಿವೆ ಎಂದು ಹೇಳಲಾಗಿದೆ.
ಬಿಡ್ ನ ಪ್ರತಿಯೊಂದು ನಡೆಗಳು ಸುಪ್ರೀಂ ಕೋರ್ಟ್ ನ ಹದ್ದಿನ ಕಣ್ಣಿನಡಿಯೇ ನಡೆಯುತ್ತಿರುವುದರಿಂದ ಈ ವ್ಯಾಲಿ ಖರೀದಿ ಹರಾಜಿನಲ್ಲಿ ಭಾಗವಹಿಸಲು ಹಲವಾರು ಕಂಪನಿಗಳು ಹಿಂದೇಟು ಹಾಕಿವೆ ಎಂದು ಹೇಳಲಾಗಿದೆ.
ಈ ಎರಡು ಕಂಪನಿಗಳ ಹೆಸರುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಬಹಿರಂಗಗೊಳಿಸಿಲ್ಲ. ಆದರೆ, ಈ ಕಂಪನಿಗಳಲ್ಲಿ ಒಂದು ಕಾರ್ಪೊರೇಟ್ ಜಗತ್ತಿನ ಸಂಸ್ಥೆಯಾದರೆ, ಮತ್ತೊಂದು ಬಂಡವಾಳ ಹೂಡಿಕೆ ಕ್ಷೇತ್ರದ ದೈತ್ಯ ಸಂಸ್ಥೆಯೆಂದು ಹೇಳಲಾಗಿದೆ.
ಆಸಕ್ತಿದಾಯಕವಾದ ಮತ್ತೊಂದು ವಿಚಾರವೆಂದರೆ, ಈ ಎರಡೂ ಕಂಪನಿಗಳು ಭಾರತದವಲ್ಲ ಎಂದೂ ಹೇಳಲಾಗಿದೆ. ಇವು ಚೀನಾ ಅಥವಾ ಜಪಾನ್ ಮೂಲದ ಕಂಪನಿಗಳಾಗಿರಬಹುದು ಎಂದು ಹೇಳಲಾಗಿದೆ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications