ಗಡ್ಕರಿ, ಭಾಗವತ್ ಭೇಟಿ : ಮಹಾರಾಷ್ಟ್ರ ಸಿಎಂ ಯಾರು?
ಮುಂಬೈ, ಅ.25 : ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವನ್ನು ನಾಗ್ಪುರದಲ್ಲಿ ಭೇಟಿ ಮಾಡಿ ಇಂದು ಮಾತುಕತೆ ನಡೆಸಿದ್ದು, ಹಲವಾರು ಕುತೂಹಲಗಳಿಗೆ ಕಾರಣವಾಗಿದೆ.
ಶನಿವಾರ
ನಾಗ್ಪುರದಲ್ಲಿರುವ
ಆರ್ಎಸ್ಎಸ್
ಮುಖ್ಯಸ್ಥ
ಮೋಹನ್
ಭಾಗವತ್
ನಿವಾಸಕ್ಕೆ
ಸ್ಕೂಟರ್ನಲ್ಲಿ
ಆಗಮಿಸಿದ
ಸಚಿವ
ನಿತಿನ್
ಗಡ್ಕರಿ
ಅವರು
ಭಾಗವತ್
ಅವರೊಂದಿಗೆ
ಕೆಲವು
ಹೊತ್ತು
ಮಾತುಕತೆ
ನಡೆಸಿದ್ದಾರೆ.
ಮಹಾರಾಷ್ಟ್ರ
ಸಿಎಂ
ಸ್ಥಾನದ
ಆಕಾಂಕ್ಷಿ
ದೇವೇಂದ್ರ
ಫಡ್ನವೀಸ್
ಅವರನ್ನು
ಶುಕ್ರವಾರ
ಭೇಟಿ
ಮಾಡಿದ್ದ
ಗಡ್ಕರಿ
ಇಂದು
ಭಾಗವತ್
ಭೇಟಿಯಾಗಿರುವುದು
ಕುತೂಹಲ
ಮೂಡಿಸಿದೆ.
ತಾನು ದೀಪಾವಳಿ ಶುಭಾಶಯಗಳನ್ನು ತಿಳಿಸುವುದಕ್ಕಾಗಿಯೇ ಭಾಗವತ್ ಅವರನ್ನು ಭೇಟಿ ಮಾಡಿದ್ದೆ ಎಂದು ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವೀಸ್ ಅವರನ್ನು ಬೆಂಬಲಿಸುವಂತೆ ಗಡ್ಕರಿ ಮಾತುಕತೆ ನಡೆಸಲು ಭಾಗವತ್ ನಿವಾಸಕ್ಕೆ ತೆರಳಿದ್ದರು ಎಂಬ ಮಾತುಗಳು ಇವೆ. [ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ?]
ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 288 ಕ್ಷೇತ್ರಗಳ ಪೈಕಿ 123 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಆದರೆ, ಸರಳ ಬಹುಮತಕ್ಕೆ 145 ಸೀಟುಗಳು ಅಗತ್ಯವಿದ್ದು, ಸರ್ಕಾರ ರಚನೆ ಮಾಡಲು ಬಿಜೆಪಿಗೆ ಇತರ ಪಕ್ಷಗಳ ಬೆಂಬಲ ಅನಿವಾರ್ಯವಾಗಿದೆ. ಆದ್ದರಿಂದ ಸಿಎಂ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿ ಹಲವು ಸಭೆಗಳನ್ನು ನಡೆಸುತ್ತಿದೆ.[ಮಹಾರಾಷ್ಟ್ರ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
ಗಡ್ಕರಿ ಅವರು ಮಹಾರಾಷ್ಟ್ರ ಸಿಎಂ ಆಗಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ, ಇದನ್ನು ಗಡ್ಕರಿ ಅವರು ತಳ್ಳಿಹಾಕಿದ್ದಾರೆ. ಅ.27ರಂದು ಬಿಜೆಪಿ ಶಾಸಕರ ಸಭೆ ನಡೆಯಲಿದ್ದು, ಅಂದು ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆ ಇದೆ.