700ಕೋಟಿ ರೂ.ಗಳ ವಂಚನೆ : ಹರ್ಷದ್ ಮೆಹ್ತಾ ಸೋದರ ತಪ್ಪಿತಸ್ಥ
ನ್ಯಾಷನಲ್ ಹೌಸಿಂಗ್ ಬ್ಯಾಂಕಿಗೆ 700 ಕೋಟಿ ರು ವಂಚನೆ ಮಾಡಿದ ಆರೋಪದ ಮೇಲೆ ಸುಧೀರ್ ಮೆಹ್ತಾ ಸೇರಿದಂತೆ ಐವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳು ಮತ್ತು ಷೇರು ದಲ್ಲಾಳಿಗಳ ಮೇಲಿನ ಆರೋಪ ಸಾಬೀತಾಗಿದೆ.
ಮುಂಬೈ, ನವೆಂಬರ್ 29: ಭಾರತದ ಅತಿದೊಡ್ಡ ಆರ್ಥಿಕ ಹಗರಣಗಳ ಪೈಕಿ ಒಂದೆನಿಸಿರುವ ಷೇರು ಹಗರಣರ ರೂವಾರಿ ಹರ್ಷದ್ ಮೆಹ್ತಾ ಅವರ ಸೋದರ ಸುಧೀರ್ ಅವರು ಬಹುಕೋಟಿ ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಇಲ್ಲಿನ ವಿಶೇಷ ನ್ಯಾಯಾಲಯ ಮಂಗಳವಾರ ಘೋಷಿಸಿದೆ.
ನ್ಯಾಷನಲ್
ಹೌಸಿಂಗ್
ಬ್ಯಾಂಕಿಗೆ
700
ಕೋಟಿ
ರು
ವಂಚನೆ
ಮಾಡಿದ
ಆರೋಪದ
ಮೇಲೆ
ಸುಧೀರ್
ಮೆಹ್ತಾ
ಸೇರಿದಂತೆ
ಐವರನ್ನು
ತಪ್ಪಿತಸ್ಥರೆಂದು
ಘೋಷಿಸಲಾಗಿದೆ.
ಬ್ಯಾಂಕ್
ಅಧಿಕಾರಿಗಳು
ಮತ್ತು
ಷೇರು
ದಲ್ಲಾಳಿಗಳ
ಮೇಲಿನ
ಆರೋಪ
ಸಾಬೀತಾಗಿದೆ.[ಭಾರತವನ್ನು
ಕಾಡುವ
25
ಭ್ರಷ್ಟಾಚಾರ
ಪ್ರಕರಣಗಳು]
1992ರ ಬಹುಕೋಟಿ ರೂಪಾಯಿಗಳ ಷೇರು ಹಗರಣ ಹಾಗೂ 700 ಕೋಟಿ ರೂ.ಗಳ ವಂಚನೆ ಪ್ರಕರಣದ ರೂವಾರಿ ಹರ್ಷದ್ ಮೆಹ್ತಾ ಅವರು 2002ರಲ್ಲಿ ನಿಧನರಾಗಿದ್ದಾರೆ.ಈಗ ಸುಧೀರ್ ಮೆಹ್ತಾ ಸೇರಿದಂತೆ ಆರು ಮಂದಿ ತಪ್ಪಿತಸ್ಥರಾಗಿದ್ದು, ಶಿಕ್ಷೆಯ ಪ್ರಮಾಣದ ತೀರ್ಪನ್ನು ನ್ಯಾಯಾಲಯ ಕಾದಿರಿಸಿದೆ.
ಸುಮಾರು ಎರಡು ದಶಕಗಳ ಕಾಲ ಕಾನೂನು ಸಮರ ನಡೆಸಿ ದೈಹಿಕವಾಗಿ, ಮಾನಸಿಕವಾಗಿ ಹಣ್ಣಾಗಿದ್ದೇವೆ ನಮ್ಮ ಮೇಲೆ ಕೃಪೆ ತೋರಿ ಎಂದು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಜಸ್ಟೀಸ್ ಶಾಲಿನಿ ಫನ್ಸಾಲ್ಕರ್ ಜೋಶಿ ತಿರಸ್ಕರಿಸಿದ್ದಾರೆ.[ಭಾರತವನ್ನು ತಲ್ಲಣಗೊಳಿಸಿದ ಟಾಪ್ 7 ಹಗರಣಗಳು]
ಹರ್ಷದ್ ಮೆಹ್ತಾ ಅವರ ಸೋದರ ಸುಧೀರ್, ಕಸಿನ್ ಸ್ಟಾಕ್ ಬ್ರೋಕರ್ ದೀಪಕ್ ಮೆಹ್ತಾ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಅಧಿಕಾರಿಗಳಾದ ಸಿ ರವಿ ಕುಮಾರ್, ಸುರೇಶ್ ಬಾಬು, ಎಸ್ ಬಿಐ ಅಧಿಕಾರಿ ಆರ್ ಸೀತಾರಾಮ್ನ್, ಸ್ಟಾಕ್ ಬ್ರೋಕರ್ ಅತುಲ್ ಪರೇಖ್ ಅವರು ದೋಷಿಗಳು ಎಂದು ನ್ಯಾಯಾಲಯ ಹೇಳಿದೆ.