ಮುಂಬೈನ ಟಿವಿ ಪತ್ರಕರ್ತನ ಮೇಲೆ ಕಣ್ಣು-ಮುಖ ಊದುವಂತೆ ದಾಳಿ, ಖಂಡನೆ
ಮುಂಬೈ, ಅಕ್ಟೋಬರ್ 14: ಅಪರಿಚಿತರ ಗುಂಪೊಂದು ಟಿ.ವಿ. ಪತ್ರಕರ್ತರೊಬ್ಬರ ಮೇಲೆ ಭಾನುವಾರ ಮಧ್ಯರಾತ್ರಿ ದಕ್ಷಿಣ ಮುಂಬೈನಲ್ಲಿ ಇರುವ ಅವರ ಮನೆಯ ಬಳಿಯೇ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುವ ಹರ್ಮನ್ ಗೋಮ್ಸ್ ಹಲ್ಲೆಗೊಳಗಾದವರು.
ಭಾನುವಾರ ಮಧ್ಯರಾತ್ರಿ ಕ್ಯಾಬ್ ನಲ್ಲಿ ಗೆಳೆಯರ ಜತೆಗೆ ಹರ್ಮನ್ ಮನೆಗೆ ವಾಪಸಾಗಿದ್ದರು. ಗಾಮ್ ದೇವಿ ಪ್ರದೇಶದಲ್ಲಿ ಇರುವ ತಮ್ಮ ಮನೆಯ ಬಳಿ ಕ್ಯಾಬ್ ಇಳಿದಾಗ, ಅವರಿಗಾಗಿಯೇ ಕಾಯುತ್ತಿದ್ದ ನಾಲ್ವರಿಂದ ಆರು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ಡಿಸಿಪಿ ಚವಾಣ್ ತಿಳಿಸಿದ್ದಾರೆ.
ಸೌದಿ ಪತ್ರಕರ್ತನ ನಾಪತ್ತೆಯ ರಹಸ್ಯ ಭೇದಿಸೀತೇ ಒಂದು ವಾಚ್?
ಗುಂಪಿನಲ್ಲಿ ಬಂದವರು ಮೊದಲಿಗೆ ಗೋಮ್ಸ್ ರನ್ನು ಬಯ್ಯಲು ಆರಂಭಿಸಿದ್ದಾರೆ. ಆ ನಂತರ ಹಲ್ಲೆ ನಡೆಸಿದ್ದಾರೆ. ಪತ್ರಕರ್ತ ಗೋಮ್ಸ್ ಗೆ ಗಂಭೀರ ಗಾಯಗಳಾಗಿವೆ. ಹಲ್ಲೆ ಮಾಡಿದವರು ವಿರುದ್ಧ ಸದ್ಯಕ್ಕೆ ವಿವಿಧ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ. ಈ ದಾಳಿ ಹಿಂದಿನ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ.
ಆಸ್ಪತ್ರೆ ನಿರ್ಲಕ್ಷ್ಯದಿಂದ ಪತ್ರಕರ್ತ ಸಾವು, ಆಸ್ಪತ್ರೆ ವಿರುದ್ಧ ಎಫ್ಐಆರ್
ಪತ್ರಕರ್ತರ ಒಕ್ಕೂಟವು ಈ ದಾಳಿಯನ್ನು ಖಂಡಿಸಿದೆ. ಹಲ್ಲೆಗೊಳಗಾದ ಪತ್ರಕರ್ತನ ದೂರನ್ನು ಸರಿಯಾಗಿ ತೆಗೆದುಕೊಂಡಿಲ್ಲ ಎಂದು ಪೊಲೀಸರ ವಿರುದ್ಧ ಆರೋಪ ಮಾಡಲಾಗಿದೆ. ಎಫ್ ಐಆರ್ ದಾಖಲಿಸಲು ತಡ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.