ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಗ್ಗಿ ಬಿದ್ದ ಮುಂಬೈ ಪೊಲೀಸರು, ಕಿಲಾಡಿ ಕೊಲೆಗಾರನ ಗ್ರೇಟ್ ಎಸ್ಕೇಪ್!

ನವೀ ಮುಂಬೈ ಪೊಲೀಸರು ಹಣದಾಸೆಗೆ ಮಾಡಿದ ಕೆಲಸಕ್ಕೆ ಅಮಾನತಾಗಿ ಮನೆಯಲ್ಲಿ ಕೂರುವಂತಾಗಿದೆ. ಕಿಲಾಡಿ ಕೊಲೆಗಾರ ತಪ್ಪಿಸಿಕೊಳ್ಳಲು ಹೂಡಿದ ಉಪಾಯಕ್ಕೆ ಪೊಲೀಸರು ಸರಿಯಾಗಿ ಪಿಗ್ಗಿ ಬಿದ್ದಿದ್ದಾರೆ

|
Google Oneindia Kannada News

ಮುಂಬೈ, ಫೆಬ್ರವರಿ 15: ಇಂಥ ಮಜವಾದ ಘಟನೆಗಳನ್ನು ಸಿನಿಮಾದಲ್ಲಿ ನೋಡೋದಿಕ್ಕೆ ಸಾಧ್ಯವೇನೋ, ಆದರೆ ನವೀ ಮುಂಬೈ ಪೊಲೀಸರ ಹಣದಾಸೆಯಿಂದ ಹೀಗೆ ನಿಜ ಜೀವನದಲ್ಲೂ ಓದೋದಿಕ್ಕೆ ಸಿಕ್ಕಿದೆ. ಹನುಮಂತ ಸದಾಶಿವ ಪಾಟಿಲ್ ಅಲಿಯಾಸ್ ಪ್ರೇಮ್ ನ 2013ರಲ್ಲಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ಕಳೆದ ಹದಿನೆಂಟು ತಿಂಗಳಿಂದ ಅತ ಜೈಲಿನಲ್ಲೇ ಇದ್ದಾನೆ. ಈಚೆಗೆ ತನಗೆ ಹುಷಾರಿಲ್ಲ ಅಂತ ಆತ ಅಲವತ್ತುಕೊಂಡಿದ್ದಕ್ಕೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಅವನ ಜೊತೆಗೆ ಹತ್ತು ಮಂದಿ ಪೊಲೀಸರೂ ಹೋಗಿದ್ದಾರೆ. ಆ ಮಹಾನ್ ಕಿಲಾಡಿ, ನಲವತ್ತು ಸಾವಿರ ರುಪಾಯಿ ಕೊಡ್ತೀನಿ. ಇಲ್ಲೇ ಹತ್ತಿರದ ಹೋಟೆಲ್ ನಲ್ಲಿ ನನ್ನ ಹೆಂಡತಿ ಇದ್ದಾಳೆ. ಅವಳ ಜೊತೆಗೆ ಸ್ವಲ್ಪ ಹೊತ್ತು ಕಳೆದು ಬರ್ತೀನಿ ಅಂದಿದ್ದಾನೆ.[ಕರುಣಾನಿಧಿ ಪತ್ನಿಗೆ ಆಟಿಕೆ ಪಿಸ್ತೂಲು ತೋರಿ ಬೆದರಿಸಿದ ಬೆಂಗಳೂರಿಗನ ಬಂಧನ]

escape

ಅದಕ್ಕೆ ಒಪ್ಪಿರುವ ಪೊಲೀಸರು, ಮೂರು ಮಂದಿ ಆತನ ಜೊತೆಗೆ ಹೋಟೆಲ್ ಗೆ ಹೋಗಿದ್ದಾರೆ. ಒಬ್ಬರು ರೂಮಿನ ಹೊರಗೆ, ಮತ್ತಿಬ್ಬರು ಹೋಟೆಲ್ ನ ಹೊರಗೆ ಅತನಿಗಾಗಿ ಕಾಯುತ್ತಾ ನಿಂತಿದ್ದಾರೆ. ಇತ್ತ ರೂಮಿಗೆ ಹೋದವನೇ ಕಿಟಕಿ ಜಿಗಿದು ಪರಾರಿಯಾಗಿದ್ದಾನೆ ಹನುಮಂತ್ ಸದಾಶಿವ ಪಾಟೀಲ್. ಅದನ್ನು ಕೂಡ ಹೋಟೆಲ್ ಮ್ಯಾನೇಜರ್ ಬಂದು ಈ ಪೊಲೀಸರಿಗೆ ಹೇಳಿದ ಮೇಲೆ ಗೊತ್ತಾಗಿದೆ.[ವಿಮಾನ ನಿಲ್ದಾಣಕ್ಕೆ ಸುಳ್ಳು ಬಾಂಬ್ ಕರೆ, ನಿಶ್ಚಿತಾರ್ಥದ ಜೋಡಿಯ ಕಿಲಾಡಿ ಐಡಿಯಾ]

ಇನ್ನೆಲ್ಲಿ ತಮ್ಮ ತಲೆಗೆ ಬರುತ್ತೋ ಎಂದು ಆಸ್ಪತ್ರೆಯಿಂದಲೇ ಆರೋಪಿ ನಾಪತ್ತೆಯಾಗಿದ್ದಾನೆ ಎಂದು ಕಥೆ ಹೊಸೆದಿದ್ದಾರೆ ಪೊಲೀಸರು. ಆದರೆ ಇವರೆಲ್ಲರೂ ಬಂದಿದ್ದು, ಆತನಿಗಾಗಿ ಕಾಯುತ್ತಾ ಕೂತಿದ್ದು ಹೋಟೆಲ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆರೋಪಿ ಕಾವಲಿಗೆ ಹತ್ತು ಪೊಲೀಸರನ್ನು ಕಳಿಸಿದ್ದರಲ್ಲಾ, ಅವರೆಲ್ಲರನ್ನೂ ಅಮಾನತು ಮಾಡಲಾಗಿದೆ.

English summary
In an interesting turn of events, 10 policemen from the jail escort party of Navi Mumbai police have come under the scanner for helping a prisoner awaiting trial to flee from the hospital, allegedly so he could spend some 'quality time' with his wife at a south Mumbai hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X