ಮುಂಬೈನಲ್ಲಿ ಮಾತುಂಗ ಕರ್ನಾಟಕ ಸಂಘದ ಕಲೋತ್ಸವ
ಮುಂಬೈ,ಏ. 19: ಮಾತುಂಗ ಕರ್ನಾಟಕ ಸಂಘವು ಇತ್ತೀಚೆಗೆ ಮಹಾನಗರದಲ್ಲಿ ಸುಂದರ ಕಲೋತ್ಸವವನ್ನು ಆಯೋಜಿಸಿತ್ತು. ಪ್ರತಿಷ್ಠಿತ ಕಲಾಭಾರತಿ ವೇದಿಕೆಯಲ್ಲಿ ಭಕ್ತಿ ಪ್ರಾಧಾನ್ಯತೆಯ ಜತೆಗೆ ಹದವಾಗಿ ಬೆರೆತ ಸ್ವರತರಂಗಗಳು ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ನೃತ್ಯಾಂಜಲಿ ಫೈನ್ ಆರ್ಟ್ಸ್ ಅಕಾಡೆಮಿ- ಕಂಡೀವಳಿ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತು.
ಸುಮಾರು 2 ಗಂಟೆಗಳ ಈ ನೃತ್ಯ-ನಾದ ನಿನಾದವು ಭಕ್ತಿ ವೈಭವಂ ಮತ್ತು ರುದ್ರ ನಾಟ್ಯಂನೊಂದಿಗೆ ಅರ್ಥಗರ್ಭಿತ ಆರಂಭ ಪಡೆಯಿತು. ಸುಖ ಕರತ ಮರಾಠಿ ಆರತಿ ಮತ್ತು ಶ್ರೀ ವಿಘ್ನರಾಜಂ ಹಾಡಿನೊಂದಿಗೆ ಕಿರಿಯ ಕಲಾವಿದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಕಾಡೆಮಿಯ ನಿರ್ದೇಶಕರೂ ಮತ್ತು ಗುರುಗಳಾದ ರೇವತಿ ಶ್ರೀನಿವಾಸ ರಾಘವನ್ ಕೊರಿಯಾಗ್ರಫಿ ಮಾಡಿದ್ದರು. ಸತೀಶ್ ಕೃಷ್ಣಮೂರ್ತಿ ಇದಕ್ಕೆ ಸಾಥ್ ನೀಡಿದ್ದರು. ಕೇರಳದ ಶ್ರೇದೇವ ರಾಜಗೋಪಾಲ್ ಅವರ ಹಾಡುಗಾರಿಕೆ, ಸತೀಶ್ ಕೃಷ್ಣಮೂರ್ತಿ ಅವರ ಮೃದಂಗ, ವಯೊಲಿನ್ ಶಿವಕುಮಾರ್ ಅನಂತರಾಮನ್, ಕೊಳಲು ಅತುಲ್ ಶರ್ಮಾ ಮತ್ತು ಘಟಂ ಶಕ್ತಿಧರಂ ಅವರ ಕೈಚಳಕದಲ್ಲಿ ಮೇಳೈಸಿತು. ಒಟ್ಟಾರೆಯಾಗಿ ಜನ ಮಂತ್ರಮುಗ್ಧರಾಗಿ ಕಾರ್ಯಕ್ರಮವನ್ನು ಆಸ್ವಾದಿಸಿದರು.

-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications