Get Updates
Get notified of breaking news, exclusive insights, and must-see stories!

ಎಂಎಲ್‌ಸಿ ಚುನಾವಣೆ: ನಾಗ್‌ಪುರ, ಅಕೋಲಾ-ಬುಲ್ಧಾನ-ವಾಶಿಂ ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು

ಮುಂಬೈ ಡಿಸೆಂಬರ್ 14: ಕಳೆದ ಶುಕ್ರವಾರ (ಡಿಸೆಂಬರ್ 10) ನಡೆದ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯ ಫಲಿತಾಂಶ ಬಹಿರಂಗಗೊಂಡಿದ್ದು ನಾಗ್ಪುರ ಮತ್ತು ಅಕೋಲಾ-ವಾಶಿಂ-ಬುಲ್ಧಾನಾ ಸ್ಥಾನಗಳನ್ನು ಬಿಜೆಪಿ ಭಾರೀ ಮತಗಳ ಅಂತರದಲ್ಲಿ ಗೆದ್ದುಕೊಂಡಿದೆ. ನಾಗ್ಪುರದಲ್ಲಿ ಬಿಜೆಪಿಯ ಚಂದ್ರಶೇಖರ ಬಾವಂಕುಲೆ ಅವರು ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಮಂಗೇಶ್ ದೇಶಮುಖ ಅವರನ್ನು 176 ಮತಗಳಿಂದ ಸೋಲಿಸಿದರು. ಬಾವಂಕುಲೆ 362 ಮತಗಳನ್ನು ಪಡೆದುಕೊಂಡರೆ, ದೇಶಮುಖ್ 186 ಮತಗಳನ್ನು ಪಡೆದುಕೊಂಡಿದ್ದಾರೆ. ರವೀಂದ್ರ ಅಲಿಯಾಸ್ ಚೋಟು ಭೋಯರ್ ಅವರು ಕೇವಲ ಒಂದು ಮತವನ್ನು ಪಡೆದರು.

ಅಕೋಲಾ-ವಾಶಿಮ್-ಬುಲ್ಧಾನದಲ್ಲಿ, ವಸಂತ್ ಖಂಡೇಲ್ವಾಲ್ 443 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಮತ್ತು ಮೂರು ಅವಧಿಯ ಶಿವಸೇನೆ ಶಾಸಕ ಗೋಪಿಕಿಶನ್ ಬಜೋರಿಯಾ (334 ಮತಗಳು) ವಿರುದ್ಧ ಗೆಲುವು ದಾಖಲಿಸಿದರು. ಬಿಜೆಪಿ ಈ ಸ್ಥಾನವನ್ನು ವಶಪಡಿಸಿಕೊಂಡಿದೆ. ಚುನಾವಣಾ ಆಯೋಗದ ಪ್ರಕಾರ, ಅಕೋಲಾ-ವಾಶಿಮ್-ಬುಲ್ಧಾನದಲ್ಲಿ 31 ಮತ್ತು ನಾಗ್ಪುರದಲ್ಲಿ ಐದು ಮತಗಳು ಅಸಿಂಧುವಾಗಿವೆ.

ಈ ಎರಡು ಕೌನ್ಸಿಲ್ ಚುನಾವಣೆಗಳ ಪ್ರಮುಖ ಅಂಶವೆಂದರೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮತಗಳು ಬಿಜೆಪಿಗೆ ಪಕ್ಷಾಂತರವಾಗಿದೆ ಎನ್ನಲಾಗುತ್ತಿದೆ. "ನಾಗ್ಪುರ ಮತ್ತು ಅಕೋಲಾ-ವಾಶಿಮ್-ಬುಲ್ಧಾನ ಎರಡರಲ್ಲೂ ಬಿಜೆಪಿ ಅಭ್ಯರ್ಥಿಗಳು ಎಂವಿಎಯಿಂದ ಕೆಲವು ಮತಗಳನ್ನು ಪಡೆದರು" ಎಂದು ರಾಜ್ಯ ಕೌನ್ಸಿಲ್‌ನಲ್ಲಿ ಬಿಜೆಪಿಯ ನಾಯಕ ಪ್ರವೀಣ್ ದಾರೆಕರ್ ಹೇಳಿದ್ದಾರೆ.

MLC elections: Major setback for MVA as BJP win Nagpur, Akola-Buldhana-Washim seats

"ನಾಗ್ಪುರ ಕೌನ್ಸಿಲ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 318 ಮತಗಳನ್ನು ಹೊಂದಿದ್ದವು. ಎಂವಿಎ (ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆ) 240 ಮತಗಳನ್ನು ಹೊಂದಿತ್ತು. ಬಿಜೆಪಿ 362 ಮತಗಳನ್ನು ಪಡೆದಿದೆ, ಅಂದರೆ 44 ಮತಗಳು ಹೆಚ್ಚುವರಿಯಾಗಿವೆ. ಮತ್ತೊಂದೆಡೆ, MVA ತಮ್ಮ 240 ಮತಗಳನ್ನು ಉಳಿಸಿಕೊಳ್ಳಲು ವಿಫಲವಾಯಿತು. ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದೇಶಮುಖ್ 186 ಮತಗಳನ್ನು ಪಡೆದರು ಮತ್ತು ಭೋಯಾರ್ ಕೇವಲ ಒಂದು ಮತಗಳನ್ನು ಪಡೆದರು. ಹಾಗಾಗಿ, ಎಂವಿಎ ತನ್ನ ಮತಗಳನ್ನು ಹಾಗೆಯೇ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅದು ಬಹಿರಂಗಪಡಿಸಿದೆ," ಎಂದು ದಾರೆಕರ್ ಹೇಳಿದರು.

ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ಬವಾನ್ಕುಲೆ ಮತ್ತು ಖಂಡೇಲ್ವಾಲ್ ಅವರನ್ನು ಅಭಿನಂದಿಸಿದರು. "ಈ ಎರಡೂ ಗೆಲುವುಗಳು ವಿಶೇಷ ಮತ್ತು ಪ್ರತಿಯೊಬ್ಬ ಕಾರ್ಯಕರ್ತರ ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ನಾಗ್ಪುರ ಮತ್ತು ಅಕೋಲಾ-ವಾಶಿಂ-ಬುಲ್ಧಾನದಲ್ಲಿ ಭಾರಿ ಅಂತರದ ಗೆಲುವು ಬಿಜೆಪಿಯ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆರು ಸ್ಥಾನಗಳ ಪೈಕಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆದ್ದಿದೆ. ರಾಜ್ಯ ಪರಿಷತ್ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ಗೆ ನಾಗ್ಪುರದಲ್ಲಿನ ಹಿನ್ನಡೆಯು ಪಕ್ಷದ ಅಧ್ಯಕ್ಷ ನಾನಾ ಪಟೋಲೆ ಅವರ ಕಾರ್ಯತಂತ್ರಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಹಿಂದೆ ಧುಲೆ-ನಂದೂರ್‌ಬಾರ್ ಮತ್ತು ಎರಡು ಮುಂಬೈ ಸ್ಥಾನಗಳಲ್ಲಿ ಒಂದರಿಂದ ಅವಿರೋಧವಾಗಿ ಗೆದ್ದಿದ್ದ ಪಕ್ಷವು ಈಗ ಆರು ವಿಧಾನ ಪರಿಷತ್ ಸ್ಥಾನಗಳ ಪೈಕಿ ನಾಲ್ಕರಲ್ಲಿ ವಿಜಯಶಾಲಿಯಾಗಿದೆ. ಕಾಂಗ್ರೆಸ್ (ಕೊಲ್ಹಾಪುರ) ಮತ್ತು ಶಿವಸೇನೆ (ಮುಂಬೈ) ಇತರ ಎರಡು ಸ್ಥಾನಗಳನ್ನು ಅವಿರೋಧವಾಗಿ ಪಡೆದುಕೊಂಡಿವೆ.

"ಬಿಜೆಪಿ ಕಾರ್ಪೊರೇಟರ್ ಚೊಟ್ಟು ಭೋಯರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸುವ ಮತ್ತು ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡುವ ನಿರ್ಧಾರ ಹಿನ್ನಡೆಯಾಯಿತು. ಕೊನೆಯ ಕ್ಷಣದಲ್ಲಿ ನಾವು ಅಧಿಕೃತ ಅಭ್ಯರ್ಥಿ ಭೋಯರ್‌ಗೆ ಬೆಂಬಲ ಹಿಂಪಡೆದು ಸ್ವತಂತ್ರ ಅಭ್ಯರ್ಥಿ ದೇಶಮುಖ್‌ಗೆ ಬೆಂಬಲ ನೀಡಿದ್ದೇವೆ. ಇದು ಸೋಲಿಗೆ ಕಾರಣವಾಗಿದೆ. ಏನು ತಪ್ಪಾಗಿದೆ ಎಂಬುದನ್ನು ನಾವು ವಿಶ್ಲೇಷಿಸುತ್ತೇವೆ. ಆದರೆ ನಾಗ್ಪುರದಲ್ಲಿ ಕೇವಲ ಒಂದು ಗೆಲುವು ಇದು ಇಡೀ ರಾಜ್ಯವನ್ನು ಗೆದ್ದಂತೆ ಅಲ್ಲ" ಎಂದು ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+