ನಟಿ ಕರೀನಾ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ ವ್ಯಕ್ತಿ ಬಂಧನ
ಹುಚ್ಚು ಅಭಿಮಾನ ಏನೆಲ್ಲ ಮಾಡಿಸಬಹುದು ಎಂಬುದಕ್ಕೆ ಇಲ್ಲೊಂದು ಪ್ರಸಂಗವಿದೆ. ನಟಿ ಕರೀನಾ ಕಪೂರ್ ಅವರ ಸಂಪರ್ಕ ಸಂಖ್ಯೆ ಪಡೆಯಲು ಅವರ ಆದಾಯ ತೆರಿಗೆ ಪಾವತಿ ಖಾತೆಗೆ ಅಭಿಮಾನಿಯೊಬ್ಬ ಕನ್ನ ಹಾಕಿದ್ದಾನೆ.
ಮುಂಬೈ, ಜನವರಿ 03: ಹುಚ್ಚು ಅಭಿಮಾನ ಏನೆಲ್ಲ ಮಾಡಿಸಬಹುದು ಎಂಬುದಕ್ಕೆ ಇಲ್ಲೊಂದು ಪ್ರಸಂಗವಿದೆ. ನಟಿ ಕರೀನಾ ಕಪೂರ್ ಅವರ ಸಂಪರ್ಕ ಸಂಖ್ಯೆ ಪಡೆಯಲು ಅವರ ಆದಾಯ ತೆರಿಗೆ ಪಾವತಿ ಖಾತೆಗೆ ಅಭಿಮಾನಿಯೊಬ್ಬ ಕನ್ನ ಹಾಕಿದ್ದಾನೆ.
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರ ಐ-ಟಿ ಅಕೌಂಟ್ನ್ನು ಹ್ಯಾಕ್ ಮಾಡಿದ್ದ ವ್ಯಕ್ತಿಯನ್ನು ಸೈಬರ್ ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಆದರೆ, ತಮಾಷೆ ವಿಷಯವೆಂದರೆ, ಐಟಿ ರಿಟರ್ನ್ ಅಕೌಂಟ್ ಹಾಕಿ ಮಾಡಿದ್ದ ವ್ಯಕ್ತಿ ಪ್ಯಾರಾಮಿಲಿಟರಿ ದಳದ ಸಿಬ್ಬಂದಿಯಾಗಿದ್ದಾನೆ. 26 ವರ್ಷ ವಯಸ್ಸಿನ ಈತ ಕರೀನಾ ಅವರ ಬಾಕಿ ಉಳಿದಿರುವ ಐಟಿ ರಿಟರ್ನ್ಸ್ ಫೈಲ್ ಮಾಡಿದ್ದಾನೆ.

ಛತ್ತೀಸ್ಗಢದಲ್ಲಿ ಅರೆ ಸೇನಾಪಡೆಯಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮನೀಶ್ ತಿವಾರಿ ಎಂಬ ವ್ಯಕ್ತಿಯೇ ಕರೀನಾ ಅವರ ಕಟ್ಟಾ ಅಭಿಮಾನಿ ಎಂದು ಹಲವೆಡೆ ವರದಿ ಮಾಡಲಾಗಿದೆ. ಆದರೆ, ಸೈಬರ್ ಪೊಲೀಸರು ಹೆಸರು ವಿವರಗಳನ್ನು ನೀಡಿಲ್ಲ.
ಪತ್ತೆ ಹಚ್ಚಿದ್ದು ಹೇಗೆ? : 2016-17ರಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡಲು ಕರೀನಾ ಕಪೂರ್ ಅವರ ಚಾರ್ಟರ್ಡ್ ಅಕೌಂಟೆಂಟ್(ಸಿಎ) ಪ್ರಕಾಶ್ ತಕ್ಕರ್ ಅವರು ಖಾತೆಯನ್ನು ತೆಗೆದು ನೋಡಿದರೆ ಆಶ್ಚರ್ಯವಾಗಿದೆ. ಬಾಕಿ ಉಳಿದ ತೆರಿಗೆಯನ್ನು ಪಾವತಿಸಲಾಗಿತ್ತು. ಕರೀನಾ ಅವರ ಆದಾಯ 8 ಲಕ್ಷ ರು ಎಂದು ತೋರಿಸುತ್ತಿತ್ತು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಮುಂಬೈ ಪೊಲೀಸರಿಗೆ ದೂರು ನೀಡಲಾಗಿತ್ತು.
ಕಳೆದ ಆಗಸ್ಟ್ ತಿಂಗಳಿನಲ್ಲಿ ನಟಿ ಕರೀನಾ ಅವರ ಪೋನ್ ನಂಬರ್ ಗಾಗಿ ಅರೋಪಿ ತಿವಾರಿ ಇಂಟರ್ನೆಟ್ ನಲ್ಲಿ ಜಾಲಾಡಿದ್ದ. ಕೊನೆಗೆ ಆಕೆಯ ಪ್ಯಾನ್ ನಂಬರ್ ಸಿಕ್ಕಿತ್ತು. ನಂತರ ಕರೀನಾಳ ಆದಾಯ ತೆರಿಗೆ ಖಾತೆಯನ್ನು ಹ್ಯಾಕ್ ಮಾಡಿದ್ದಲ್ಲದೆ, ಐಟಿ ರಿಟರ್ನ್ಸ್ ಫೈಲ್ ಮಾಡಿದ್ದ.
ಕೊನೆಗೆ ಈ ರೀತಿ ತೆರಿಗೆ ಪಾವತಿ ಮಾಡಿದ್ದು ಮೊಬೈಲ್ ಮೂಲಕ ಎಂದು ಪೊಲೀಸರಿಗೆ ತಿಳಿದು ಬಂದಿತು, ಮಂಗಳವಾರ ಅರೋಪಿಯನ್ನು ಬಂಧಿಸಿ, ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. (ಒನ್ಇಂಡಿಯಾ ಸುದ್ದಿ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications