ಯುವತಿಯರನ್ನು ಮಾದಕ ಜಾಲದಲ್ಲಿ ಕೆಡವಿದ್ದ ಗುರುವಿನ ಬಂಧನ
ಮುಂಬೈ, ಏಪ್ರಿಲ್ 20 : ಯುವತಿಯರನ್ನು ಪುಸಲಾಯಿಸಿ ಅವರನ್ನು ಮಾದಕವ್ಯಸನಿಯನ್ನಾಗಿ ಮಾಡುತ್ತಿದ್ದ ಮತ್ತು ಅವರನ್ನು ಲೈಂಗಿಕವಾಗಿ ದುರ್ಬಳಸಿಕೊಳ್ಳುತ್ತಿದ್ದ ಧಾರ್ಮಿಕ ಪಂಗಡದ ಗುರುವನ್ನು ಗುರುವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ತಮ್ಮ ಮಕ್ಕಳನ್ನು ಮರಳು ಮಾಡಿ ಅವರು ಮಾದಕ ದ್ರವ್ಯ ಸೇವಿಸುವಂತೆ ಮಾಡಿದ್ದ ಸುನೀಲ್ ಕುಲಕರ್ಣಿಯನ್ನು ಬಂಧಿಸಲಾಗಿದೆ. ಆ ಯುವತಿಯರ ಪೋಷಕರು ಮುಂಬೈ ಹೈಕೋರ್ಟಿನಲ್ಲಿ ಸುನೀಲ್ ವಿರುದ್ಧ ಹೂಡಿದ್ದ ದಾವೆಯ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಸುನೀಲ್ ಬಂಧನವಾಗಿದೆ.

ಶಿಫು ಸುಂಕೃತಿ ಎಂಬ ಸಂಘಟನೆಯ ಮುಖ್ಯಸ್ಥನಾಗಿರುವ ಸುನೀಲ್ ಕುಲಕರ್ಣಿ ತನ್ನನ್ನು ತಾನು ಮಾನಸಿಕತಜ್ಞ ಎಂದು ಬಿಂಬಿಸಿಕೊಂಡಿದ್ದ. ಆತನ ಮೇಲೆ ಮಾನವ ಸಾಕಾಣಿಕೆ, ಮೋಸ, ಅಶ್ಲೀಲತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ದುರ್ಬಳಕೆ ಮಾಡಿಕೊಂಡ ದೂರನ್ನು ಮಲಾದ್ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಇಪ್ಪತ್ತರ ಹರೆಯದಲ್ಲಿದ್ದ ನಾಲ್ವರು ಯುವತಿಯರನ್ನು ಪುಸಲಾಯಿಸಿ ಅವರು ಮಾದಕವ್ಯಸನಿಯಾಗುವಂತೆ ಆತ ಮಾಡಿದ್ದ. ನಂತರ ಆ ಯುವತಿಯರು ತಮ್ಮ ಮನೆಯನ್ನೇ ಬಿಟ್ಟು ತೊಲಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರ ಇರುವು ಗೊತ್ತಾದ ಮೇಲೆ ಮನೆಗೆ ಮರಳಲು ಅವರು ನಿರಾಕರಿಸಿದ್ದರು ಎಂದು ಮುಂಬೈ ಹೈಕೋರ್ಟಿಗೆ ತಿಳಿಸಲಾಗಿದೆ.
ಇಷ್ಟು ಗಂಭೀರವಾದ ಪ್ರಕರಣವನ್ನು ಏಕೆ ಹಗುರವಾಗಿ ತೆಗೆದುಕೊಂಡಿದ್ದೀರಿ ಎಂದು ಮುಂಬೈ ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇದು ಸೆಕ್ಸ್ ಮತ್ತು ಡ್ರಗ್ಸ್ ಕೇಸಲ್ಲದೆ ಮತ್ತೇನೂ ಅಲ್ಲ. ಹಲವು ಯುವಕ ಯುವತಿಯರು ಈ ಜಾಲದಲ್ಲಿ ಸಿಲುಕುತ್ತಿದ್ದಾರೆ. ನೀವೇನು ಮಾಡುತ್ತಿದ್ದೀರಿ ಎಂದು ಹೈಕೋರ್ಟ್ ಕೇಳುತ್ತಿದ್ದಂತೆ ಪೊಲೀಸರು ಸುನೀಲ್ ಕುಲಕರ್ಣಿಯನ್ನು ಬಿಡುಗಡೆ ಮಾಡಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications