ಒಂದು ಮಗುವಿನ ಬೆಲೆ 45 ಲಕ್ಷ! ಹೀಗೆ ಮಾರಾಟವಾಗಿರುವುದು 300 ಮಕ್ಕಳು
ಮುಂಬೈ, ಆಗಸ್ಟ್ 16: ಭಾರತದಿಂದ ಮಕ್ಕಳನ್ನು ಅಮೆರಿಕಕ್ಕೆ ಮಾರಾಟ ಮಾಡುವ ದಂಧೆಯ ಕರಾಳ ಮುಖವೊಂದು ಬಹಿರಂಗವಾಗಿದೆ.
ಮುಂಬೈ ಪೊಲೀಸರು ಅಂತಾರಾಷ್ಟ್ರೀಯ ಮಕ್ಕಳ ಕಳ್ಳಸಾಗಣೆಯ ಕಿಂಗ್ ಪಿನ್ನನ್ನು ಬಂಧಿಸಿದ್ದು, 2007ರಿಂದ ಈಚೆಗೆ ಆತ ಕನಿಷ್ಠ 300 ಮಕ್ಕಳನ್ನು ಅಮೆರಿಕ ಮೂಲದ 'ಗ್ರಾಹಕ'ರಿಗೆ ಮಾರಾಟ ಮಾಡಿದ್ದಾನೆ. ಒಂದು ಮಗುವಿಗೆ ಆತ ತೆಗೆದುಕೊಂಡಿರುವ ಹಣ 45 ಲಕ್ಷ ರೂಪಾಯಿ.
ಗುಜರಾತ್ ನಿವಾಸಿಯಾದ ರಾಜುಭಾಯಿ ಗಮ್ಲೇವಾಲ ಅಲಿಯಾಸ್ ರಾಜುಭಾಯಿ ಬಂಧಿತ ಆರೋಪಿ. ಇದಕ್ಕೂ ಮೊದಲು ಈ ದಂಧೆಯಲ್ಲಿ ತೊಡಗಿದ್ದ ಕೆಲವರನ್ನು ಮಾರ್ಚ್ನಲ್ಲಿ ಬಂಧಿಸಲಾಗಿತ್ತು. ಮಾರಾಟವಾದ ಮಕ್ಕಳ ಭವಿಷ್ಯ ಏನಾಗಿದೆ ಎಂಬ ಮಾಹಿತಿ ದೊರೆತಿಲ್ಲ.

ಹೀಗೆ ಮಾರಾಟವಾದ ಮಕ್ಕಳಲ್ಲಿ ಹೆಚ್ಚಿನವರು ಗುಜರಾತ್ನ ಬಡಕುಟುಂಬದವರಾಗಿದ್ದು, ಎಲ್ಲರೂ 11-16 ವರ್ಷ ವಯಸ್ಸಿನವರಾಗಿದ್ದಾರೆ. ಕಡುಬಡಕುಟುಂಬದ ಪೋಷಕರು ಮಕ್ಕಳನ್ನು ಸಾಕಲು ಸಾಧ್ಯವಾಗದ ಕಾರಣ ಅವರನ್ನು ಮಾರಾಟ ಮಾಡುತ್ತಾರೆ.
ಅಮೆರಿಕದ ತನ್ನ ಗ್ರಾಹಕರಿಂದ ಬೇಡಿಕೆ ಬಂದ ಕೂಡಲೇ ರಾಜುಭಾಯಿ, ಗುಜರಾತ್ನಲ್ಲಿ ತಮ್ಮ ಮಕ್ಕಳನ್ನು ಮಾರಾಟ ಮಾಡಲು ಬಯಸಿರುವ ಬಡ ಕುಟುಂಬವನ್ನು ಹುಡುಕುವಂತೆ ತನ್ನ ಗ್ಯಾಂಗ್ಗೆ ಸೂಚಿಸುತ್ತಿದ್ದ. ಅಲ್ಲದೆ, ತಮ್ಮ ಮಕ್ಕಳ ಪಾಸ್ಪೋರ್ಟ್ಅನ್ನು ಬಾಡಿಗೆಗೆ ನೀಡುವ ಕುಟುಂಬವನ್ನು ಸಹ ಹುಡುಕುತ್ತಿದ್ದರು. ಮಗುವನ್ನು ಹೋಲುವ ಚಿತ್ರವುಳ್ಳ ಪಾಸ್ಪೋರ್ಟ್ಅನ್ನು ಆಯ್ಕೆ ಮಾಡಲಾಗುತ್ತಿತ್ತು.
ಬಳಿಕ ಆ ಮಗುವನ್ನು ಅಮೆರಿಕಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುತ್ತಿತ್ತು. ಪಾಸ್ಪೋರ್ಟ್ನಲ್ಲಿರುವ ಮಗುವಿನ ಮುಖಕ್ಕೆ ಹೊಂದಾಣಿಕೆಯಾಗುವಂತೆ ಈ ಮಗುವಿಗೆ ಮೇಕಪ್ ಮಾಡಲಾಗುತ್ತಿತ್ತು. ಅಮೆರಿಕದಿಂದ ಹಡಗು ಮರಳಿದ ಬಳಿಕ ಪಾಸ್ಪೋರ್ಟ್ ಅನ್ನು ಅದರ ಮಾಲೀಕರಿಗೆ ಮರಳಿಸಲಾಗುತ್ತಿತ್ತು.
ಆದರೆ, ವ್ಯಕ್ತಿಯ ಹಾಜರಿ ಇಲ್ಲದೆಯೇ ವಲಸೆ ಕೇಂದ್ರದಲ್ಲಿ ಪಾಸ್ಪೋರ್ಟ್ಗೆ ಹೇಗೆ ಸ್ಟಾಂಪ್ ಹಾಕಲಾಗುತ್ತಿತ್ತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಇಸ್ರೇಲ್-ಯುಎಸ್ ಜಂಟಿ ದಾಳಿ ಅಬ್ಬರ: ಇರಾನ್ಗೆ ಉತ್ತರಾಧಿಕಾರಿ ನೇಮಕ, ಇಂದಿನ ಪ್ರಮುಖಾಂಶಗಳು ಇಲ್ಲಿವೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?












Click it and Unblock the Notifications