ಒಂದು ಮಗುವಿನ ಬೆಲೆ 45 ಲಕ್ಷ! ಹೀಗೆ ಮಾರಾಟವಾಗಿರುವುದು 300 ಮಕ್ಕಳು
ಮುಂಬೈ, ಆಗಸ್ಟ್ 16: ಭಾರತದಿಂದ ಮಕ್ಕಳನ್ನು ಅಮೆರಿಕಕ್ಕೆ ಮಾರಾಟ ಮಾಡುವ ದಂಧೆಯ ಕರಾಳ ಮುಖವೊಂದು ಬಹಿರಂಗವಾಗಿದೆ.
ಮುಂಬೈ ಪೊಲೀಸರು ಅಂತಾರಾಷ್ಟ್ರೀಯ ಮಕ್ಕಳ ಕಳ್ಳಸಾಗಣೆಯ ಕಿಂಗ್ ಪಿನ್ನನ್ನು ಬಂಧಿಸಿದ್ದು, 2007ರಿಂದ ಈಚೆಗೆ ಆತ ಕನಿಷ್ಠ 300 ಮಕ್ಕಳನ್ನು ಅಮೆರಿಕ ಮೂಲದ 'ಗ್ರಾಹಕ'ರಿಗೆ ಮಾರಾಟ ಮಾಡಿದ್ದಾನೆ. ಒಂದು ಮಗುವಿಗೆ ಆತ ತೆಗೆದುಕೊಂಡಿರುವ ಹಣ 45 ಲಕ್ಷ ರೂಪಾಯಿ.
ಗುಜರಾತ್ ನಿವಾಸಿಯಾದ ರಾಜುಭಾಯಿ ಗಮ್ಲೇವಾಲ ಅಲಿಯಾಸ್ ರಾಜುಭಾಯಿ ಬಂಧಿತ ಆರೋಪಿ. ಇದಕ್ಕೂ ಮೊದಲು ಈ ದಂಧೆಯಲ್ಲಿ ತೊಡಗಿದ್ದ ಕೆಲವರನ್ನು ಮಾರ್ಚ್ನಲ್ಲಿ ಬಂಧಿಸಲಾಗಿತ್ತು. ಮಾರಾಟವಾದ ಮಕ್ಕಳ ಭವಿಷ್ಯ ಏನಾಗಿದೆ ಎಂಬ ಮಾಹಿತಿ ದೊರೆತಿಲ್ಲ.

ಹೀಗೆ ಮಾರಾಟವಾದ ಮಕ್ಕಳಲ್ಲಿ ಹೆಚ್ಚಿನವರು ಗುಜರಾತ್ನ ಬಡಕುಟುಂಬದವರಾಗಿದ್ದು, ಎಲ್ಲರೂ 11-16 ವರ್ಷ ವಯಸ್ಸಿನವರಾಗಿದ್ದಾರೆ. ಕಡುಬಡಕುಟುಂಬದ ಪೋಷಕರು ಮಕ್ಕಳನ್ನು ಸಾಕಲು ಸಾಧ್ಯವಾಗದ ಕಾರಣ ಅವರನ್ನು ಮಾರಾಟ ಮಾಡುತ್ತಾರೆ.
ಅಮೆರಿಕದ ತನ್ನ ಗ್ರಾಹಕರಿಂದ ಬೇಡಿಕೆ ಬಂದ ಕೂಡಲೇ ರಾಜುಭಾಯಿ, ಗುಜರಾತ್ನಲ್ಲಿ ತಮ್ಮ ಮಕ್ಕಳನ್ನು ಮಾರಾಟ ಮಾಡಲು ಬಯಸಿರುವ ಬಡ ಕುಟುಂಬವನ್ನು ಹುಡುಕುವಂತೆ ತನ್ನ ಗ್ಯಾಂಗ್ಗೆ ಸೂಚಿಸುತ್ತಿದ್ದ. ಅಲ್ಲದೆ, ತಮ್ಮ ಮಕ್ಕಳ ಪಾಸ್ಪೋರ್ಟ್ಅನ್ನು ಬಾಡಿಗೆಗೆ ನೀಡುವ ಕುಟುಂಬವನ್ನು ಸಹ ಹುಡುಕುತ್ತಿದ್ದರು. ಮಗುವನ್ನು ಹೋಲುವ ಚಿತ್ರವುಳ್ಳ ಪಾಸ್ಪೋರ್ಟ್ಅನ್ನು ಆಯ್ಕೆ ಮಾಡಲಾಗುತ್ತಿತ್ತು.
ಬಳಿಕ ಆ ಮಗುವನ್ನು ಅಮೆರಿಕಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುತ್ತಿತ್ತು. ಪಾಸ್ಪೋರ್ಟ್ನಲ್ಲಿರುವ ಮಗುವಿನ ಮುಖಕ್ಕೆ ಹೊಂದಾಣಿಕೆಯಾಗುವಂತೆ ಈ ಮಗುವಿಗೆ ಮೇಕಪ್ ಮಾಡಲಾಗುತ್ತಿತ್ತು. ಅಮೆರಿಕದಿಂದ ಹಡಗು ಮರಳಿದ ಬಳಿಕ ಪಾಸ್ಪೋರ್ಟ್ ಅನ್ನು ಅದರ ಮಾಲೀಕರಿಗೆ ಮರಳಿಸಲಾಗುತ್ತಿತ್ತು.
ಆದರೆ, ವ್ಯಕ್ತಿಯ ಹಾಜರಿ ಇಲ್ಲದೆಯೇ ವಲಸೆ ಕೇಂದ್ರದಲ್ಲಿ ಪಾಸ್ಪೋರ್ಟ್ಗೆ ಹೇಗೆ ಸ್ಟಾಂಪ್ ಹಾಕಲಾಗುತ್ತಿತ್ತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications