ಟೋಲ್ ನಲ್ಲಿ ಸ್ವೈಪ್ ಮಾಡಿದ 2 ಗಂಟೇಲಿ 87 ಸಾವಿರ ರು. ಮಾಯ!
ಮುಂಬೈ, ಸೆಪ್ಟೆಂಬರ್ 12: ಮಹಾರಾಷ್ಟ್ರದ ಖಾಲಾಪುರ ಟೋಲ್ ಪ್ಲಾಜಾದಲ್ಲಿ ತನ್ನ ಕಾರ್ಡು ಸ್ವೈಪ್ ಮಾಡಿದ ಎರಡು ತಾಸುಗಳೊಳಗೆ ವ್ಯಕ್ತಿಯೊಬ್ಬ ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡಿರುವ ಘಟನೆ ಸೆ. 9ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹೀಗೆ, ಹಣ ಕಳೆದುಕೊಂಡವರ ಹೆಸರು ದರ್ಶನ್ ಪಾಟೀಲ್. ಅವರ ಅಕೌಂಟ್ ನಿಂದ ನಾಪತ್ತೆಯಾಗಿದ್ದು ಬರೋಬ್ಬರಿ 87 ಸಾವಿರ ರು.

ಸೆ. 9ರಂದು ಶನಿವಾರ ಅವರು ಕಾರ್ಯನಿಮಿತ್ತ ಹೊರ ಜಿಲ್ಲೆಯೊಂದಕ್ಕೆ ಹೋಗಿದ್ದ ಅವರು, ಪುಣೆಯಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿದ್ದರು. ಸಂಜೆ 6:30ರ ಸುಮಾರಿಗೆ ಖಾಲಾಪುರದಲ್ಲಿರುವ ಪ್ಲಾಜಾಕ್ಕೆ ಆಗಮಿಸಿದ್ದ ಅವರು 230 ರು.ಗಳಷ್ಟು ರಸ್ತೆ ಶುಲ್ಕವನ್ನು ಕಾರ್ಡ್ ಮೂಲಕ ಪಾವತಿಸಿದ್ದಾರೆ.
ತಕ್ಷಣವೇ ಅವರ ಅಕೌಂಟ್ ನಿಂದ 237 ರು. ಹಣ ಕಟ್ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ, ರಾತ್ರಿ ಸುಮಾರು 8:31ರ ಸುಮಾರಿಗೆ 20 ಸಾವಿರ ರು.ಗಳಷ್ಟು ಮೌಲ್ಯದ ಖರೀದಿಯನ್ನು ಮಾಡಿರುವುದಾಗಿ ಅವರ ಮೊಬೈಲಿಗೆ ಮೆಸೇಜ್ ಬಂದಿದೆ.
ಇದಾಗಿ ಕೇವಲ ನಾಲ್ಕೇ ನಿಮಿಷಗಳ ಅಂತರದಲ್ಲಿ, ಇಂಥದ್ದೇ ಸುಮಾರು ಆರೇಳು ಸಂದೇಶಗಳು ಬಂದಿದ್ದು, ಬ್ಯಾಂಕ್ ಖಾತೆಯಿಂದ ಸುಮಾರು 87 ಸಾವಿರ ರು. ಖರ್ಚಾಗಿದೆ.
ಇಷ್ಟೇ ಅಲ್ಲ, ಇದಾದ ನಂತರವೂ 100 ರು. ಹಾಗೂ 10 ರು.ಗಳ ತಿನಿಸನ್ನು ಖರೀದಿ ಮಾಡಿರುವ ಮೆಸೇಜ್ ಗಳೂ ಬಂದಿವೆ.
ಇದೀಗ, ಸೈಬರ್ ಕ್ರೈಂ ಠಾಣೆಗೆ ಈ ಬಗ್ಗೆ ದೂರನ್ನು ದಾಖಲಿಸಿರುವ ಪಾಟೀಲ್, ಈ ಬಗ್ಗೆ ಸಮಗ್ರ ನಡೆಸುವಂತೆ ಕೋರಿದ್ದಾರೆ. ಅಲ್ಲದೆ, ಟೋಲ್ ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ತಾನು ನಮೂದಿಸಿರುವ ಪಿನ್ ಸಂಖ್ಯೆ ದಾಖಲಾಗಿ, ಅದನ್ನು ಯಾರೋ ದುಷ್ಕರ್ಮಿಗಳು ಹಣ ದೋಚುವ ಕಾರ್ಯಕ್ಕೆ ಬಳಸಿಕೊಂಡಿದ್ದಾರೆಂದು ಅವರು ಆರೋಪಿಸಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications