ಅವನಿಂದ ನನ್ನನ್ನು ರಕ್ಷಿಸಿ, ಇಲ್ಲಾಂದ್ರೆ ಸೂಸೈಡ್: ನಟಿ ರಾಣಿ
ಮುಂಬೈ, ಜುಲೈ 2: " ಆ ವ್ಯಕ್ತಿಯಿಂದ ನಾನು ದಿನನಿತ್ಯ ಹಿಂಸೆ ಅನುಭವಿಸುತ್ತಿದ್ದೇನೆ, ದಯವಿಟ್ಟು ನನಗೆ ಸಹಾಯ ಮಾಡಿ, ಇಲ್ಲದಿದ್ದರೆ ನಾನು ಆತ್ಮಹತ್ಯೆಗೆ ಶರಣಾಗುತ್ತೇನೆ'' ಹೀಗೆ ವಿಡಿಯೋ ಹಂಚಿಕೆ ತಾಣ ಇನ್ಸ್ಟಾಗ್ರಾಂನಲ್ಲಿ ನಟಿಯೊಬ್ಬರು ಬರೆದುಕೊಂಡು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
Recommended Video
ಭೋಜ್ ಪುರಿ ನಟಿ ರಾಣಿ ಚಟರ್ಜಿ ಅವರು ತಮಗಾಗುತ್ತಿರುವ ಕಿರುಕುಳವನ್ನು ಸುದೀರ್ಘವಾಗಿ ಬರೆದು, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಧನಂಜಯ್ ಎಂಬ ವ್ಯಕ್ತಿಯಿಂದ ನನ್ನನ್ನು ರಕ್ಷಿಸಿ ಎಂದು ಮುಂಬೈ ಪೊಲೀಸರ ಮೊರೆ ಹೊಕ್ಕಿದ್ದಾರೆ. ಎಂಎಕ್ಸ್ ಪ್ಲೇಯರ್ ನ ವೆಬ್ ಸರಣಿ ಮಸ್ತ್ರಾಮ್ ನಲ್ಲಿ ಹಾಟ್ ಪಾತ್ರದಲ್ಲಿ ರಾಣಿ ಕಾಣಿಸಿಕೊಂಡಿದ್ದರು.
ಕತ್ರೋಂಕಿ ಕಿಲಾಡಿ 10 ಶೋ ಸ್ಪರ್ಧಿ, ಹತ್ತು ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ರಾಣಿಗೆ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಕಾಟ ಕೊಡುತ್ತಲೇ ಇದ್ದಾರಂತೆ. ಅದರಲ್ಲೂ ಧನಂಜಯ್ ಎಂಬ ವ್ಯಕ್ತಿಯಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ದೂರು ನೀಡಿಲ್ಲವೇ? ಧನಂಜಯ್ ನಿಜಕ್ಕೂ ಮಾಡುತ್ತಿರುವುದಾದರೂ ಏನು? ಎಂಬುದರ ಬಗ್ಗೆ ವಿವರ ಮುಂದಿದೆ...

ಸೈಬರ್ ಸೆಲ್ ಗೆ ದೂರಿತ್ತರೂ ಪ್ರಯೋಜನವಿಲ್ಲ
ನಟಿ ರಾಣಿ ಚಟರ್ಜಿ ತಮಗಾಗಿರುವ ಹಿಂಸೆ ಬಗ್ಗೆ ಮುಂಬೈ ಪೊಲೀಸ್ ಇಲಾಖೆಯ ಸೈಬರ್ ಸೆಲ್ ಘಟಕಕ್ಕೆ ಈ ಬಗ್ಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ. ಧನಂಜಯ್ ಹಾಕಿರುವ ಫೇಸ್ಬುಕ್ ಪೋಸ್ಟ್ ಗಳನ್ನು ಆಧಾರವಾಗಿ ದೂರಿನಲ್ಲಿ ನೀಡಲಾಗಿದೆ. ಆದರೆ, ಆ ಪೋಸ್ಟ್ ಗಳಲ್ಲಿ ರಾಣಿ ಹೆಸರಿಲ್ಲ, ಬದಲಿಗೆ ಹಲವು ಬಾಡಿ ಶೇಮ್ ಚಿತ್ರಗಳಿವೆ.. ರಾಣಿಯನ್ನು ವಯಸ್ಸಾದ ಹೆಂಗಸಿನಂತೆ ಚಿತ್ರಿಸಿರುವ ಪೋಸ್ಟ್ ಗಳಿದ್ದು, ಸಾರ್ವಜನಿಕವಾಗಿ ನಿಂದಿಸಿರುವುದು ಕಂಡು ಬಂದಿದೆ.

ಈ ಬಗ್ಗೆ ನಿರ್ಲಕ್ಷಿಸುವುದು ಸರಿಯಲ್ಲ
ಸಾಮಾಜಿಕ ಜಾಲ ತಾಣಗಳಲ್ಲಿ ನೆಗಟಿವ್ ಪೋಸ್ಟ್ ಮಾಮೂಲಿ ನಿಜ. ಆದರೆ, ಈ ರೀತಿ ಬಾಡಿ ಶೇಮ್ ಚಿತ್ರಗಳು, ವೈಯಕ್ತಿಕ ನಿಂದನೆ ಪೋಸ್ಟ್ ಗಳು ಸರಿಯಲ್ಲ, ಆತನಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ರಾಣಿ ಹೇಳಿಕೊಂಡಿದ್ದಾರೆ. ಆದರೆ, ನಟಿ ಒದಗಿಸಿರುವ ವಿವರಗಳ ಪ್ರಕಾರ ಧನಂಜಯ್ ಎಂಬಾತ ನೇರವಾಗಿ ಯಾವುದೇ ರೀತಿ ನಟಿಗೆ ಬೆದರಿಕೆ, ಮಾನಸಿಕ ಹಿಂಸೆ ನೀಡುವಂಥ ಅಂಶಗಳು ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಎಂದು ರಾಣಿಗೆ ಅವರ ಆಪ್ತ ಸ್ನೇಹಿತೆಯರು, ಸಿನಿಮಾರಂಗದವರು ಹೇಳಿದ್ದಾರೆ. ಆದರೆ, ನಾನೇನಾದ್ರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಧನಂಜಯ್ ಕಾರಣನಾಗಿರುತ್ತಾನೆ ಎಂದು ರಾಣಿ ಹಲ್ಲುಕಡಿದಿದ್ದಾರೆ.

ಮುಂಬೈ ಪೊಲೀಸರಿಗೆ ಇನ್ಸ್ಟಾಗ್ರಾಮ್ ಮೂಲಕ ಮನವಿ
ಮುಂಬೈ ಪೊಲೀಸರಿಗೆ ಇನ್ಸ್ಟಾಗ್ರಾಮ್ ಮೂಲಕ ಮನವಿ ಮಾಡಿಕೊಂಡಿರುವ ರಾಣಿ, ನನಗೆ ಸಾಕಾಗಿ ಹೋಗಿದೆ. ಈಗ ಬಹುಶಃ ಆತ್ಮಹತ್ಯೆಯೊಂದೆ ಉಳಿದಿರುವ ಪರಿಹಾರ, ಮಾನಸಿಕ ಹಿಂಸೆ ಅನುಭವಿಸಿ, ಖಿನ್ನತೆಯಿಂದ ನಾನು ಈ ರೀತಿ ನಿರ್ಧಾರ ಕೈಗೊಳ್ಳಬೇಕಾಗಬಹುದು, ಇನ್ನು ಇದೆಲ್ಲವನ್ನು ಸಹಿಸಲು ಕಷ್ಟವಾಗುತ್ತದೆ, ಖಿನ್ನತೆಗೊಳಗಾದಾಗ ಸಾಮಾಜಿಕ ಜಾಲ ತಾಣ ನೋಡುತ್ತೇನೆ, ಅಲ್ಲಿ ನನ್ನ ವಿರುದ್ಧ ಪೋಸ್ಟ್ ಕಂಡರೆ ಇನ್ನಷ್ಟು ನೊಂದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಬೆಂಬಲ
ನಟಿ ರಾಣಿ ಚಟರ್ಜಿ ತಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಿ ಅಪಮಾನ ಮಾಡುವವರ ಬಗ್ಗೆ ಈ ಹಿಂದೆ ಕೂಡಾ ಬರೆದುಕೊಂಡಿದ್ದರು. ಪೊಲೀಸರಿಗೆ ಮಾಡಿರುವ ಮನವಿ ಪೋಸ್ಟ್ ಬಗ್ಗೆ ಅನಾರಾ ಗುಪ್ತ ಸೇರಿದಂತೆ ಕೆಲವು ಮಂದಿ ರಾಣಿಗೆ ಬೆಂಬಲ ವ್ಯಕ್ತಪಡಿಸಿ, ಎಲ್ಲವೂ ಸರಿ ಹೋಗುತ್ತದೆ, ಆತ್ಮಹತ್ಯೆ ನಿರ್ಧಾರ ಕೈಬಿಡು ಎಂದಿದ್ದಾರೆ. 30 ವರ್ಷ ವಯಸ್ಸಿನ ನಟಿ ರಾಣಿ ಭೋಜ್ ಪುರಿ ಸ್ಟಾರ್ ನಟ, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಜೊತೆ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, 2004ರಿಂದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
-
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್












Click it and Unblock the Notifications