'ಗಾಯಕ ಸೋನು ನಿಗಮ್ ರನ್ನು ಕೊಲ್ಲಲು ಬಯಸಿದ್ದ ಬಾಳಾ ಠಾಕ್ರೆ'
ಮುಂಬೈ, ಜನವರಿ 16: ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆ ಅವರು ಬಾಲಿವುಡ್ ಗಾಯಕ ಸೋನು ನಿಗಮ್ ಅವರನ್ನು ಕೊಲ್ಲಲು ಬಯಸಿದ್ದರು ಎಂದು ಮಾಜಿ ಸಂಸದ ನೀಲೇಶ್ ರಾಣೆ ಹೇಳಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸೋನು ಹತ್ಯೆಗೆ ಸಂಚು ರೂಪಿಸಿ, ಕೊಲೆ ಯತ್ನ ಮಾಡಲಾಗಿತ್ತು ಎಂದಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಅವರ ಪುತ್ರ ನಾರಾಯಣ ರಾಣೆ ಅವರು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ, ಹತ್ಯೆ ಯತ್ನದ ಬಗ್ಗೆ ಸೋನು ನಿಗಮ್ ಗೂ ಗೊತ್ತಿತ್ತು ಎಂದಿದ್ದಾರೆ.
ಬಾಳಾಸಾಹೇಬ್ ಅವರ ಕರ್ಜಾತ್ ಫಾರ್ಮ್ ಹೌಸ್ ನಲ್ಲಿ ಎಷ್ಟು ಮಂದಿ ಸತ್ತರು? ಏನೆಲ್ಲ ನಡೆಯಿತು ಎಂಬುದನ್ನು ನಾನು ಹೇಳುವುದಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ.

ಶಿವಸೇನಾದ ಮಾಜಿ ನಾಯಕ ಆನಂದ್ ದಿಘೆ ಹತ್ಯೆ ಬಗ್ಗೆ ಇನ್ನಿಬ್ಬರು ಶಿವ ಸೇನಾ ಕಾರ್ಯಕರ್ತರಿಗೆ ತಿಳಿದಿತ್ತು. ಕೊಲೆ ಬಗ್ಗೆ ಮಾಹಿತಿ ಇದ್ದ ಇವರಿಬ್ಬರನ್ನು ಹತ್ಯೆ ಮಾಡಿ ಮುಗಿಸಲಾಯಿತು ಎಂದು ಆಘಾತಕಾರಿ ಸುದ್ದಿಯನ್ನು ನೀಡಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಚಾರ ಸಮಿತಿಯಲ್ಲಿರುವ ನಾರಾಯಣ ರಾಣೆ ಅವರಿಂದ ಈಗಾಗಲೆ ಹಳಸಿರುವ ಬಿಜೆಪಿ-ಶಿವಸೇನಾ ಮೈತ್ರಿಗೆ ಇನ್ನಷ್ಟು ಪೆಟ್ಟು ಬೀಳಲಿದೆ.












Click it and Unblock the Notifications