ಅಮಿತಾಬ್ ಹಾಗೂ ಜಯಾ ದಾಂಪತ್ಯದಲ್ಲಿ ಬಿರುಕು: ಅಮರ್ ಸಿಂಗ್
ಅಮಿತಾಭ್ ಹಾಗು ಜಯಾ ಬಚ್ಚನ್ ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಬಚ್ಚನ್ ಕುಟುಂಬದ ಒಂದು ಕಾಲದ ಆಪ್ತ, ರಾಜಕಾರಣಿ ಅಮರ್ ಸಿಂಗ್ ಈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮುಂಬೈ, ಜನವರಿ 24: ನಟ ಅಮಿತಾಬ್ ಬಚ್ಚನ್ ಹಾಗು ನಟಿ ಕಮ್ ರಾಜಕಾರಣಿ ಜಯಾ ಬಚ್ಚನ್ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈಗ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಬಚ್ಚನ್ ಕುಟುಂಬದ ಒಂದು ಕಾಲದ ಆಪ್ತ, ರಾಜಕಾರಣಿ ಅಮರ್ ಸಿಂಗ್ ಈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಉತ್ತರಪ್ರದೇಶದ ರಾಜಕೀಯದ ಬಗ್ಗೆ ಮಾತನಾಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಬಚ್ಚನ್ ಕುಟುಂಬದ ರಾಜಕೀಯ, ಗೊಂದಲ, ವೈಮನಸ್ಯದ ಬಗ್ಗೆ ಅಮರ್ ಹೇಳಿದರು.[ವೋಟಿಗಾಗಿ ನೋಟು: ಅಮರ್, ಸುಧೀರ್ ಗೆ ಖುಲಾಸೆ]

ಸಮಾಜವಾದಿ ಪಕ್ಷ ಒಡಕಿಗೆ ನಾನೇ ಕಾರಣ ಎಂದು ದೂರುತ್ತಾರೆ. ಬಚ್ಚನ್ ಕುಟುಂಬದ ಸಮಸ್ಯೆಗೂ ನಾನೇ ಕಾರಣ ಎಂದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ತಮ್ಮ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಅಮರ್ ಸಿಂಗ್ ಹೇಳಿದರು.[ಗುಪ್ತನಿಧಿ ಪಟ್ಟಿಯಲ್ಲಿ ಬಿಗ್ ಬಿ, ಐಶ್ ಹೆಸರು!]
ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷ ಸೇರ್ಪಡೆ ಬಗ್ಗೆ ಕೂಡಾ ಬಚ್ಚನ್ ಅವರು ನನಗೆ ಗೆಳೆಯನಾಗಿ ಹಿತವಚನ ನೀಡಿದ್ದರು. ಅದರೆ, ಮಾಧ್ಯಮಗಳಲ್ಲಿ ನನ್ನ ಮೇಲೆ ಅಪವಾದ ಹೊರೆಸಲಾಯಿತು. ಅಂಬಾನಿ ಸೋದರರು ಬೇರೆ ಬೇರೆಯಾದಾಗ ಅದಕ್ಕೂ ನನ್ನ ಮೇಲೆ ದೂರು ಹಾಕಿದ್ದರು.
ನಾನು ಅಮಿತಾಬ್ ರನ್ನು ಭೇಟಿಯಾಗುವ ಮೊದಲೇ ಅವರು ಹಾಗು ಜಯಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಒಬ್ಬರು ' ಪ್ರತೀಕ್ಷಾ' ದಲ್ಲಿ ಹಾಗು ಇನ್ನೊಬ್ಬರು 'ಜನಕ್ ' ನಲ್ಲಿ ವಾಸಿಸುತ್ತಿದ್ದರು. ಇದರ ಜತೆಗೆ ಐಶ್ವರ್ಯಾ ರೈ ಹಾಗು ಜಯಾ ನಡುವೆ ಸಾಮರಸ್ಯವಿಲ್ಲ ಎಂಬ ಸುದ್ದಿ ಹಬ್ಬಿತು. ಇದಕ್ಕೂ ನನಗೂ ಸಂಬಂಧವಿಲ್ಲ" ಎಂದು ಅಮರ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿ ಎಬಿಪಿ ನ್ಯೂಸ್ ವರದಿ ಮಾಡಿದೆ.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications