30 ವರ್ಷದ ಹಿಂದೆ ಪಡೆದಿದ್ದ 200 ರೂ. ಸಾಲ ತಿರಿಸೋಕೆ ಭಾರತಕ್ಕೆ ಬಂದ ಕೀನ್ಯಾ ಸಂಸದ!
ಮುಂಬೈ, ಜುಲೈ 11: ಮೂವತ್ತು ವರ್ಷದ ಹಿಂದೆ ತೆಗೆದುಕೊಂಡಿದ್ದ ಇನ್ನೂರು ರೂಪಾಯಿಯನ್ನು ವಾಪಸ್ ನೀಡುವುದಕ್ಕೆ ವ್ಯಕ್ತಿಯೊಬ್ಬರು ಕೀನ್ಯಾದಿಂದ ಭಾರತಕ್ಕೆ ಬರೋದು ಅದ್ರೇನು? ಪ್ರಾಮಾಣಿಕತೆಯ ಪರಾಕಾಷ್ಠೆ ಎನ್ನಬೇಕೆ?
ತೀರಾ ವಿರಳ ಎಂಬಂಥ ಈ ಘಟನೆ ನಡೆದಿದ್ದು, ಮಹಾರಾಷ್ಟ್ರದ ಔರಂಗಾಬಾದಿನಲ್ಲಿ!
30 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಂದ ಪಡೆದಿದ್ದ 200 ರೂಪಾಯಿ ಸಾಲವನ್ನು ಮರುಪಾವತಿಸಲು ಕೀನ್ಯಾದ ರಿಚರ್ಡ್ ಟಾಂಗ್ ಐ ಎಂಬ ಸಂಸದ(ನ್ಯಾರಿಬರಿ ಚಾಚೆ ಕ್ಷೇತ್ರದ ಸಂಸದ)ರೊಬ್ಬರು ಭಾರತಕ್ಕೆ ಬಂದಿದ್ದರು. ತಮ್ಮ ಕುಟುಂಬ ಸಮೇತ ಬಂದು, ಔರಂಗಾಬಾದಿನ ಎಪ್ಪತ್ತು ವರ್ಷ ವಯಸ್ಸಿನ ಕಾಶಿನಾಥ್ ಗವಾಲಿ ಎಂಬುವವರ ಮನೆ ಬಾಗಿಲು ತಟ್ಟಿದಾಗ ಕಾಶಿನಾಥ್ ಅವರಿಗೆ ಗುರುತು ಹತ್ತುವುದಾದರೂ ಹೇಗೆ? ಅರವತ್ತಾಗಿ ದಶಕ ಕಳೆದಿರುವಾಗ ಮೂವತ್ತು ವರ್ಷದ ಹಿಂದಿನ ನೆನಪು ಎಲ್ಲಿಂದ ಬರಬೇಕು?

ಆದರೂ ರಿಚರ್ಡ್ ಪಟ್ಟು ಬಿಡದೆ ಹಳೇ ಘಟನೆಗಳನ್ನೆಲ್ಲ ನೆನಪಿಸಿ, ಕಾಶಿನಾಥ್ ಅವರಿಗೆ ಹಿಂದಿನ ಘಟಣೆಗಳನ್ನು ನೆನಪಿಸಿದರು. ಸಂಕಷ್ಟದಲ್ಲಿದ್ದ ಆಫ್ರಿಕನ್ ನಾಗರಿಕ ರಿಚರ್ಡ್ ಅವರಿಗೆ ಪ್ರತಿಫಲದ ಅಪೇಕ್ಷೆ ಇಲ್ಲದೆ ಕಾಶಿನಾಥ್ ಅವರು ಮಾಡಿದ್ದ ಸಹಾಯವನ್ನು ಮನಸಾರೆ ಕೊಂಡಾಡಿ ಆಗ ತೆಗೆದುಕೊಂಡಿದ್ದ ಸಾಲವನ್ನು ವಾಪಸ್ ನೀಡಿದ್ದಾರೆ. ಜೊತೆಗೆ ತಮ್ಮ ಕುಟುಂಬದೊಂದಿಗೆ ಕಾಶಿನಾಥ್ ಅವರ ಮನೆಯಲ್ಲಿ ಕೆಲಕಾಲ ಕಳೆದಿದ್ದಾರೆ.
ಮೂವತ್ತು ವರ್ಷದ ಹಿಂದಿನ 200 ರೂಪಾಯಿ ಎಂದರೆ ಕಡಿಮೆ ಮೌಲ್ಯದ್ದೇನಲ್ಲ ಎಂಬುದು ಬೇರೆ ಮಾತು. ಆದರೆ ಹಣದ ಮುಖ ನೋಡದೆ ವಿದೇಶಿಯನೊಬ್ಬನಿಗೆ ನೆರವು ನೀಡಿದ ಕಾಶಿನಾಥ್, ಅದನ್ನು ಇಂದಿನವರೆಗೂ ನೆನಪಿಟ್ಟುಕೊಂಡು ಮರುಪಾವತಿಸಲು ಅಷ್ಟು ದೂರದಿಂದ ಬಂದ ರಿಚರ್ಡ್ ರಂಥವರು ಮಾನವೀಯತೆ, ಪ್ರಾಮಾಣಿಕತೆಯ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ!
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications