26/11 ಮುಂಬೈ ದಾಳಿ: ಪಾಕ್ ನ ಇಬ್ಬರು ಸೇನಾಧಿಕಾರಿ ವಿರುದ್ಧ ಜಾಮೀನುರಹಿತ ವಾರಂಟ್
ಮುಂಬೈ, ಫೆಬ್ರವರಿ 3: ಇಲ್ಲಿನ ಸೆಷನ್ಸ್ ಕೋರ್ಟ್ ಪಾಕಿಸ್ತಾನದ ಇಬ್ಬರು ಸೇನಾ ಅಧಿಕಾರಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದೆ. ಮೇಜರ್ ಅಬ್ದುಲ್ ರೆಹಮಾನ್ ಪಾಷಾ, ಮೇಜರ್ ಇಕ್ಬಾಲ್ ವಿರುದ್ಧ 26/11 ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ವಾರಂಟ್ ಹೊರಡಿಸಲಾಗಿದೆ. ಮೇಜರ್ ಪಾಷಾ ನಿವೃತ್ತರಾಗಿದ್ದು, ಮೇಜರ್ ಇಕ್ಬಾಲ್ ಈಗಲೂ ಐಎಸ್ ಐ ಗೆ ಕೆಲಸ ಮಾಡುತ್ತಿದ್ದಾರೆ.
ಈ ಮಾಹಿತಿಯನ್ನು ಅಮೆರಿಕದಲ್ಲಿ ಜನಿಸಿದ ಲಷ್ಕರ್ ಇ ತೈಬಾದ ಉಗ್ರಗಾಮಿ ಡೇವಿಡ್ ಕೋಲ್ಮನ್ ಹೆಡ್ಲಿ ಬಹಿರಂಗ ಪಡಿಸಿದ್ದಾನೆ. ಮುಂಬೈ ದಾಳಿ ಪ್ರಕರಣದಲ್ಲಿ ಆತ ಅಪ್ರೂವರ್ ಆಗಿದ್ದಾನೆ. ಮುಂಬೈ ಸಿಟಿ ಪೊಲೀಸ್ ಕ್ರೈಂ ಬ್ರ್ಯಾಂಚ್ ದಾಖಲಿಸಿದ ಆರೋಪ ಪಟ್ಟಿಯಲ್ಲಿ ಮೇಜರ್ ಇಕ್ಬಾಲ್ ಹಾಗೂ ಮೇಜರ್ ಪಾಷಾರನ್ನು ಬೇಕಾಗಿರುವ ಆರೋಪಿಗಳು ಎಂದು ತೋರಿಸಲಾಗಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ವಿ.ಯಾರ್ಲಗಡ್ಡ ಜನವರಿ ಇಪ್ಪತ್ತೊಂದರಂದು ಅರ್ಜಿ ಸಲ್ಲಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂಗೆ ಅವಕಾಶ ನೀಡಿದ್ದಾರೆ. 26/11 ಮುಂಬೈ ದಾಳಿ ಪ್ರಕರಣದಲ್ಲಿ ಎಲ್ ಇಟಿಯ ಅಬು ಜುಂದಾಲ್ ನ ವಿಚಾರಣೆ ನಡೆಯುತ್ತಿದ್ದು, ಇದೀಗ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

ದಾಳಿಯ ಗುರಿ ಯಾವುದು ಎಂದು ನಿರ್ಧರಿಸುವ ಸಭೆಯಲ್ಲಿದ್ದರು
ಮುಂಬೈ ದಾಳಿಯಲ್ಲಿ ಪಾಕ್ ನ ಇಬ್ಬರು ಸೇನಾಧಿಕಾರಿಗಳ ಪಾತ್ರವನ್ನು ಹೆಡ್ಲಿ ಬಾಯಿ ಬಿಟ್ಟಿದ್ದಾನೆ ಎಂದು ಉಜ್ವಲ್ ನಿಕಂ ಅರ್ಜಿಯಲ್ಲಿ ಹೇಳಿದ್ದಾರೆ. ಮುಂದಿನ ವಿಚಾರಣೆ ಫೆಬ್ರವರಿ ಆರರಂದು ನಡೆಯಲಿದೆ. ಮುಂಬೈನಲ್ಲಿ ಎಲ್ಲೆಲ್ಲಿ ದಾಳಿ ನಡೆಸಬೇಕು ಎಂದು ಗುರಿಯನ್ನು ನಿರ್ಧರಿಸುವ ಸಭೆಯಲ್ಲಿ ಮೇಜರ್ ಇಕ್ಬಾಲ್ ಹಾಗೂ ಪಾಷಾ ಇದ್ದರು ಎಂದು ಹೆಡ್ಲಿ ಹೇಳಿದ್ದಾನೆ. ಆ ಸಭೆಯಲ್ಲಿ ಎಲ್ ಇಟಿಯ ಸಾಜಿದ್ ಮೀರ್, ಅಬು ಖಾಫಾ, ಝಕಿ ಉರ್ ರೆಹ್ಮಾನ್ ಲಖ್ವಿ ಕೂಡ ಹಾಜರಿದ್ದರು ಎಂಬ ಮಾಹಿತಿ ನೀಡಿದ್ದಾನೆ.

ಗುಪ್ತಚರ ಕೆಲಸಕ್ಕೆ 25 ಸಾವಿರ ಡಾಲರ್ ನೀಡಲಾಗಿತ್ತು
2006ರ ಸೆಪ್ಟೆಂಬರ್ ನಲ್ಲಿ ಮುಂಬೈಗೆ ಭೇಟಿ ನೀಡಿದ್ದ ಹೆಡ್ಲಿ, ತಾಜ್ ಹೋಟೆಲ್ ನ ಬಗ್ಗೆ ಮಾಹಿತಿ ಒದಗಿಸಿದ್ದ. ಸಂಬಂಧಪಟ್ಟ ಫೋಟೋ- ವಿಡಿಯೋಗಳನ್ನು ಮೇಜರ್ ಇಕ್ಬಾಲ್ ಗೆ ನೀಡಿದ್ದ. ಇನ್ನು ಭಾಭಾ ಅಟಾಮಿಕ್ ರೀಸರ್ಚ್ ಸೆಂಟರ್ ಹಾಗೂ ಶಿವಸೇನಾ ಪಕ್ಷದ ಕಚೇರಿಯ ಮಾಹಿತಿಯನ್ನು ನೀಡುವಂತೆ ಕೇಳಲಾಗಿತ್ತು. ಭಾರತದಲ್ಲಿ ಈ ರೀತಿ ಗುಪ್ತಚರ ಕೆಲಸಗಳನ್ನು ಮಾಡುವುದಕ್ಕೆ 25 ಸಾವಿರ ಡಾಲರ್ ಅನ್ನು ಇಕ್ಬಾಲ್ ತನಗೆ ನೀಡಿದ್ದಾಗಿ ಹೆಡ್ಲಿ ಹೇಳಿದ್ದಾನೆ.

166 ಮಂದಿ ಸಾವಿಗೆ ಕಾರಣ
ಮುಂಬೈ ದಾಳಿಗೆ ಮುಂಚೆ ಆ ದಾಳಿಯನ್ನು ಯೋಜಿಸಲು, ಸಂಚು ರೂಪಿಸಲು ಹಾಗೂ ಆ ಯೋಜನೆ ಅನುಷ್ಠಾನಕ್ಕೆ ತರಲು ಹೆಡ್ಲಿಯು ನಿರಂತರವಾಗಿ ಮೇಜರ್ ಪಾಷಾ ಸಂಪರ್ಕದಲ್ಲಿ ಇದ್ದ ಎಂದು ನಿಕಮ್ ಹೇಳಿದ್ದಾರೆ. ನವೆಂಬರ್ 26, 2008ರಲ್ಲಿ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಬಂದ ಪಾಕ್ ನ 10 ಭಯೋತ್ಪಾದಕರು, ಮನ ಬಂದಂತೆ ಗುಂಡು ಹಾರಿಸಿ 166 ಮಂದಿ ಸಾವಿಗೆ ಕಾರಣರಾಗಿದ್ದರು. ಅದರಲ್ಲಿ 18 ಮಂದಿ ಭದ್ರತಾ ಸಿಬ್ಬಂದಿ ಕೂಡ ಇದ್ದರು. ಹಲವಾರು ಮಂದಿ ಗಾಯಗೊಂಡಿದ್ದರು. ಆಸ್ತಿ ನಷ್ಟವಾಗಿತ್ತು.

ಒಂಬತ್ತು ಉಗ್ರಗಾಮಿಗಳ ಹತ್ಯೆ ಮಾಡಲಾಗಿತ್ತು
ಆ ದಾಳಿ 3 ದಿನ ನಡೆದಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣ, ತಾಜ್ ಹೋಟೆಲ್, ಟ್ರೈಡೆಂಟ್ ಹೋಟೆಲ್, ಕೆಫೆ ಲಿಯೋಪೋಲ್ಡ್ ಮತ್ತು ಚಬಾದ್ ಹೌಸ್ ಮೇಲೆ ದಾಳಿ ನಡೆದಿತ್ತು. ಆ ದಾಳಿ ನಡೆಸಿದ ಒಂಬತ್ತು ಉಗ್ರಗಾಮಿಗಳನ್ನು ಕೊಲ್ಲಲಾಯಿತು. ಅಜ್ಮಲ್ ಕಸಬ್ ಎಂಬ ಉಗ್ರನನ್ನು ಮುಂಬೈ ಪೊಲೀಸರು ಜೀವಂತ ಸೆರೆ ಹಿಡಿದರು. ಆ ನಂತರ ಅವನಿಗೆ ಮರಣದಂಡನೆ ವಿಧಿಸಲಾಯಿತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications