ಮಂಗಳೂರು: ಯಾಸಿನ್ ರೂಮಿನಲ್ಲಿ ಭಾರಿ ಸ್ಫೋಟಕ ಪತ್ತೆ
ನವದೆಹಲಿ, ಸೆ. 16: ಮಂಗಳೂರು ಬೆಚ್ಚಿಬಿದ್ದಿದೆ. ಇಂಡಿಯನ್ ಮುಜಾಹಿದ್ದೀನ್ (IM) ಭಯೋತ್ಪಾದಕ ಸಂಘಟನೆಯ ಸೂತ್ರಧಾರಿ ಯಾಸಿನ್ ಭಟ್ಕಳ ಈ ಹಿಂದೆ ತಂಗಿದ್ದ ನಗರದ ಅಪಾರ್ಟ್ ಮೆಂಟಿನಲ್ಲಿ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ರಾಷ್ಟ್ರೀಯ ತನಿಖಾ ದಳವು (NIA) ವಶಪಡಿಸಿಕೊಂಡಿದೆ.
NIA, ಇತ್ತೀಚೆಗೆ (ಆಗಸ್ಟ್ 28ರಂದು) ಯಾಸಿನ್ ಭಟ್ಕಳ ಮತ್ತು ಅವನ ಪರಮಾಪ್ತ ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದೆ. ಕಳೆದ 17 ದಿನಗಳಿಂದ ಎನ್ಐಎ ವಶದಲ್ಲಿರುವ ಭಟ್ಕಳ ಮತ್ತು ಹಡ್ಡಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರ ಹಾಕುತ್ತಿದ್ದಾರೆ.

ವಿಚಾರಣೆ ವೇಳೆ ಪಾತಕಿಗಳು ನೀಡಿದ ಮಹತ್ವದ ಸುಳಿವನ್ನು ಬೆಂಬತ್ತಿ ಮಂಗಳೂರಿಗೆ ಬಂದಿಳಿದ NIA ಅಧಿಕಾರಿಗಳು ಕಳೆದ ವಾರ ಯಾಸಿನ್ ಭಟ್ಕಳ ಮಂಗಳೂರಿನ ಚೆಂಬೆಗುಡ್ಡದಲ್ಲಿರುವ ಝೆಪಿಯರ್ ಹೈಟ್ಸ್ ಅಪಾರ್ಟ್ ಮೆಂಟ್ ನಲ್ಲಿ ತಂಗಿದ್ದ 301 ಸಂಖ್ಯೆಯ ಕೊಠಡಿಯನ್ನು ತೆರೆದು ನೋಡಿದಾಗ ಈ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ಯಾಸಿನ್ ಭಟ್ಕಳ ತಂಗಿದ್ದ ಅಪಾರ್ಟ್ ಮೆಂಟ್ ಕೊಠಡಿಯಲ್ಲಿ 90 ಸುಧಾರಿತ, ಜೀವಂತ ಬಾಂಬುಗಳನ್ನು ಎನ್ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆಗಳು ತಿಳಿಸಿವೆ. ನೆಪ ಮಾತ್ರಕ್ಕೆ ಝೆಪಿಯರ್ ಹೈಟ್ಸ್ನಲ್ಲಿ ಉಳಿದಿದ್ದ ಈ ಶಂಕಿತರು ತಮ್ಮ ಮನೆಯನ್ನು ಉಗ್ರಗಾಮಿ ಚಟುವಟಿಕೆಗಳ ಪ್ರಯೋಗಾಲಯ ಮಾಡಿಕೊಂಡಿದ್ದರು. ಸೆಪ್ಟೆಂಬರ್ 6ರಂದು ಮಂಗಳೂರಿಗೆ ದೆಹಲಿಯಿಂದ ಆಗಮಿಸಿದ್ದ ಎನ್ ಐಎ ಅಧಿಕಾರಿಗಳು ಈ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ಮತ್ತು ಯಾಸಿನ್ ಭಟ್ಕಳ ತಂಗಿದ್ದ ಕೊಠಡಿಯಲ್ಲಿ ಟೈಮರುಗಳು, ಬ್ಯಾಟರಿಗಳು, ಡಿನೋಟರ್ಟ್, ಡಿಜಿಟಲ್ ವಾಚ್, ಸಿ.ಡಿ., ಪ್ಲಾಫಿಗಳು, ಕಂಪ್ಯೂಟರ್ ಸೇರಿದಂತೆ ಪ್ರಮುಖ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸುಮಾರು 3 ತಿಂಗಳ ಕಾಲ ಈ ಅಪಾರ್ಟ್ ಮೆಂಟಿನಲ್ಲಿ ಉಳಿದುಕೊಂಡಿದ್ದ ಈ ಇಬ್ಬರು ಇಲ್ಲಿಂದಲೇ ಬಾಂಬುಗಳನ್ನು ತಯಾರಿಸಿ ದೇಶದ ನಾನಾ ಭಾಗಗಳಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
ಅಮೋನಿಯಂ ನೈಟ್ರೆಟ್ನಿಂದ ತಯಾರು ಮಾಡುತ್ತಿದ್ದ ಬಾಂಬುಗಳನ್ನೇ 2008ರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸರಣಿ ಸ್ಫೋಟಕ್ಕೂ ಬಳಸಲಾಗಿತ್ತು.
ಹೈದರಾಬಾದ್ನ ದಿಲ್ ಸುಖ್ ನಗರದಲ್ಲಿ ಸಂಭವಿಸಿದ ಅವಳಿ ಬಾಂಬ್, ಮಹಾರಾಷ್ಟ್ರದ ಪುಣೆಯ ಜರ್ಮನ್ ಬೇಕರಿ, ಮುಂಬೈನ ದಾದರ್ ಹವೇಲಿ, ಸೂರತ್, ಅಹಮದಾಬಾದ್, ದೆಹಲಿ ಸೇರಿದಂತೆ 2006 ರಿಂದ ಇತ್ತೀಚೆಗೆ ದೇಶದ ವಿವಿಧೆಡೆ ಸಂಭವಿಸಿದ ಸ್ಫೋಟಗಳಲ್ಲಿ ಮಂಗಳೂರಿನಿಂದ ತಯಾರಾದ ಈ ಬಾಂಬುಗಳನ್ನು ಭಟ್ಕಳ್ ಮತ್ತು ಹಡ್ಡಿ ಬಳಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications