6 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ ಬಾಲಕ!
ಮಂಗಳೂರು, ಫೆಬ್ರವರಿ 16 : ಈತನ ವಯಸ್ಸು 14. ಹೆಚ್ಚಿನ ಮಕ್ಕಳು ಈ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಾ ಆಟವಾಡುವ ಯೋಚನೆ ಮಾಡುತ್ತಾರೆ. ಆದರೆ ಈ ಹುಡುಗ ಆ ರೀತಿ ಯೋಚಿಸಲಿಲ್ಲ.
ಹೌದು. ಇಷ್ಟೊಂದು ಪೀಠಿಕೆ ಕೊಡುವುದಕ್ಕೆ ಕಾರಣನೂ ಇದೆ. ಅದನ್ನ ಕೇಳಿದರೆ ನೀವೇ ಶಾಕ್ ಆಗುತ್ತೀರಾ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ನೆಟ್ಟಣ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಎಂಬುವವರ ಪುತ್ರ ಮುಹಮ್ಮದ್ ಸಾಲಿಂ ತನ್ನ 14 ನೇ ವಯಸ್ಸಿನಲ್ಲಿ ಕುರ್ ಆನ್ ಕಂಠಪಾಠ ಮಾಡಿ ಎಲ್ಲರನ್ನ ಹುಬ್ಬೇರಿಸಿದ್ದಾನೆ.[ಕುರಾನ್ ನಲ್ಲಿ 11ನೇ ವರ್ಷಕ್ಕೆ ಪದವಿ ಪಡೆದ ಸಚಿವ ಯು.ಟಿ ಖಾದರ್ ಪುತ್ರಿ!]

ಶಾಲೆಗೆ ಹೋಗುವುದರೊಂದಿಗೆ 6 ತಿಂಗಳಲ್ಲಿ ಈ ಹುಡುಗ ಕುರ್ ಆನ್ ಅನ್ನ ಸಂಪೂರ್ಣ ಕಂಠಪಾಠ ಮಾಡಿದ್ದಾನೆ. ಇದಕ್ಕೆ ಸಹಕಾರ ನೀಡಿದ್ದು ಪುತ್ತೂರು ತಾಲೂಕಿನ ಕುಂಬ್ರದಲ್ಲಿರುವ ಕೆಐಸಿಯ ಶಂಸುಲ್ ಉಲಮಾ ಹಿಫ್ಲುಲ್ ಖುರ್ಆನ್ ಸೆಂಟರ್. ಕುಂಬ್ರ ಸರಕಾರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಈತನ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
2016ರ ಜುಲೈ 15ಕ್ಕೆ ಕುರ್ ಆನ್ ಕಂಠಪಾಠ ಮಾಡಲು ಆರಂಭಿಸಿದ ಈ ಬಾಲಕ 2017ರ ಫೆಬ್ರವರಿ 8ಕ್ಕೆ ಕಂಠಪಾಠ ಪೂರ್ಣಗೊಳಿಸಿದ್ದಾನೆ. ಅಂದರೆ ಬರೀ ಆರು ತಿಂಗಳಲ್ಲಿ..[ಮೈಸೂರಿನಲ್ಲಿ ಸಿಕ್ಕ ಕುರಾನ್ ಜಮ್ಮುವಿನಲ್ಲಿ ಕಳುವಾಗಿದ್ದಲ್ಲ]
ಮಾಸಿಕ ರಜಾ ಹಾಗೂ ವಾರದ ರಜಾ ಕಳೆದರೆ ತಿಂಗಳಲ್ಲಿ ತರಗತಿ ನಡೆಯುವುದು ಬರೀ 23 ದಿನಗಳು ಮಾತ್ರ. ಅದರಲ್ಲೂ ದಸರಾದ 10 ದಿನಗಳ ರಜಾ ಮತ್ತು ಈದುಲ್ ಅಲ್ಹಾದ 8 ದಿನಗಳ ರಜಾ ಎಲ್ಲವನ್ನೂ ಕಳೆದರೆ ಈ ವಿದ್ಯಾರ್ಥಿಗೆ ಸಿಕ್ಕಿದ್ದು ಬರೀ 130 ದಿನಗಳು.
ಬೆಳಗ್ಗಿನಿಂದ ಸಂಜೆಯವರೆಗೆ ಶಾಲೆಗೆ ಹೋಗುವುದರಿಂದ ದಿನದಲ್ಲಿ ಹೆಚ್ಚೆಂದರೆ ಕುರ್ ಆನ್ ಅಧ್ಯಯನಕ್ಕೆ ಸಮಯ ಸಿಕ್ಕಿದ್ದು ಎರಡು ಗಂಟೆಗಳ ಸಮಯ. ಅಂದರೆ ಅಂದಾಜು 260 ಗಂಟೆಗಳು.
ಹಾಫಿಲ್ ಇನಾಯತುಲ್ಲಾಹ್ ಬಿಹಾರಿ ಎಂಬ ಮೇಷ್ಟ್ರು ನನ್ನ ಈ ಸಾಧನೆಯ ಹಿಂದಿರುವ ಪ್ರೇರಕ ಶಕ್ತಿ ಅಂತಾನೆ ಕುರ್ ಆನ್ ಕಂಠಪಾಠ ಮಾಡಿದ ಸಾಲಿಂ. ಈತನ ಈ ಸಾಧನೆ ಎಲ್ಲರಿಗೂ ಮಾದರಿಯೇ ಸರಿ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications