ಕೊಂಚಾಡಿಯಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ
ಮಂಗಳೂರು, ಡಿಸೆಂಬರ್ 19: ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠವಾದ ಮಂಗಳೂರಿನ ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಇಂದು ನಡೆಯಿತು .
ವೈಕುಂಠ ಏಕಾದಶಿ, ಮೋಕ್ಷಕ್ಕಾಗಿ ಪ್ರಾರ್ಥಿಸುವ ದಿನ: ದೇಗುಲಗಳ ವಿಶೇಷ
ಈ ಪ್ರಯುಕ್ತ ಶ್ರೀ ಸಂಸ್ಥಾನದ ಪೀಠಾಧಿಪತಿ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಶ್ರೀದೇವರ " ಸ್ವರ್ಣ ರಥೋತ್ಸವ "ವಿಜೃಂಭಣೆಯಿಂದ ಜರುಗಿತು .
ಕುಕ್ಕೆ ಸುಬ್ರಹ್ಮಣ್ಯದಲ್ಲಿ 134 ಭಕ್ತರಿಂದ ಎಡೆ ಮಡೆ ಸ್ನಾನ ಸೇವೆ
ಕಾಸರಗೋಡು ಮೊಕ್ಕಾಂ ನಿಂದ ಆಗಮಿಸಿದ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿ ಯವರಿಗೆ ಸಕಲ ಬಿರುದು ಬಾವಳಿಗಳೊಂದಿಗೆ ಗೌರವ ಪೂರ್ವಕವಾಗಿ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ದೇವಸ್ಥಾನದ ಆಡಳಿತ ಮಂಡಳಿಯವರು ಪೂರ್ಣ ಕುಂಭ ಸ್ವಾಗತ ನೀಡಿದರು .
ಬಳಿಕ ಶ್ರೀ ದೇವರ ದರ್ಶನ , ಗುರುಗಳ ಪಾದ ಪೂಜೆ ನೆರವೇರಿತು. ಸರ್ವಾಲಂಕೃತ ಶ್ರೀ ದೇವಿಯ ವಿಗ್ರಹವನ್ನು ಸ್ವರ್ಣರಥದಲ್ಲಿ ಪ್ರತಿಷ್ಠಾಪಿಸಿ ಸ್ವಾಮೀಜಿ ಯವರಿಂದ ಮಹಾ ಮಂಗಳಾರತಿ ನಡೆಯಿತು . ಸ್ವರ್ಣ ರಥವನ್ನು ದೇವಳದ ಪ್ರಾಂಗಣದಲ್ಲಿ ಎಳೆಯಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಕಸ್ತುರಿ ಸದಾಶಿವ ಪೈ , ಜಿ .ರತ್ನಕರ ಕಾಮತ್ , ಅಚ್ಚುತ್ ಪೈ , ಸುರೇಶ್ ಕಾಮತ್ , ಶಶಿಧರ್ ಪೈ ಮಾರೂರ್ , ಗೋಕುಲದಾಸ್ ನಾಯಕ್ , ಎಂ . ವಿಜಯ್ ಪೈ , ಉರ್ವಿ ರಾಧಾಕೃಷ್ಣ ಶೆಣೈ , ಜಿ . ಅನಿಲ್ ಕಾಮತ್ ,ಅರುಣ್ ಕಾಮತ್ , ಸೂರಜ್ ಕಾಮತ್ , ಪ್ರಶಾಂತ್ ಪೈ, ಯು .ವಿ . ಕಿಣಿ ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು .