ಉಜಿರೆ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಮಂಗಳೂರು, ಡಿ. 15: ಮಂಗಳೂರು ವಿವಿ ಮಟ್ಟದ ಪುರುಷರ ಮತ್ತು ಮಹಿಳೆಯರ ಭಾರ ಎತ್ತುವ ಸ್ಪರ್ಧೆಯಲ್ಲಿ ಉಜಿರೆ ಎಸ್ ಡಿಎಂ ಕಾಲೇಜು ತಂಡ ಐದು ಹೊಸ ಕೂಟ ದಾಖಲೆಯೊಂದಿಗೆ ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಎಸ್ ಡಿಎಂ ಕಾಲೇಜು ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. ಗುರುರಾಜ್ (56ಕೆಜಿ ಚಿನ್ನ), ಸಂತೋಷ್ ಕುಮಾರ್ (69ಕೆಜಿ) ಚಿನ್ನ, ಅರುಣ್ ಕುಮಾರ್ (77ಕೆಜಿ) ಚಿನ್ನ, ಡಿ.ಆರ್. ಹರ್ಷ (85ಕೆಜಿ) ಚಿನ್ನ, ಸುಕೇತ (69ಕೆಜಿ) ಚಿನ್ನ, ಮಂಜುನಾಥ್ ಎಂ (62ಕೆಜಿ) ಚಿನ್ನ, ತುಶ್ಮಿತ (48ಕೆಜಿ) ಚಿನ್ನ ಗಳಿಸಿದ್ದಾರೆ.[ಐದು ದಿನಗಳ ವಿಜೃಂಭಣೆಯ ಲಕ್ಷದೀಪ ಸಂಭ್ರಮ]
ಚಿನ್ನ ಗಳಿಸಿದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದದ್ದಾರೆ. ಅಲ್ಲದೇ ಇಬ್ರಾಹಿಂ (94ಕೆಜಿ) ಬೆಳ್ಳಿ, ಅಭಿನಯ (58ಕೆಜಿ) ಕಂಚು, ಪ್ರಜ್ಞಾ (63ಕೆಜಿ) ಬೆಳ್ಳಿ, ಅಖಿಲಾ (75+ಕೆಜಿ) ಬೆಳ್ಳಿಯ ಪದಕ ಪಡೆದ ಸಾಧನೆ ಮಾಡಿದ್ದಾರೆ. ಕ್ರೀಡಾ ವಿದ್ಯಾರ್ಥಿಗಳಿಗೆ ರಾಜೇಂದ್ರ ಪ್ರಸಾದ್ ತರಬೇತಿ ನೀಡಿದ್ದರು.