ಮಂಗಳೂರಿನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಲಿರುವ 3,800 ಕೋಟಿ ಮೊತ್ತದ ಯೋಜನೆಗಳಿವು
ಮಂಗಳೂರು, ಸೆಪ್ಟೆಂಬರ್, 01: ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಲಿದ್ದು, ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಲಿದ್ದು, ಸುಮಾರು 3,800 ಕೋಟಿ ರೂಪಾಯಿಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳಿಗೆ ಶಂಕುಸ್ಥಾಪನೆ ನೀಡಲಿದ್ದಾರೆ.
ಭದ್ರತೆಗೆ 2,000 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಕೆಎಸ್ಆರ್ಪಿ, ಎಎನ್ಎಫ್, ಸಿಎಐಆರ್, ಡಿಐಆರ್, ಆರ್ ಎಎಫ್, ಗರುಡ ಪಡೆ ಸೇರಿದಂತೆ ಒಟ್ಟಾರೆ 3,000ದಷ್ಟು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಭದ್ರತೆಗೆ ಯಾವ ಲೋಪ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಅವರು ಪಕ್ಕದ ರಾಜ್ಯ ಕೇರಳಕ್ಕೆ ಭೇಟಿ ನೀಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಂತರ ಮಂಗಳೂರು ನಗರಕ್ಕೆ ಆಗಮಿಸಲಿದ್ದಾರೆ.
ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ಉದ್ದೇಶದಿಂದ ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ. ಹಾಗಾಗಿ ರಾಜ್ಯದ ಬಿಜೆಪಿ ನಾಯಕರಿಗೆ ಅವರು ಉತ್ತೇಜನ ನೀಡುವ ಸಾಧ್ಯತೆಯಿದೆ. ಒಟ್ಟು 224 ಸ್ಥಾನಗಳಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಪಕ್ಷ ಮತ್ತು ಅಧಿಕೃತ ಮೂಲಗಳ ಪ್ರಕಾರ ಪ್ರಧಾನಿ ಅವರು ಮಧ್ಯಾಹ್ನ 1:30ರ ಸುಮಾರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಅವರು ಪಣಂಬೂರಿನ ನವ ಮಂಗಳೂರು ಬಂದರು ಪ್ರಾಧಿಕಾರ ಆವರಣಕ್ಕೆ ಬರಲಿದ್ದಾರೆ.
ಗೋಲ್ಡ್
ಫಿಂಚ್
ಸಿಟಿ
ಮೈದಾನ
ಸಿದ್ಧತೆ:
ವಿವಿಧ
ಯೋಜನೆಗಳಿಗೆ
ಶಂಕುಸ್ಥಾಪನೆ
ನೆರವೇರಿಸಿ,
ಸಮಾರಂಭದಲ್ಲಿ
ಪಾಲ್ಗೊಳ್ಳಲು
ಅವರು
ಗೋಲ್ಡ್
ಫಿಂಚ್
ಸಿಟಿ
ಮೈದಾನಕ್ಕೆ
ಆಗಮಿಸಲಿದ್ದಾರೆ.
ಗೋಲ್ಡ್
ಫಿಂಚ್
ಸಿಟಿ
ಮೈದಾನದಲ್ಲಿ
ನಡೆಯಲಿರುವ
ಕಾರ್ಯಕ್ರಮಕ್ಕೆ
ಸುಮಾರು
ಎರಡು
ಲಕ್ಷ
ಜನರು
ಆಗಮಿಸುವ
ಸಾಧ್ಯತೆ
ಇದೆ
ಎಂದು
ಈಗಾಗಲೇ
ಪಕ್ಷದ
ಮೂಲಗಳು
ತಿಳಿಸಿವೆ.
ಜಿಲ್ಲಾಡಳಿತವು
ಬಿಜೆಪಿಯ
ಒಂದು
ಲಕ್ಷ
ಕಾರ್ಯಕರ್ತರ
ಜೊತೆಗೆ
ಕೇಂದ್ರ
ಸರ್ಕಾರದ
ವಿವಿಧ
ಕಲ್ಯಾಣ
ಯೋಜನೆಗಳ
ಸುಮಾರು
70,000
ಫಲಾನುಭವಿಗಳನ್ನು
ಕಾರ್ಯಕ್ರಮಕ್ಕೆ
ಆಹ್ವಾನಿಸಿದೆ.
ಕಾರ್ಯಕ್ರಮದಲ್ಲಿ
ಭಾಗಿಯಾಗುವ
ನಾಯಕರು:
ದಕ್ಷಿಣ
ಕನ್ನಡ
ಜಿಲ್ಲೆ,
ಉಡುಪಿ
ಸೇರಿದಂತೆ
ವಿವಿಧೆಡೆಯಿಂದ
ಪಕ್ಷದ
ಕಾರ್ಯಕರ್ತರು
ಹಾಗೂ
ಸರ್ಕಾರಿ
ಕಾರ್ಯಕ್ರಮಗಳ
ಫಲಾನುಭವಿಗಳು
ಆಗಮಿಸುವ
ಸಾಧ್ಯತೆ
ಇದೆ.
ಕಾರ್ಯಕ್ರಮದಲ್ಲಿ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ,
ಕೇಂದ್ರ
ಸಚಿವರಾದ
ಸರ್ಬಾನಂದ
ಸೋನೊವಾಲ್,
ಪ್ರಹ್ಲಾದ್
ಜೋಶಿ,
ಶೋಭಾ
ಕರಂದ್ಲಾಜೆ
ಭಾಗವಹಿಸಲಿದ್ದಾರೆ.
ಇನ್ನು
ರಾಜ್ಯ
ಸಚಿವರು,
ಬಿಜೆಪಿ
ಶಾಸಕರು
ಮತ್ತು
ಮುಖಂಡರು
ಕಾರ್ಯಕ್ರಮದಲ್ಲಿ
ಭಾಗವಹಿಸುವ
ಸಾಧ್ಯತೆ
ಇದೆ.
ಪ್ರಧಾನ
ಮಂತ್ರಿ
ಉದ್ಘಾಟಿಸಲಿರುವ
ಯೋಜನೆಗಳು:
ಮಂಗಳೂರು
ಬಂದರು
ಪ್ರಾಧಿಕಾರವು
ಕೈಗೆತ್ತಿಕೊಂಡ
ಕಂಟೈನರ್ಗಳು
ಮತ್ತು
ಇತರ
ಸರಕುಗಳನ್ನು
ನಿರ್ವಹಿಸುವ
ಯಾಂತ್ರೀಕರಣವನ್ನು
ಉದ್ಘಾಟಿಸಲಾಗುತ್ತದೆ.
280
ಕೋಟಿ
ರೂಪಾಯಿಗೂ
ಹೆಚ್ಚು
ಮೌಲ್ಯದ
ಯೋಜನೆಗಳು
ಉದ್ಘಾಟನೆ
ಆಗಲಿವೆ.
ಬಂದರಿಗೆ
ಸಂಬಂಧಪಟ್ಟಂತೆ
ಸುಮಾರು
1,000
ಕೋಟಿ
ಮೌಲ್ಯದ
ಐದು
ಯೋಜನೆಗಳಿಗೆ
ಶಂಕುಸ್ಥಾಪನೆ
ಮಾಡಲಿದ್ದಾರೆ.
ಮಂಗಳೂರು
ರಿಫೈನರಿ
ಮತ್ತು
ಪೆಟ್ರೋಕೆಮಿಕಲ್ಸ್
ಲಿಮಿಟೆಡ್ನಿಂದ
ಕೈಗೆತ್ತಿಕೊಂಡ
ಎರಡು
ಯೋಜನೆಗಳಾದ
ಬಿಎಸ್
6
ಉನ್ನತೀಕರಣ
ಯೋಜನೆ,
ಮತ್ತು
680
ಕೋಟಿ
ರೂಪಾಯಿ
ಮೌಲ್ಯದ
ಸಮುದ್ರದ
ನೀರಿನ
ಡಿಸಾಲಿನೇಶನ್
ಪ್ಲಾಂಟ್
ಅನ್ನು
ಉದ್ಘಾಟಿಸಲಿದ್ದಾರೆ.
ಪ್ರಧಾನಿ
ಭೇಟಿ
ಹಿನ್ನೆಲೆಯಲ್ಲಿ
ಮಂಗಳೂರು
ನಗರದಲ್ಲಿ
ಬಿಗಿ
ಪೊಲೀಸರು
ಬಂದೋಬಸ್ತ್
ಏರ್ಪಡಿಸಿದ್ದಾರೆ.
ಜರ್ಮನ್
ತಂತ್ರಜ್ಞಾನದಲ್ಲಿ
ಬೃಹತ್
ಪೆಂಡಾಲ್:
25
ಎಕರೆ
ಪ್ರದೇಶದಲ್ಲಿ
ಜರ್ಮನ್
ತಂತ್ರಜ್ಞಾನದಲ್ಲಿ
ಬೃಹತ್
ಪೆಂಡಾಲ್
ಅಳವಡಿಕೆ
ಕಾರ್ಯ
ನಡೆಯುತ್ತಿದ್ದು,
ಸಾವಿರಾರು
ಮಂದಿ
ಕಾರ್ಮಿಕರು
ಕೆಲಸದಲ್ಲಿ
ನಿರತರಾಗಿದ್ದಾರೆ.
ಮೈದಾನದ
ಸುತ್ತಲೂ
ತಡೆ
ಬೇಲಿಯ
ಅಳವಡಿಕೆ
ಮಾಡಲಾಗಿದೆ.
ಸ್ಟೀಲ್
ಶೀಟ್ಗಳ
ಮೇಲೆ
ಬಿಳಿ
ಬಟ್ಟೆ
ಹಾಕಿ
ತಡೆಬೇಲಿ
ನಿರ್ಮಾಣ
ಮಾಡಲಾಗಿದೆ.
ಕಾರ್ಯಕ್ರಮಕ್ಕೆ
ಒಂದೂವರೆ
ಲಕ್ಷ
ಜನ
ಸೇರುವ
ನಿರೀಕ್ಷೆ
ಇದೆ.
ಪೆಂಡಾಲ್
ಒಳಗಡೆ
80
ಸಾವಿರ
ಜನ
ಕುಳಿತುಕೊಳ್ಳುವ
ವ್ಯವಸ್ಥೆ
ಮಾಡಲಾಗಿದೆ.
ಮೈದಾನದ
ಸುತ್ತಲೂ
15
ಕಡೆಗಳಲ್ಲಿ
ವಾನಹಗಳ
ಪಾರ್ಕಿಂಗ್
ವ್ಯವಸ್ಥೆ
ಮಾಡಲಾಗಿದೆ.