Get Updates
Get notified of breaking news, exclusive insights, and must-see stories!

ಸಿದ್ಧಾರ್ಥ ನಾಪತ್ತೆಯಾದ ಜಾಗದಿಂದ ಒಂದೇ ಕಿ.ಮೀ ದೂರದಲ್ಲಿ ಅರಬ್ಬೀ ಸಮುದ್ರ

Recommended Video

      V G Siddhartha : ಸಿದ್ದಾರ್ಥ ನಾಪತ್ತೆಯಾದ ಸ್ಥಳದಿಂದ ಒಂದೇ ಕಿಮೀ ದೂರದಲ್ಲಿದೆ ಅರಬ್ಬೀ ಸಮುದ್ರ |Oneindia Kannada

      ಮಂಗಳೂರು, ಜುಲೈ 30: ಕಾಫೀ ಡೇ ಮಾಲೀಕ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ವಿ ಜಿ ಸಿದ್ಧಾರ್ಥ ನಾಪತ್ತೆಯಾಗಿರುವ ಪ್ರಕರಣದ ನಿಗೂಢತೆ ಮುಂದುವರಿದಿದೆ.

      ಮಂಗಳೂರು ಹೊರವಲಯದ ಕಲ್ಲಾಪು - ಹೆಕ್ಕೂರು ವ್ಯಾಪ್ತಿಯ ನೇತ್ರಾವತಿ ನದಿ ಸೇತುವೆಯ ಸ್ಥಳದಿಂದ ಸಿದ್ಧಾರ್ಥ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸ್ಥಳ ಶೋಧ ಕಾರ್ಯಕ್ಕೆ ಅತ್ಯಂತ ಸವಾಲಿನ ಜಾಗ ಎನ್ನುವುದು ಸ್ಥಳೀಯರ ಅಭಿಪ್ರಾಯ.

      ಯಾಕೆಂದರೆ, ಇಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ಅರಬ್ಬೀ ಸಮುದ್ರವಿದ್ದು, ನೀರಿನ ಒಳಸುಳಿವು ತುಂಬಾ ಹೆಚ್ಚಾಗಿರುತ್ತದೆ. ಜೊತೆಗೆ, ಸಮುದ್ರಕ್ಕೆ ಹತ್ತಿರದ ಪ್ರದೇಶವಾಗಿರುವುದರಿಂದ (ಅಳಿವೆಬಾಗಿಲು) , ನೀರಿನ ಹರಿವು ತೀರಾ ರಭಸದಿಂದ ಕೂಡಿರುತ್ತದೆ.

      The Place Where VG Siddhartha Is Missing Just One KM Away From Arabian Sea

      ಕೆಎ-03-ಎನ್‌ಸಿ-2592 ನೊಂದಣಿಯ ಇನ್ನೋವಾ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸಿದ್ಧಾರ್ಥ ಪ್ರಯಾಣಿಸುತ್ತಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚು ಜನ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

      ಈ ಹಿಂದೆ ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರು ಕಲಾವಿದರು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಎಷ್ಟೇ ಶೋಧ ನಡೆಸಿದರೂ, ಇಬ್ಬರ ಶವ ಪತ್ತೆಯಾಗಿರಲಿಲ್ಲ. ಕೊನೆಗೆ, ಮಂಗಳೂರಿನ ಬೆಂಗ್ರೆ ಮುಳುಗುತಜ್ಞರ ತಂಡ ಆಗಮಿಸಿ ಶವವನ್ನು ಮೇಲೆಕ್ಕೆತ್ತಿತ್ತು.

      ಬೆಂಗ್ರೆ ತಂಡ. ವೃತ್ತಿಪರ ಈಜುಗಾರರು, ಎನ್ ಡಿ ಆರ್ ಎಫ್ ಜೊತೆ ಸೇರಿ ಶೋಧಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+