ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗೆ ಮಂಗಳೂರಿನ ಸಸಿಹಿತ್ಲು ಮುಂಡ ಬೀಚ್ ಸಿದ್ಧ
ಮಂಗಳೂರು, ಡಿಸೆಂಬರ್. 27: 2017 ಮೇ 27ರಿಂದ 29ರವರೆಗೆ ನಡೆಯಲಿರುವ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಗೆ ಸಸಿಹಿತ್ಲು ಮುಂಡ ಬೀಚ್ ಸಿದ್ಧಗೊಂಡಿದೆ.
ಹಳೆಯಂಗಡಿ ಪಂಚಾಯಿತಿ ನೇತೃತ್ವದಲ್ಲಿ ಈ ವರ್ಷದ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ಕ್ರೀಡಾಕೂಟ ನಡೆಯಲಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಮಂತ್ರ ಸರ್ಫ್ ಕ್ಲಬ್ ತರಬೇತಿಯಡಿಯಲ್ಲಿ ಪಂಜಾಬ್, ಮಹಾರಾಷ್ಟ್ರ,ಬೆಂಗಳೂರು, ಹಾಗೂ ಹೊರ ದೇಶಗಳ ಕ್ರೀಡಾಪಟುಗಳಿಗೆ ಬೀಚ್ ನಲ್ಲಿ ತರಬೇತಿ ನೀಡಲಾಗುತ್ತಿದೆ.
ಕಡಲ್ಕೊರೆತದಿಂದ ನಾಶವಾಗುವ ಭೀತಿ: ಶಾ೦ಭಾವಿ ಮತ್ತು ನಂದಿನಿ ನದಿಯ ಒತ್ತಡ ಕಡಿಮೆಯಾದ ಕಾರಣ ಸಮುದ್ರ ಅಲೆಗಳ ಒಳ ಪ್ರವೇಶಿಸಿ ಮುಂಡ ಬೀಚ್ ಭೂಭಾಗವನ್ನು ತನ್ನ ಅಪೋಷನಕ್ಕೆ ತೆಗೆದುಕೊಳ್ಳುತ್ತಿದೆ.

ಇದರಿಂದ ಮುಂಡ ಬೀಚ್ ಪೂರ್ಣ ಭಾಗದಲ್ಲಿ ನಂದಿನಿ ನದಿ ಪಾತ್ರದಲ್ಲಿ ಕಡಲ್ಕೊರತೆ ತ್ರಿವಗೊಳ್ಳುತ್ತಿದೆ.
ಮುಂಡ ಪ್ರದೇಶ ಪಶ್ಚಿಮ ತೀರದಲ್ಲಿ ಕಡಲ್ಕೊರತೆ ತಪ್ಪಿಸಲು ಕಲ್ಲಿನ ಗೋಡೆ ನಿರ್ಮಿಸಲಾಗಿದೆ. ಇನ್ನೂಳಿದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಕಲ್ಲಿನ ಗೋಡೆ ಅಗತ್ಯವಿದೆ.
ಸಮುದ್ರ ಅಲೆಗಳ ನೇರವಾಗಿ ಒಳ ಪ್ರವೇಶಿಸುವ ಪರಿಣಾಮ ಮುಂಡ ಬೀಚ್ ಬಳಿ ಕಡಲ್ಕೊರತೆ ಉಂಟಾದರೆ, ಸಮದ್ರದಲ್ಲಿ ಸರ್ಫಿಂಗ್ ಕ್ರೀಡಾಪಟುಗಳಿಗೆ ಸೂಕ್ತವಾದ ಅಲೆಗಳ ಕೊರತೆ ಉಂಟಾಗುತ್ತದೆ.
ನಂದಿನಿ ನದಿಯ ಸೇತುವೆಯಡಿ ಅಗಾಧ ಪ್ರಮಾಣದಲ್ಲಿ ಮಣ್ಣು ಹಾಗು ಹೂಳು ಸೇರಿಕೊಂಡಿರುವ ಕಾರಣ ನದಿಯ ವೇಗಕ್ಕೆ ಹಿನ್ನಡೆಯಾಗಿದೆ. ನದಿ ಹಿಂದಿನ ಭಾಗದಲ್ಲಿ ವೇಗದಲ್ಲಿ ಹರಿಯುತ್ತಿದೆ.
ಈ ನದಿ ನಿಧಾನಗತಿಯನ್ನು ಪಡೆದುಕೊಂಡ ಕಾರಣ ಸಂಗಮ ಪಾತ್ರದಲ್ಲಿ ಮಣ್ಣು ತುಂಬಿಕೊಂಡು ಶಂಭವಿ ನದಿ ಮುಂಡ ಪ್ರದೇಶದ ಕಡೆ ತನ್ನ ಒತ್ತಡ ಹರಿಸುತ್ತದೆ.
ಇದರಿಂದ ಸಮುದ್ರ ಅಲೆಗಳಿಗೆ ತಡೆ ಇಲ್ಲದೆ ನೇರವಾಗಿ ಮುಂಡ ಬೀಚ್ ಗೆ ಅಪ್ಪಳಿಸುತ್ತಿದೆ ಎಂದು ಸ್ಥಳೀಯ ಅನುಭವಿ ಮೀನುಗಾರರು ತಿಳಿಸಿದ್ದಾರೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ










Click it and Unblock the Notifications