ಮಂಗಳೂರು; ಇಂದಿನಿಂದ ರಂಝಾನ್ ಉಪವಾಸ ಆಚರಣೆ
ಮಂಗಳೂರು, ಏಪ್ರಿಲ್ 13; ಕರಾವಳಿಯಲ್ಲಿ ಇಂದಿನಿಂದ ರಂಜಾನ್ ಉಪವಾಸ ಆಚರಣೆ ಆರಂಭವಾಗಿದೆ. ಈ ವರ್ಷದ ಪವಿತ್ರ ರಂಜಾನ್ ಆಚರಣೆಗೆ ಚಂದ್ರದರ್ಶನವಾದ ಹಿನ್ನಲೆಯಲ್ಲಿ ಕರಾವಳಿ ಭಾಗದಲ್ಲಿ ಮುಸ್ಲಿಮರು ಇಂದಿನಿಂದ ಉಪವಾಸ ಆಚರಣೆ ಮಾಡಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಆಲ್ ಹಾಜ್ ಅಹ್ಮದ್ ಮುಸ್ಲಿಯಾರ್ ಈ ಕುರಿತು ಘೋಷಣೆ ಮಾಡಿದ್ದಾರೆ. ಕೇರಳದ ಕ್ಯಾಲಿಕಟ್ನಲ್ಲಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಉಪವಾಸ ಆರಂಭಿಸಲು ಸೂಚನೆ ನೀಡಲಾಗಿದೆ.
ಮಂಗಳವಾರದಿಂದ ಮೂವತ್ತು ದಿನಗಳ ಉಪವಾಸ ವೃತಾಚರಣೆಯನ್ನು ಮುಸ್ಲಿಮರು ಆಚರಿಸಲಿದ್ದಾರೆ. ಪಾಪ ವಿಮೋಚನೆಯ ಈ ತಿಂಗಳು ಬಹಳ ಪವಿತ್ರವಾದವುದು ಎಂಬುವುದು ಮುಸ್ಲಿಂ ಬಾಂಧವರ ನಂಬಿಕೆಯಾಗಿದೆ.

ಹಸಿವಿನ ಮಹತ್ವದೊಂದಿಗೆ ದಾನ, ಧರ್ಮ ಮತ್ತು ದೇವರ ಆರಾಧನೆಗೆ ಆದ್ಯತೆ ಮಾತ್ರವಲ್ಲದೆ ಹೆಚ್ಚಾಗಿ ಆಧ್ಯಾತ್ಮದ ನೆನಪಿಗಾಗಿ ಈ 30 ದಿನಗಳ ಕಠಿಣ ಉಪವಾಸವನ್ನು ಮುಸ್ಲಿಮರು ಮಾಡಲಿದ್ದಾರೆ.
ಒಂದು ತಿಂಗಳ ಬಳಿಕ ಮತ್ತೆ ಚಂದ್ರ ದರ್ಶನವಾದ ಸಂದರ್ಭದಲ್ಲಿ ರಂಜಾನ್ ಹಬ್ಬವನ್ನು ಮುಸ್ಲಿಮರು ಆಚರಿಸುತ್ತಾರೆ. ಕೇರಳ ಭಾಗದಿಂದ ಮಂಗಳೂರು, ಉಡುಪಿ, ಭಟ್ಕಳ ತನಕವೂ ಈ ವೃತಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ.












Click it and Unblock the Notifications