Get Updates
Get notified of breaking news, exclusive insights, and must-see stories!

ನಿಖರವಾಗಿ ಫಲಿತಾಂಶ ಹೇಳುವ ಜ್ಯೋತಿಷಿಗಳಿಗೆ 10 ಲಕ್ಷ ರೂ.ಬಹುಮಾನ: ಪ್ರೊ.ನರೇಂದ್ರ ನಾಯಕ್ ಘೋಷಣೆ

Recommended Video

      Lok Sabha Elections 2019: ಜ್ಯೋತಿಷಿಗಳಿಗೆ ಬಹಿರಂಗ ಸವಾಲೆಸೆದ ಪ್ರೊ ನರೇಂದ್ರ ನಾಯಕ್

      ಮಂಗಳೂರು, ಮೇ 10:ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಮುಗಿದಿದೆ. ಇನ್ನು ಕೇವಲ 2 ಹಂತದ ಮತದಾನ ಪ್ರಕ್ರಿಯೆ ಬಾಕಿ ಉಳಿದಿದೆ. ಇನ್ನು ಏನಿದ್ದರೂ ಚುನಾವಣೆಯಲ್ಲಿ ಯಾರು ಗೆಲ್ತಾರೆ, ಗೆದ್ದು ಯಾರು ಅಧಿಕಾರಕ್ಕೆ ಬರ್ತಾರೆ ಎಂಬ ಚರ್ಚೆ ಆರಂಭವಾಗಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಈ ಕುರಿತು ಎಲ್ಲೆಡೆ ಕುತೂಹಲ ಇದ್ದೇ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಜ್ಯೋತಿಷಿಗಳ ಭವಿಷ್ಯದ ನುಡಿ, ಲೆಕ್ಕಾಚಾರಗಳಿಗೆ ಭಾರೀ ಡಿಮ್ಯಾಂಡ್. ಈ ನಡುವೆ ಮಂಗಳೂರಿನ ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಜ್ಯೋತಿಷಿಗಳಿಗೆ ನೇರ ಸವಾಲು ಹಾಕಿದ್ದಾರೆ.

      ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತು ನಿಖರವಾಗಿ ಭವಿಷ್ಯ ನುಡಿದು ಅವರ ಹೇಳಿಕೆ, ಲೆಕ್ಕಾಚಾರ ಸರಿಯಾದರೆ ಅಂತಹ ಜ್ಯೋತಿಷಿಗಳಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ ನರೇಂದ್ರ ನಾಯಕ್ ಘೋಷಿಸಿದ್ದಾರೆ.

      Prof.Narendra Nayak open challenged to astrologers for predict the result

      ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ನರೇಂದ್ರ ನಾಯಕ್ ಕಳೆದ ಮೂವತ್ತು ವರ್ಷಗಳಿಂದ ಜ್ಯೋತಿಷಿಗಳಿಗೆ ಈ ಸವಾಲನ್ನು ಹಾಕುತ್ತಲೇ ಇದ್ದಾರೆ. ಆದರೆ ಯಾವೊಬ್ಬ ಜ್ಯೋತಿಷಿಯು ಈವರೆಗೆ ಸವಾಲನ್ನು ಯಶಸ್ವಿಯಾಗಿ ಪೂರೈಸಿಲ್ಲ. ನರೇಂದ್ರ ನಾಯಕ್ ಈ ಬಾರಿ ಚುನಾವಣೆಗೆ ಸಂಬಂಧಿಸಿದಂತೆ 20 ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ 18 ಪ್ತಶ್ನೆಗಳಿಗೆ ಸರಿ ಉತ್ತರ ನೀಡಿದರೂ ಅವರಿಗೆ 10 ಲಕ್ಷ ರೂಪಾಯಿ ನಗದು ನೀಡುವೆ ಎಂದು ತಿಳಿಸಿದ್ದಾರೆ.

      ಈ ಬಾರಿಯ ನರೇಂದ್ರ ನಾಯಕ್ ಅವರ ಪ್ರಶ್ನೆಗಳು ಇಂತಿವೆ...

      1.ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಪಕ್ಷ ಯಾವುದು? ( ಉತ್ತರವು ನಿರ್ದಿಷ್ಟವಾಗಿರಬೇಕು, ಸಂಖ್ಯೆಯಲ್ಲಿರಬೇಕು. ಬಿಡಿಯಾಗಿ ಪಕ್ಷವೊಂದು ಬಹುಮತ ಪಡೆಯದಿದ್ದಲ್ಲಿ ಉತ್ತರ ತಪ್ಪು ಎಂದು ಪರಿಗಣನೆ.ಸರಳ ಬಹುಮತವಾಗಿ ಪಕ್ಷವು ಪಡೆಯುವ ಸ್ಥಾನಗಳ ಸಂಖ್ಯೆಯಲ್ಲಿ ಶೇ. 5ರಷ್ಟು ದೋಷಕ್ಕೆ ಅವಕಾಶ)

      2. ಕೆಳಗಿನ ಪಕ್ಷ ಗೆಲ್ಲುವ ಸ್ಥಾನಗಳನ್ನು ಸಂಖ್ಯೆಗಳಲ್ಲಿ ಮಾತ್ರ ಹೇಳಬೇಕು. ಪ್ರಮಾಣದ ವ್ಯಾಪ್ತಿಯಲ್ಲಿ ಅಲ್ಲ. (ಉದಾಹರಣೆಗೆ : ಒಂದು ಪಕ್ಷವು ಎ ಬಿ ಸಿಯಿಂದ ಡಿ ಇಗಳ ನಡುವೆ ಇರುತ್ತದೆ ಎಂದು ಹೇಳುವಂತಿಲ್ಲ. ಉತ್ತರವು ಸಂಖ್ಯೆಯಲ್ಲಿ ಮಾತ್ರ ಇರಬೇಕು).

      3. ಕೆಳಗಿನ ಪ್ರತಿ ಅಭ್ಯರ್ಥಿ ಪಡೆಯಲಿರುವ ಮತಗಳ ಸಂಖ್ಯೆ (ಶೇ. 5 ದೋಷಕ್ಕೆ ಅವಕಾಶವಿದೆ. ಉತ್ತರ ಪ್ರಮಾಣದ ವ್ಯಾಪ್ತಿ ರೂಪದಲ್ಲಿರದೆ ನಿರ್ದಿಷ್ಟ ಸಂಖ್ಯೆಯಲ್ಲಿರಬೇಕು)

      ಇನ್ನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದು ನರೇಂದ್ರ ನಾಯಕ್, 13-9-1220/2, ವಿಠೋಬ ದೇವಸ್ಥಾನ ರಸ್ತೆ, ಮಂಗಳೂರು 575001ಕ್ಕೆ ಮೇ.22ರೊಳಗೆ ತಲುಪುವಂತೆ ಕಳುಹಿಸಲು ಸೂಚಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+