ಮಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಕ್ತಿ ಅಪಹರಣ
ಮಂಗಳೂರು, ಮಾರ್ಚ್ 28: ಪೋಲೀಸ್ ಹೆಸರಿನಲ್ಲಿ ವ್ಯಕ್ತಿಯೊಬ್ಬನನ್ನು ಅಪಹರಣ ಮಾಡಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಅರಿಯಡ್ಕದ ಕೊಟ್ಯಾಡಿ ಎಂಬಲ್ಲಿ ಘಟನೆ ಬೆಳಕಿಗೆ ಬಂದಿದೆ.
ಮಾರ್ಚ್ 26 ರಂದು ಇಲ್ಲಿಯ ಶ್ರೀಧರ್ ಎಂಬುವವರ ಮನೆಗೆ ಬಂದ ಇಬ್ಬರು ಅಪರಿಚಿತರ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಶ್ರೀಧರ್ ಅವರ ಮನೆಗೆ ಬಂದ ಇಬ್ಬರು ಅಪರಿಚಿತರು ತಾವು ಸಂಪ್ಯ ಪೋಲೀಸ್ ಸಿಬ್ಬಂದಿಗಳು ಎಂದು ಪರಿಚಯಿಸಿಕೊಂಡು ಪ್ರಕರಣ ಒಂದರ ವಿಚಾರಣೆಗೆ ಠಾಣೆಗೆ ಕರೆದು ಕೊಂಡು ಹೋಗಲು ಬಂದಿದ್ದೆವೆ ಎಂದು ತಿಳಿಸಿದ್ದಾರೆ.

ಕೂಲಿ ಕಾರ್ಮಿಕನಾಗಿರುವ ಶ್ರೀಧರ್ ಪೊಲೀಸರೆಂದು ಪರಿಚಯಿಸಿಕೊಂಡ ವ್ಯಕ್ತಿಗಳೊಂದಿಗೆ ಎದುರು ಮಾತನಾಡದೇ ಅವರೊಂದಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಆದರೆ ಮಾರ್ಚ್ 26 ರಂದು ತೆರಳಿದ್ದ ಶ್ರೀಧರ್ ಈವರೆಗೆ ಮನೆಗೆ ಮರಳಿಲ್ಲ . ಈ ಕುರಿತು ಶ್ರೀಧರ್ ಪತ್ನಿ ಸೌಮ್ಯ ಸಂಪ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.












Click it and Unblock the Notifications