ಆಟಿ ಅಮಾವಾಸ್ಯೆಗೆ ಪಾಲೆ ಮರದ ಕಷಾಯ ಕುಡಿದ್ರಾ?
ಆಷಾಢ ಮಾಸ ಕಳೆದಿದೆ, ತುಳುನಾಡಿನ ಜನರು ಆಟಿ ಅಮಾವಾಸ್ಯೆಯನ್ನು ವಿಶೇಷವಾಗಿ ಹಾಲೆ ಮರದ ಕಷಾಯ ಕುಡಿಯುವ ಮೂಲಕ ಆಚರಿಸಿದ್ದಾರೆ. ವೇದಮಾಯು ಆಯುರ್ವೇದಿಕ್ ಕ್ಲಿನಿಕ್ ವತಿಯಿಂದ ಮಂಗಳೂರಿನಲ್ಲಿ ಎರಡು ಕಡೆ ಉಚಿತವಾಗಿ ಜನರಿಗೆ ಕಷಾಯವನ್ನು ವಿತರಣೆ ಮಾಡಲಾಗಿದೆ. ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸೇವೆಯನ್ನು ಮಾಡಲಾಗುತ್ತಿದೆ.
ಆಷಾಢ ಅಮಾವಾಸ್ಯೆಯ ದಿನವನ್ನು ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯೇ ಘಟ್ಟದ ಮೇಲಿನ ಪ್ರದೇಶದಲ್ಲಿ ಭೀಮನ ಅಮಾವಾಸ್ಯೆಯಾಗಿದೆ. ಕರಾವಳಿ ಭಾಗದ ಜನರು ಆಟಿ ಅಮಾವಾಸ್ಯೆಯಂದು, ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ ಅಥವ ಹಾಲೆ ಮರದ ಕಷಾಯ ಕುಡಿಯುವುದು ಸಂಪ್ರದಾಯ. ಇದಕ್ಕೆ ಆತಿ ಕಷಾಯ ಎಂದು ಕರೆಯುತ್ತಾರೆ.
ಹಾಲೆ ಮರದ ತೊಗಟೆಯನ್ನು ತೆಗೆದು ಅದನ್ನು ಜಜ್ಜಿ ಕಷಾಯ ತಯಾರಿಸಲಾಗುತ್ತದೆ. ಕಹಿಯಾದ ಈ ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಜನರ ನಂಬಿಕೆ. ವೈದ್ಯರು ಸಹ ಇದನ್ನು ಒಪ್ಪುತ್ತಾರೆ. ಮಂಗಳೂರಿನ ವೇದಮಾಯು ಆಯುರ್ವೇದಿಕ್ ಕ್ಲಿನಿಕ್ ವತಿಯಿಂದ ಈ ಬಾರಿ ಎರಡು ಶಿಬಿರಗಳನ್ನು ನಡೆಸಿ ಹಾಲೆ ಮರದ ಕಷಾಯವನ್ನು ಜನರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.

ಆಟಿ ಅಮಾವಾಸ್ಯೆ ಆಚರಣೆ
ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯನ್ನು ಆಚರಣೆ ಮಾಡಲಾಗಿದೆ. ಕಹಿಯಾದ ಕಷಾಯ ಕುಡಿದು ಜನರು ತಮ್ಮ ಹಿಂದಿನ ಸಂಪ್ರದಾಯವನ್ನು ಇಂದಿಗೂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಘಟ್ಟದ ಮೇಲಿನ ಪ್ರದೇಶದಲ್ಲಿ ಈ ಆಟಿ ಅಮಾವಾಸ್ಯೆ ಅಮಾವಾಸ್ಯೆ ಭೀಮನ ಅಮಾವಾಸ್ಯೆ ಎಂದು ಪ್ರಸಿದ್ಧವಾಗಿದೆ.

ಕರಾವಳಿಯ ಸಂಪ್ರದಾಯ
ಆಟಿ ಅಮಾವಾಸ್ಯೆಯಂದು ಆತಿ ಕಷಾಯ ಕುಡಿಯುವುದು ತುಳುನಾಡಿನ ಸಂಪ್ರದಾಯ. ಅಮಾವಾಸ್ಯೆಯ ದಿನವನ್ನು ಕಹಿಯಾದ ಕಷಾಯ ಕುಡಿದು ಆರಂಭಿಸಬೇಕು ಎಂಬುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಇದನ್ನು ಕುಡಿದರೆ ರೋಗ ನಿರೋಧ ಶಕ್ತಿ ಹೆಚ್ಚುತ್ತದೆ ಎಂದು ಜನರು ನಂಬುತ್ತಾರೆ. ವೈದ್ಯರು ಇದನ್ನು ಒಪ್ಪಿದ್ದಾರೆ.

ವೇದಮಯ ಆಯುರ್ವೇದಿಕ್ ಕ್ಲಿನಿಕ್ ವತಿಯಿಂದ ಕಷಾಯ ವಿತರಣೆ
ಎರಡು ವರ್ಷಗಳಿಂದ ಮಂಗಳೂರಿನ ವೇದಮಾಯು ಆಯುರ್ವೇದಿಕ್ ಕ್ಲಿನಿಕ್ ವೈದ್ಯರಾದ ಡಾ.ಕೇಶವರಾಜ್ ಉಚಿತವಾಗಿ ಆತಿ ಕಷಾಯ ಹಂಚಿಕೆ ಮಾಡುತ್ತಾರೆ. ತುಳುನಾಡಿನ ಸಂಸ್ಕೃತಿ ಉಳಿಸುವ ಜೊತೆಗೆ ಜನರಿಗೆ ಸಹಾಯಕವಾಗಲಿ ಎಂದು ಈ ಕಾರ್ಯವನ್ನು ಅವರು ಮಾಡುತ್ತಿದ್ದಾರೆ.

ಒಂದೇ ರೀತಿಯ ಮರಗಳು
ಹಾಲೆ ಮರದ ತೊಗಟೆಯಿಂದ ಆತಿ ಕಷಾಯ ತಯಾರಿಸುತ್ತಾರೆ. ಹಾಲು ಮರದ ರೀತಿ ಹಲವಾರು ಮರಗಳಿವೆ. ಅವುಗಳನ್ನು ಸರಿಯಾಗಿ ಗುರುತಿಸಿ ಕಷಾಯ ತಯಾರು ಮಾಡಬೇಕು ಇಲ್ಲದಿದ್ದರೆ, ಬೇರೆ ಮರದ ತೊಗಟೆ ಬಳಸಿ ಮಾಡಿದ ಕಷಾಯ ಕುಡಿದರೆ ಸಾವು ಸಂಭವಿಸುತ್ತದೆ ಎನ್ನುತ್ತಾರೆ ಡಾ.ಕೇಶವರಾಜ್.

ಕಷಾಯ ಹೇಗೆ ಮಾಡುತ್ತಾರೆ?
ಹಾಲೆ ಮರದ ತೊಗಟೆಯನ್ನು ಜಜ್ಜಿ ಕಷಾಯ ತಯಾರಿಸಲಾಗುತ್ತದೆ. ಜೀರಿಗೆ, ಬೆಳ್ಳುಳ್ಳಿ ಮತ್ತು ಕಾಳುಮೆಣಸನ್ನು ಕಷಾಯಕ್ಕೆ ಸೇರಿಸಲಾಗುತ್ತದೆ.ಈ ಬಾರಿ ವೇದವಾಯು ಆಯುರ್ವೇದಿಕ್ ಕ್ಲಿನಿಕ್ ವೈದ್ಯರಾದ ಡಾ.ಕೇಶವರಾಜ್ ಅವರು ಸಾಹಿತ್ಯ ಕೇಂದ್ರದ ಬಳಿ ಮತ್ತು ಪಾಂಡೇಶ್ವರದಲ್ಲಿ ಉಚಿತವಾಗಿ ಕಷಾಯ ಹಂಚಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಸೇವೆಯನ್ನು ಅವರು ಮಾಡುತ್ತಿದ್ದು, ಮುಂದಿನ ವರ್ಷ ಸುಮಾರು 2 ಸಾವಿರ ಜನರಿಗೆ ಕಷಾಯ ಹಂಚಲು ನಿರ್ಧರಿಸಿದ್ದಾರೆ.

ಕಷಾಯದ ಉಪಯೋಗವೇನು?
ಆತಿ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕಿಡ್ನಿ ಸರಿಯಾಗಿ ಕೆಲಸ ಮಾಡುತ್ತದೆ ಎಂದು ಜನರು ನಂಬಿದ್ದಾರೆ. ವೈದ್ಯರು ಸಹ ಇದನ್ನು ಒಪ್ಪುತ್ತಾರೆ.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ












Click it and Unblock the Notifications