ಬಿಡಿಭಾಗಗಳನ್ನು ಉದುರಿಸುತ್ತಾ ಓಡುವ ಪೊಲೀಸ್ ಜೀಪು!
ಮಂಗಳೂರು, ಜನವರಿ 12: ಆಧುನಿಕ ಕಾಲಘಟ್ಟದಲ್ಲಿ ಜನಜೀವನವು ತಂತ್ರಜ್ಞಾನ ಆಧಾರಿತವಾಗಿ ಬದಲಾಗುತ್ತಿದ್ದಂತೆ ಪೊಲೀಸ್ ಇಲಾಖೆಯೂ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ನೂತನ ತಂತ್ರಜ್ಞಾನ, ಪರಿಕರಗಳನ್ನು ತನ್ನಲ್ಲಿ ಸೇರ್ಪಡೆಗೊಳಿಸಿಕೊಳ್ಳುತ್ತಿದೆ. ಆದರೆ, ಈ ಆಧುನಿಕತೆ ಕೇವಲ ನಗರ ಪೊಲೀಸರಿಗೆ ಲಭ್ಯವಾಗುವುದರ ಜತೆಗೆ ತಾಲೂಕುಗಳ ಹೊರವಲಯದಲ್ಲಿರುವ ಪೊಲೀಸ್ ಠಾಣೆಗಳಿಗೂ ಅವಶ್ಯಕತೆಯಿದೆ.
ಕಾವೂರು ವಲಯದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯ ಜೀಪ್ ನೋಡಿದರೆ, ಖಂಡಿತವಾಗಿಯೂ ಹೀಗನ್ನಿಸದಿರದು. ಪೊಲೀಸರಿಗೆ ರಿವಾಲ್ವರ್, ಬಂದೂಕು, ಲಾಠಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅವರು ಬಳಸುವ ಸರ್ಕಾರಿ ವಾಹನಗಳು.[ಮಂಗಳೂರಿಗೆ ಬಂದ 25 ಪೋಲಿಸ್ ಗಸ್ತು ವಾಹನಗಳ ವಿಶೇಷತೆಗಳೇನು?]

ಏಕೆಂದರೆ, ಅಪರಾಧ ಅಥವಾ ಗಲಭೆ ನಡೆಯುವ ಸಂದರ್ಭದಲ್ಲಿ ನಿಗದಿತ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಹೋಗಬೇಕಲ್ಲವೇ? ಇಲ್ಲವಾದರೆ, ಹಳೇ ಸಿನಿಮಾಗಳಲ್ಲಿ ಬಂದಂತೆ ಎಲ್ಲಾ ಮುಗಿದ ಮೇಲೆ ಬರಬೇಕಾಗುತ್ತದೆ. ಹಾಗಾಗಿ, ಪೊಲೀಸರಿಗೆ ಒದಗಿಸಲಾಗಿರುವ ವಾಹನಗಳು ಸುಸ್ಥಿತಿಯಲ್ಲಿರಬೇಕಾದ್ದು ಅತ್ಯವಶ್ಯ.
ಆದರೆ, ಕಾವೂರು ವಲಯದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯ ಜೀಪ್ ಸುಸ್ಥಿತಿಯಲ್ಲಿರುವುದು ಬಿಡಿ, ರಿಪೇರಿ ಮಾಡಿಸಲೂ ಆಗದ ಪರಿಸ್ಥಿತಿಗೆ ಬಂದು ಮುಟ್ಟಿದೆ. ಮುಟ್ಟದರೆ ಮುನಿ ಎಂಬಂತೆ ಈ ಜೀಪಿನ ಬಿಡಿಭಾಗಗಳು ಆಗಾಗ, ಎಲ್ಲಿಬೇಕೆಂದರಲ್ಲಿ ಕಳಚಿ ಬೀಳುತ್ತವೆ. ಇದು ಪೊಲೀಸರಿಗೆ ತೊಡಕಾಗಿ ಪರಿಣಮಿಸಿದೆ.

ಪೊಲೀಸ್ ಜೀಪ್ ಗೆ ೧೫ ವರ್ಷ. ಹಲವಾರು ತಾಂತ್ರಿಕ ಅಡಚಣೆಗಳನ್ನು ಹೊಂದಿರುವ ಇದು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಠಾಣೆಯಲ್ಲಿ ವಾಹನ ಇದ್ದರು ಅದು ಅವಸರದ ಕೆಲಸಕ್ಕೆ ನಿರುಪಯುಕ್ತ ಎನ್ನುವಂತಾಗಿದೆ.
ಇನ್ನು, ಜೀಪು ಚಲಾಯಿಸುವವರ ಪಾಡು ಹೇಳತೀರದು . ಒಮ್ಮೆ ಗಾಡಿ ಚಾಲು ಮಾಡಿದರೆ ಅದನ್ನುಸಮರ್ಪಕವಾಗಿ ಚಲಾಯಿಸಲು ಸಾಧ್ಯವಾಗುವುದಿಲ್ಲ. ಜೀಪಿನ ಬಿಡಿ ಭಾಗಗಳು ಒಂದರ ಹಿಂದೆ ಒಂದು ಕಳಚಿ ಬೀಳುತ್ತಾ ಸಾಗುತ್ತದೆ.
ಹೀಗೆ ಮುಂದುವರೆದರೆ ಒಂದಲ್ಲಾ ಒಂದು ದಿನ ಜನರ ಸಂಕಷ್ಟಕ್ಕೆ ನೆರವಾಗುವ ಪೊಲೀಸರೇ ಸಂಕಷ್ಟಕ್ಕೆ ಸಿಲುಕುವ ಭೀತಿಯಿದೆ.
ಮಂಗಳೂರಿಗೆ ಹೈಟೆಕ್ ಹೊಯ್ಸಳ ಕಾರುಗಳು ಬಂದಿರುವ ಈ ಸಂದರ್ಭದಲ್ಲೇ ಗೃಹ ಸಚಿವ ಪರಮೇಶ್ವರ್ ಅವರು, ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಗೂ ಒಂದು ಹೊಸ ಜೀಪ್ ಕೊಟ್ಟರೆ ಉತ್ತಮ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications