Get Updates
Get notified of breaking news, exclusive insights, and must-see stories!

ಮಂಗಳೂರಿನಲ್ಲಿ ವೈದ್ಯಕೀಯ ಕಾಲೇಜು ಪ್ರವೇಶ ಹಗರಣ: ವಿದ್ಯಾರ್ಥಿಗಳಿಗೆ 22.5 ಲಕ್ಷ ರೂ. ಪಂಗನಾಮ!

ವೈದ್ಯಕೀಯ ಕಾಲೇಜು ಪ್ರವೇಶ ಹಗರಣದಲ್ಲಿ ವಿದ್ಯಾರ್ಥಿಯೊಬ್ಬ 22.5 ಲಕ್ಷ ರೂಪಾಯಿ ಮೋಸ ಹೋದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.

ಮಂಗಳೂರು ಮಾರ್ಚ್ 9: ಮಂಗಳೂರು ಮೂಲದ ಕಾಲೇಜೊಂದರಲ್ಲಿ ಸೀಟು ಕೊಡಿಸುವ ನೆಪದಲ್ಲಿ ವೈದ್ಯ ವಿದ್ಯಾರ್ಥಿಯೊಬ್ಬನಿಗೆ ಶಂಕಿತ ತಂಡವೊಂದು 22.5 ಲಕ್ಷ ರೂ. ಪಂಗನಾಮ ಹಾಕಿದೆ. ಕಳೆದ ವರ್ಷ ಡಿಸೆಂಬರ್ 16ರಂದು ತನ್ನ ಮಗನಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ಮಹಿಳೆಯೊಬ್ಬರು ಕರೆ ಮಾಡಿ ಮೋಸ ಮಾಡಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರಂಭದಲ್ಲಿ 50 ಲಕ್ಷದ ಒಳಗಿನ ಸೀಟನ್ನು ಹುಡುಕುತ್ತಿರುವುದಾಗಿ ವಿದ್ಯಾರ್ಥಿಯ ತಂದೆ ತಮಗೆ ಕರೆ ಮಹಿಳೆಗೆ ತಿಳಿಸಿದ್ದಾರೆ. ನಂತರ ಆತನಿಗೆ ಬೇರೊಬ್ಬ ಮಹಿಳೆಯಿಂದ ಕರೆ ಬಂದಿದೆ. ಆಕೆ ಸೀಟಿನ ವಿವರಗಳೊಂದಿಗೆ ಆರಂಭದಲ್ಲಿ 15 ಲಕ್ಷ ರೂಪಾಯಿ ಮತ್ತು ಸೀಟು ಸಿಕ್ಕ ಮೇಲೆ 7.5 ಲಕ್ಷ ರೂಪಾಯಿ ಮೊದಲ ವರ್ಷದ ಶುಲ್ಕವಾಗಿದೆ ಎಂದು ವಿದ್ಯಾರ್ಥಿ ತಂದೆಗೆ ಹೇಳಿದ್ದಾಳೆ.

Medical college admission scam in Mangalore: Rs 22.5 lakh cheated to student

ಈ ಶುಲ್ಕದಲ್ಲಿ ಹಾಸ್ಟೆಲ್ ಉಚಿತವಾಗಿರುತ್ತದೆ ಎಂದು ಮಹಿಳೆ ತಿಳಿಸಿದ್ದಾಳೆ. ಜೊತೆಗೆ ವಿದ್ಯಾರ್ಥಿಯ ತಂದೆಗೆ ದಾಖಲೆಗಳನ್ನು ವಾಟ್ಸಾಪ್ ಮಾಡಲು ಕೇಳಲಾಗಿದೆ. ಡಿಸೆಂಬರ್ 17 ರಂದು ದೂರುದಾರನು ತನ್ನ ಪತ್ನಿಯ ಬ್ಯಾಂಕ್ ಖಾತೆಯಿಂದ 7.5 ಲಕ್ಷ ರೂ.ಗೆ ಡಿಮ್ಯಾಂಡ್ ಡ್ರಾಫ್ಟ್ ಪಡೆದುಕೊಂಡಿದ್ದಾರೆ. ಜೊತೆಗೆ ದಾಖಲೆಗಳ ಫೋಟೋವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿ ತಂದೆ ವಂಚಿಸಿದ ತಂಡ

ಮರುದಿನ ಅವರು ತನ್ನ ಮಗನ ದಾಖಲೆಗಳ ಫೋಟೋಗಳನ್ನು ಕಳುಹಿಸಿದರು. ವಿದ್ಯಾರ್ಥಿಯ ತಂದೆಗೆ ಡಿ.20ರಂದು ಹಿರಿಯ ಅಧಿಕಾರಿಯೊಬ್ಬರಿಂದ ವೈದ್ಯಕೀಯ ಸೀಟು ಕನ್ಫರ್ಮ್ ಆಗಿದೆ ಎಂದು ಕರೆ ಬಂದಿದ್ದು, ಮರುದಿನ ಕಾಲೇಜಿಗೆ ಬರುವಂತೆ ತಿಳಿಸಿದ್ದಾರೆ.

Medical college admission scam in Mangalore: Rs 22.5 lakh cheated to student

ಅದರಂತೆ ದೂರುದಾರರು ಮತ್ತು ಅವರ ಮಗ ಕಾಲೇಜಿಗೆ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಯ ತಂದೆಯನ್ನು ಹತ್ತಿರದ ಹೋಟೆಲ್‌ಗೆ ಕರೆದೊಯ್ಯಲಾಗಿದೆ. ಪ್ರವೇಶವನ್ನು ದೃಢಪಡಿಸಿದ್ದರಿಂದ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಲು ಕೇಳಲಾಗಿದೆ. ಪ್ರತಿನಿಧಿಯು ದಾಖಲೆಗಳನ್ನು ಪರಿಶೀಲಿಸಿದ ನಂತರ ಫಾರ್ಮ್‌ಗಳನ್ನು ಭರ್ತಿ ಮಾಡಿಸಿ ಆಕಾಂಕ್ಷಿಯ ಫೋಟೋ ಮತ್ತು 7.5 ಲಕ್ಷ ರೂಪಾಯಿಗಳ ಡಿಡಿಯನ್ನು ಪಡೆದಿದ್ದಾರೆ. ಉಳಿದ ಹಣವನ್ನು ಪಾವತಿಸಿದ್ದಾರೆ.

ಡಿಸೆಂಬರ್ 27 ರಂದು ವೈದ್ಯಕೀಯ ಸೀಟು ದೃಢೀಕರಿಸಿ, ಜನವರಿ 6 ರಂದು ತರಗತಿಗಳು ಪ್ರಾರಂಭವಾಗಲಿದೆ ಎಂದು ಕರೆ ಬಂದಿದೆ. ಆದರೆ ಡಿಮ್ಯಾಂಡ್ ಡ್ರಾಫ್ಟ್ ಅನ್ನು ತೆರವುಗೊಳಿಸಲು ಸಾಧ್ಯವಾಗದ ಕಾರಣ ಮತ್ತು ಡಿಡಿಯನ್ನು ರದ್ದುಗೊಳಿಸಿರುವುದರಿಂದ, ಅವರು 7.5 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ.

ವಿಮಾನ ನಿಲ್ದಾಣದಲ್ಲಿ ಹಣ ಪಡೆದ ವಂಚಕರು

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಗೆ ಮೊತ್ತವನ್ನು ಪಾವತಿಸಬಹುದು ಎಂದು ಅವರು ವಿದ್ಯಾರ್ಥಿಯ ತಂದೆಗೆ ತಿಳಿಸಿದ್ದಾರೆ. ಡಿಸೆಂಬರ್ 29 ರಂದು, ದೂರುದಾರ ಮತ್ತು ಅವರ ಮಗ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಹೋಗಿ, ಸಂಜೆಯವರೆಗೂ ಅಲ್ಲಿಯೇ ಕಾದು, ಹಿಂದಿರುಗುವಾಗ ಒಬ್ಬ ವ್ಯಕ್ತಿಯನ್ನು ಭೇಟಿಯಾಗಿ ನಗದು ನೀಡಿದರು.

ಆದರೆ, ವಿದ್ಯಾರ್ಥಿ ಜನವರಿ 5ರಂದು ಕಾಲೇಜಿಗೆ ಬಂದು ಪ್ರವೇಶ ಪತ್ರದ ಸಾಫ್ಟ್ ಕಾಪಿ ತೋರಿಸಿದಾಗಲೇ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಉಳ್ಳಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ರೀತಿ ಮತ್ತೊಂದು ಘಟನೆ ನಡೆದಿರುವುದರಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

"ಪಿಜಿ ಸೀಟು ಆಕಾಂಕ್ಷಿಯೂ ವಂಚನೆಗೊಳಗಾಗಿದ್ದು, ಸುಮಾರು 50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇಂತಹ ಎರಡೂ ಪ್ರಕರಣಗಳ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಆರೋಪಿಗಳನ್ನು ಪತ್ತೆಹಚ್ಚಲಾಗುತ್ತಿದೆ. ಎರಡೂ ಪ್ರಕರಣಗಳಲ್ಲಿ ಕಾರ್ಯವಿಧಾನವು ಒಂದೇ ಆಗಿರುತ್ತದೆ "ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಂಶು ಕುಮಾರ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+