ತೆಲಂಗಾಣ, ಕತಾರ್ನಲ್ಲಿ ಹಾರಾಡಲಿದೆ ಕುಡ್ಲದ ಗಾಳಿಪಟ: ಅಯೋಧ್ಯೆಯಲ್ಲೂ ಅವಕಾಶ ಸಾಧ್ಯತೆ
ಮಂಗಳೂರು, ಜನವರಿ 10: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಾಟದಲ್ಲಿ ಖ್ಯಾತಿ ಹೊಂದಿರುವ 'ಟೀಂ ಮಂಗಳೂರು' ಇದೀಗ ತೆಲಂಗಾಣ, ಕತಾರ್ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಟೀಂ ಮಂಗಳೂರು ತಂಡದ ಬೃಹತ್ ಗಾತ್ರದ ಕಥಕ್ಕಳಿ ಗಾಳಿಪಟ ಹಾರಾಡಲಿದೆ.
ಟೀಂ ಮಂಗಳೂರು ತಂಡದ ಸರ್ವೇಶ್ ರಾವ್ ರವರ ನೇತೃತ್ವದಲ್ಲಿ ಈ ಕಥಕ್ಕಳಿ ಗಾಳಿಪಟ ಬಾನಂಗಳದಲ್ಲಿ ಹಾರಾಡಲಿದೆ. ತೆಲಂಗಾಣದಲ್ಲಿ ಜನವರಿ 13-14ರಂದು ನಡೆಯುವ ಗಾಳಿಪಟ ಉತ್ಸವದಲ್ಲಿ ರಾಜ್ಯದ ಪರವಾಗಿ ಮಂಗಳೂರಿನ ಕಥಕ್ಕಳಿ ಗಾಳಿಪಟ ಹಾರಲಿದೆ.

12ಅಡಿ ಅಗಲ ಹಾಗೂ 38 ಅಡಿ ಉದ್ದವಿರುವ ಈ ಕಥಕ್ಕಳಿ ಗಾಳಿಪಟಕ್ಕೆ ಅಗತ್ಯವಿರುವ ರಿಪ್ ಸ್ಟಾಕ್ ನೈಲಾನ್ ಫ್ಯಾಬ್ರಿಕ್ ಮೆಟಿರಿಯಲ್ ಅನ್ನು ಇಂಗ್ಲೆಂಡ್ ನಿಂದ ತರಿಸಲಾಗಿದೆ. ಇದು ಪ್ಯಾರಚೂಟ್ ತಯಾರಿಯಲ್ಲಿ ಬಳಕೆಯಾಗುವ ಬಟ್ಟೆಯಾಗಿದೆ. ಗಾಳಿಪಟಕ್ಕೆ ಅಗ್ಯವಿರುವ ಬಿದಿರನ್ನು ಗೋವಾ ರತ್ನಗಿರಿಯ ವೆನ್ ರೂಲಾದಿಂದ ತರಿಸಲಾಗಿದೆ.
ಕಲಾವಿದ, ಪರಿಸರವಾದಿ ದಿನೇಶ್ ಹೊಳ್ಳ ಅವರು ಕಥಕ್ಕಳಿ ಗಾಳಿಪಟಕ್ಕೆ ಅಗತ್ಯವಿರುವ ನಕಾಶೆ ರಚಿಸಿ, ಕಲರ್ ಕಾಂಬಿನೇಷನ್ ಅನ್ನು ಆಯ್ಕೆ ಮಾಡಿದ್ದಾರೆ. ಸರ್ವೇಶ್ ರಾವ್ರವರ ನಿರ್ದೇಶನದಲ್ಲಿ ತಂಡವು ಈ ಗಾಳಿಪಟ ರಚಿಸಿದೆ. ತೆಲಂಗಾಣದ ಬಳಿಕ ಈ ಗಾಳಿಪಟ ಜನವರಿ 24ರಿಂದ ಫೆಬ್ರವರಿ 4ರವರೆಗೆ ಕತಾರ್ನಲ್ಲಿ ಈ ಗಾಳಿಪಟ ಹಾರಲಿದೆ. ಜೊತೆಗೆ ಅಯೋಧ್ಯೆಯಲ್ಲಿಯೂ ಗಾಳಿಪಟ ಹಾರಾಟಕ್ಕೆ ಅವಕಾಶ ದೊರೆಯುವ ಸಾಧ್ಯತೆಯೂ ಇದೆಯಂತೆ.
ಟೀಂ ಮಂಗಳೂರು ತಂಡ ಸುಮಾರಷ್ಟು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಾಟ ನಡೆಸಿದೆ. ಇವರಲ್ಲಿ ಕಥಕ್ಕಳಿ ಸೇರಿದಂತೆ ಯಕ್ಷಗಾನ, ಗರುಡ, ವಿಭೀಷಣ, ಬಟರ್ ಫ್ಲೈ ಮುಂತಾದ ಗಾಳಿಪಟಗಳು ಹಾರಾಟ ನಡೆಸಿದೆ. ಈವರೆಗೆ ಈ ತಂಡ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ಟರ್ಕಿ, ಕಾಂಬೋಡಿಯ, ಉಕ್ರೇನ್, ಕುವೈತ್, ಥಾಯ್ಲ್ಯಾಂಡ್ ಮೊದಲಾದೆಡೆ ಸಾಂಪ್ರದಾಯಿಕ ಶೈಲಿಯ ಗಾಳಿಪಟ ಹಾರಿಸಿದೆ.
ಈ ಬಾರಿ ಫೆಬ್ರವರಿ ಮಧ್ಯಭಾಗದ ಬಳಿಕ ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಟೀಂ ಮಂಗಳೂರು ತಂಡ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವನ್ನು ಆಯೋಜಿಸುವ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಡಿಸಿಯವರೂ ಸ್ಪಂದನೆ ನೀಡಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮಂಗಳೂರಿನಲ್ಲಿಯೂ ದೇಶ - ವಿದೇಶಗಳ ಗಾಳಿಪಟಗಳು ಹಾರಾಟ ನಡೆಸುವುದು ನಿಶ್ಚಿತವಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications