ಮಂಗಳೂರು: ಜೈನ ಸಿದ್ಧಾಂತಗಳ ಪ್ರವರ್ತಕ ಮಹಾವೀರ ಜಯಂತಿ
ಮಂಗಳೂರು, ಮಾರ್ಚ್ 26: ದಕ್ಷಿಣ ಕನ್ನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಜೈನ ಸೊಸೈಟಿ ಸಹಭಾಗಿತ್ವದಲ್ಲಿ ಮಹಾವೀರ ಜಯಂತಿಯನ್ನು ಮಾರ್ಚ್ 29ರಂದು ಮಂಗಳೂರಿನ ಆದೀಶ್ವರಸ್ವಾಮಿ ಜೈನ ಬಸದಿಯಲ್ಲಿ ಹಮ್ಮಿಕೊಂಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸಚಿವ ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಚಿವ ಯು.ಟಿ. ಖಾದರ್, ಶಾಸಕರಾದ ಜೆ.ಆರ್. ಲೋಬೊ, ವಸಂತ ಬಡಿಗೇರ, ಕೆ.ಅಭಯಚಂದ್ರ ಜೈನ್, ವಿಧಾನ ಪರಿಷತ್ ವಿರೋಧ ಪಕ್ಷಣ ಗಣೇಶ್ ಕಾರ್ಣಿಕ್ ಆಗಮಿಸಲಿದ್ದಾರೆ.

ಜೈನ ಧರ್ಮೀಯರು 24ನೆಯ ತೀರ್ಥಂಕರನೆಂದು ನಂಬಿರುವ , ಜೈನ ಸಿದ್ಧಾಂತಗಳ ಪ್ರಮುಖ ಪ್ರವರ್ತಕರಾದ ವರ್ದಮಾನ ಮಹಾವೀರರು ವಜ್ಜಿ ಎನ್ನುವ ರಾಜ್ಯದಲ್ಲಿ ಕ್ರಿ. ಪೂ.599 ರಲ್ಲಿ ಜನಿಸಿದರು. ತಂದೆ ಸಿದ್ಧಾರ್ಥ ತಾಯಿ ತ್ರಿಶಾಲಾದೇವಿ, ವರ್ದಮಾನರ ಜನ್ಮ ದಿನ ಜೈನ ಮತೀಯರಿಗೆ ಪವಿತ್ರವಾದ ದಿನವಾಗಿದೆ.












Click it and Unblock the Notifications