ತಿರುಮಲಕ್ಕೆ ಆಗಮಿಸಿದ ಕಾಶೀ ಮಠಾಧೀಶರಿಗೆ ಟಿಟಿಡಿ ಭವ್ಯ ಸ್ವಾಗತ
ಮಂಗಳೂರು: ಅ 26: ಶ್ರೀಕಾಶೀಮಠ ಸಂಸ್ಥಾನದ ಮಠಾಧೀಶ ಹಾಗೂ 21ನೇ ಯತಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಶುಕ್ರವಾರ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು ಬಳಿಕ ಶ್ರೀ ದೇವರ ದರ್ಶನ ಪಡೆದರು.
ಹೊಸ ದಾಖಲೆ ಬರೆದ ತಿರುಪತಿ ತಿಮ್ಮಪ್ಪನ ದೇವಾಲಯ
ತಿರುಮಲ ತಿರುಪತಿ ದೇವಸ್ವಂ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶ್ರೀನಿವಾಸ ರಾಜು, ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಚಿನ್ನಂಗಾರಿ ರಮಣ, ಬೊಕ್ಕಸದ ಗುಮಾಸ್ತ ಗುರುಜಾ ರಾವ್, ಪೇಷ್ಕರ್ ಅವರು ಸ್ವಾಮೀಜಿ ಅವರನ್ನು ಸ್ವಾಗತಿಸಿ ತಿರುಮಲ ದೇವಳದ ವತಿಯಿಂದ ಶ್ರೀಗಳವರಿಗೆ ಸಕಲ ಗೌರವ , ಆದರಾತಿಥ್ಯ ದೊಂದಿಗೆ ದೇವಳಕ್ಕೆ ಬರಮಾಡಿಕೊಳ್ಳಲಾಯಿತು.
ತಿರುಪತಿ ತಿಮ್ಮಪ್ಪನನ್ನೇ ಬಿಡದ ಕಳ್ಳರು ಕನಕ ದುರ್ಗೆಯನ್ನು ಬಿಟ್ಟಾರಾ?
ತಿರುಮಲ ದೇವಸ್ಥಾನ ಸಂದರ್ಶಿಸಿದ ಸಂಯಮೀಂದ್ರ ತೀರ್ಥ ಸ್ವಾಮೀಜಿ ಲೋಕ ಕಲ್ಯಾಣಕ್ಕಾಗಿ ಮತ್ತು ಮನುಕುಲದ ಕ್ಷೇಮಾಭಿವೃದ್ಧಿಗಾಗಿ ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಗಳವರ ಜೊತೆಯಲ್ಲಿ ಮುಂಬೈಯ ಜಿ. ಜಿ. ಪ್ರಭು , ಮಂಗಳೂರು ಶ್ರೀ ವೆಂಕಟರಮಣ ದೇವಳದ ಮೊಕ್ತೇಸರರಾದ ಸಿ . ಎಲ್ .ಶೆಣೈ , ತಿರುಮಲ ಕಾಶಿ ಮಠದ ಕಾರ್ಯದರ್ಶಿ ಕಾಪು ನಾರಾಯಣ ಶೆಣೈ , ಕೊಚ್ಚಿನ್ ತಿರುಮಲ ದೇವಳದ ಮೊಕ್ತೇಸರ ಜಗನ್ನಾಥ್ ಶೆಣೈ , ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ ಕಾಮತ್ , ಮಂಜೇಶ್ವರ ದೇವಳದ ಮೊಕ್ತೇಸರರಾದ ದಿನೇಶ್ ಕಾಮತ್ ಕೋಟೇಶ್ವರ ಇದ್ದರು.
ಕಾಶೀಮಠಾಧೀಶರ ಚಾತುರ್ಮಾಸ್ಯ ವ್ರತ ತಿರುಮಲದಲ್ಲಿ ಆರಂಭ
ಇದರ ಜೊತೆಗೆ, ಮುಂಬೈ ಜಿಎಸ್ಬಿ ಸೇವಾ ಮಂಡಳದ ಯಶವಂತ್ ಕಾಮತ್, ಅಮಿತ್ ಪೈ, ಕಾಸರಗೋಡು ಶ್ರೀ ವೆಂಕಟರಮಣ ದೇವಳದ ನಾಗೇಶ್ ಕಾಮತ್, ಕನ್ನಂಗಾಡ್ ವೆಂಕಟರಮಣ ದೇವಳದ ನಾಗರಾಜ್ ನಾಯಕ್ , ದಹಿಸರ್ ಕಾಶಿ ಮಠದ ಮನೋಹರ್ ಕಾಮತ್ , ಕೊಚ್ಚಿ ವಿಶ್ವನಾಥ್ ಭಟ್ ಹಾಗೂ ಸಾವಿರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.