ಮಕರ ಸಂಕ್ರಾಂತಿ ದಿನದಿಂದ ಕದ್ರಿ ಮಂಜುನಾಥ ಜಾತ್ರೆ ಶುರು
ಮಂಗಳೂರು, ಜ.11: ಇಲ್ಲಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಕರ ಸಂಕ್ರಾಂತಿ ಜ. 14 ದಿನದಿಂದ ಜ. 23ರವರೆಗೆ ನಡೆಯಲಿದೆ, ಜ.25ರಂದು ರಾತ್ರಿ ಮಲರಾಯ ದೈವದ ನೇಮೋತ್ಸವ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿ ಪ್ರಕಟಿಸಿದೆ.
ಜ. 14ರಂದು ಬೆಳಗ್ಗೆ 4ರಿಂದ ತೀರ್ಥ ಸ್ನಾನ, ಸಂಜೆ 6ಕ್ಕೆ ಧ್ವಜಾರೋಹಣದ ಮೂಲಕ ಧಾರ್ಮಿಕ ವಿಧಿ ವಿಧಾನ ಹಾಗೂ ಜಾತ್ರಾ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಪ್ರತಿ ನಿತ್ಯದ ಕಾರ್ಯಕ್ರಮ ವಿವರ ಇಂತಿದೆ:
*
ಜ.15ರಂದು
ಶ್ರೀ
ಮಲರಾಯ
ದೈವದ
ಭಂಡಾರ
ಆಗಮನ
ಮತ್ತು
ರಾತ್ರಿ
10ಕ್ಕೆ
ಗರುಡಾರೋಹಣ
*
ಜ.16ರಂದು
ಸಂಜೆ
7ಕ್ಕೆ
ಉತ್ಸವ
ಬಲಿ
ಪ್ರಾರಂಭ
*
ಜ.
17ರಂದು
ಸಂಜೆ
6ಕ್ಕೆ
ಬಿಕರ್ನಕಟ್ಟೆ
ಸವಾರಿ
ಬಲಿ
*
ಜ.
18ರಂದು
ಸಂಜೆ
6ಕ್ಕೆ
ಮಲ್ಲಿಕಟ್ಟೆ
ಸವಾರಿ
ಬಲಿ
*
ಜ.
19ರಂದು
ಸಂಜೆ
6ಕ್ಕೆ
ಮುಂಡಾಣ
ಕಟ್ಟೆ
ಸವಾರಿ
ಬಲಿ
*
ಜ.
20ರಂದು
ಸಂಜೆ
6
ಕ್ಕೆ
ಕೊಂಚಾಡಿ
ಸವಾರಿ
ಬಲಿ
*
ಜ.
21ರಂದು
ಏಳನೇ
ದೀಪೋತ್ಸವ,
ಮಧ್ಯಾಹ್ನ
12ಕ್ಕೆ
ಮಹಾ
ಪೂಜೆ
ಹಾಗೂ
ಸಾರ್ವಜನಿಕ
ಅನ್ನಸಂತರ್ಪಣೆ,
ಸಂಜೆ
7ಕ್ಕೆ
ಉತ್ಸವ
ಬಲಿ
ಪ್ರಾರಂಭ,
*
ಜ.
22ರಂದು
ಶ್ರೀ
ಮನ್ಮಹಾರಥೋತ್ಸವ,
ಮಧ್ಯಾಹ್ನ
12ಕ್ಕೆ
ಮಹಾಪೂಜೆ
1.30ಕ್ಕೆ
ರಥಾರೋಹಣ,
ಸಂಜೆ
6
ಗಂಟೆಗೆ
ಶ್ರೀ
ಮನ್ಮಹಾರಥೋತ್ಸವ,
ಬೆಳ್ಳಿರಥೋತ್ಸವ,
[ಕದ್ರಿಯಲ್ಲಿ
ಅನಾವರಣಗೊಂಡ
ಬಾಲಕೃಷ್ಣರ
ಲೀಲೆ]
*
ಜ.23ರಂದು
ಬೆಳಗ್ಗೆ
7ಕ್ಕೆ
ಶ್ರೀದೇವರ
ಕವಾಟೋದ್ಘಾಟನೆ
ಮತ್ತು
ಪೂಜೆ
ನಂತರ
ತುಲಾಭಾರ
ಸೇವೆ,
ರಾತ್ರಿ
10.30ಕ್ಕೆ
ಧ್ವಜಾವರೋಹಣ
ನಡೆಯಲಿದೆ
ಮತ್ತು
ಜ.
25ರಂದು
ಬೆಳಗ್ಗೆ
10ಕ್ಕೆ
ಶ್ರೀದೇವಳದಿಂದ
ಶ್ರೀ
ಮಲರಾಯ
ದೈವದ
ಭಂಡಾರ
ಹೊರಡುವುದು.
ಕದ್ರಿ ದೇಗುಲ ತಲುಪುವುದು ಹೇಗೆ?: ಬೆಂಗಳೂರಿನಿಂದ ಮಂಗಳೂರಿಗೆ ಬಸ್, ರೈಲು, ವಿಮಾನ ಮಾರ್ಗಗಳಿವೆ. ಮಂಗಳೂರಿನ ನೆಹರೂ ಮೈದಾನ ಬಸ್ ನಿಲ್ದಾಣದಿಂದ ಸಿಟಿ ಬಸ್ ಸಂಖ್ಯೆ 3,3ಎ, 4, 4ಸಿ, 6ಎ,ಬಿ,ಸಿ, 14, 14ಎ,ಬಿ, 21, 22, 30ಎ,ಬಿ, 48 ಮುಂತಾದ ರೂಟಿನ ಬಸ್ ಗಳು ಕದ್ರಿ ದೇಗುಲದ ಬಳಿ ತೆರಳುತ್ತವೆ. [ಮಂಗಳೂರು : ಖಾಸಗಿ ಬಸ್ ಪ್ರಯಾಣದರ ಕಡಿತ]
ಕದ್ರಿ ದೇಗುಲದ ಮಹತ್ವ: ಮಂಗಳೂರು ಕೇಂದ್ರ ಭಾಗದಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಈ ಬೆಟ್ಟದ ದೇಗುಲದ ಸುತ್ತಾ ಕೊಳವಿದ್ದು, ನೈಸರ್ಗಿಕ ರಮಣೀತೆಯೆ ಸಾಕ್ಷಿಯಾಗಿದೆ. ವಿಷ್ಣು ಹಾಗೂ ಪರಶುರಾಮನ ಅವತಾರದ ಕೊಂಡಿ ನಿಮಗೆ ಇಲ್ಲಿ ಸಿಗುತ್ತದೆ.
ಕ್ಷತ್ರೀಯರ ರುಂಡವನ್ನು ಚೆಂಡಾಡಿದ ಪರಶುರಾಮ ಮನಸ್ಸಿಗೆ ನೆಮ್ಮದಿ ಸಿಗದೆ ಶಿವನನ್ನು ಪ್ರಾರ್ಥಿಸಿ ಶಾಂತಿಮಯ ನೆಲೆಯನ್ನು ಸೂಚಿಸುವಂತೆ ಕೋರುತ್ತಾನೆ. ಅದರಂತೆ ಸಪತ್ನಿ ಸಮೇತನಾಗಿ ಕದರಿ ಬೆಟ್ಟಕ್ಕೆ ಬಂದ ಶಿವನು ಪರಶುರಾಮನಿಗೆ ನೆಲೆ ತೋರಿಸುತ್ತಾನೆ.
ಕಿ. ಪ್ರೂ 968ರಲ್ಲಿ ಅಳುಪ ಸಂಸ್ಥಾನದ ರಾಜ ಕುಂದವರ್ಮ ಭೂಪೇಂದ್ರ ಅವರು ಬೌದ್ಧ ವಿಹಾರ ಸ್ಥಾಪಿಸಿ ಲೋಕೇಶ್ವರ ಹೆಸರಿನ ದೈವದ ವಿಗ್ರಹ ಅನುಷ್ಠಾನಗೊಳಿಸಿದ್ದ. ಹೀಗಾಗಿ ದಕ್ಷಿಣ ಭಾರತದ ಅತಿ ಪುರಾತನ ದೇಗುಲಗಳ ಪೈಕಿ ಕದ್ರಿ ಮಂಜುನಾಥ ದೇಗುಲವೂ ಒಂದೆನಿಸಿದೆ.