ಸಿಡಿಲಿನ ಸಾವು - ನೋವು ತಡೆಗೆ ರೆಡಿಯಾಗುತ್ತಿದೆ ಹೈಟೆಕ್ ಅಪ್ಲಿಕೇಶನ್
ಮಂಗಳೂರು, ಮೇ 31: ಮುಂಗಾರು ಶ್ರೀಘ್ರದಲ್ಲೇ ಕರ್ನಾಟಕ ಕರಾವಳಿ ಪ್ರವೇಶಿಸಲಿದೆ. ಪ್ರತಿವರ್ಷ ಕರಾವಳಿ ಜಿಲ್ಲೆಯಲ್ಲಿ ಮಳೆಯಷ್ಟೇ ಸಿಡಿಲು, ಗುಡುಗು ಭಯವನ್ನುಂಟು ಮಾಡುವುದಲ್ಲದೆ, ಸಾವು - ನೋವಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲೆಂದೇ ರಾಜ್ಯಮಟ್ಟದಲ್ಲಿ ಸಿಡಿಲು - ಗುಡುಗು ಮುನ್ಸೂಚನೆಗೆ ಅಪ್ಲಿಕೇಶನ್ ವೊಂದನ್ನು ತಯಾರಿಸಲು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುಂದಾಗಿದೆ.
ಸುಮಾರು 55 ಲಕ್ಷ ರೂ. ವೆಚ್ಚದಲ್ಲಿ ಈ ಅಪ್ಲಿಕೇಶನ್ ತಯಾರಿಸುವ ಯೋಚನೆಯಿದೆ ಎನ್ನುತ್ತಾರೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಶ್ರೀನಿವಾಸ್ ರೆಡ್ಡಿ.

ಯೋಜನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಒಂದು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ಸೆನ್ಸಾರ್ ಸ್ಟೇಷನ್ ಹಾಕಲಾಗುತ್ತದೆ. ಒಂದು ಸ್ಟೇಷನ್ ಸುತ್ತಮುತ್ತಲ 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ ಎನ್ನುತ್ತಾರೆ ಶ್ರೀನಿವಾಸ ರೆಡ್ಡಿ.
ಅಪ್ಲಿಕೇಶನ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಸೆನ್ಸೆರ್ ಸ್ಟೇಷನ್ ನಿಂದ ಮಳೆಯ, ಸಿಡಿಲು - ಗುಡುಗು ಬಗ್ಗೆ ಮುನ್ಸೂಚನೆ ಬರುತ್ತದೆ. ಸಾಮಾನ್ಯವಾಗಿ 30 ರಿಂದ 45 ನಿಮಿಷ ಮೊದಲೇ ಈ ಬಗ್ಗೆ ಮುನ್ಸೂಚನೆ ಬರುವುದರಿಂದ ಅವಘಡಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಸಂಬಂಧಪಟ್ಟ ಪ್ರದೇಶದ ರೈತರಿಗೆ ಮುನ್ಸೂಚನೆ ನೀಡಿ ಅಲ್ಲಿಂದ ತೆರಳುವಂತೆ ಸೂಚನೆಯನ್ನೂ ನೀಡಲಾಗುತ್ತದೆ.

ಸಿಡಿಲು - ಗುಡುಗು ಮುನ್ಸೂಚನೆಗಾಗಿ ಅಪ್ಲಿಕೇಶನ್ ತಯಾರಿಸುತ್ತಿರುವುದು ದೇಶದಲ್ಲೇ ಇದೆ ಮೊದಲು. ಇನ್ನು ಸೆನ್ಸಾರಿನ ಮಾಹಿತಿ ಆಧಾರದ ಮೇಲೆ ಸಂಬಂಧಪಟ್ಟ ಪ್ರದೇಶದ ರೈತರಿಗೆ ಮುನ್ಸೂಚನೆ ನೀಡಲಿದ್ದೇವೆ. ರಾಜ್ಯದ 30 ಲಕ್ಷಕ್ಕೂ ಅಧಿಕ ರೈತರ ಮೊಬೈಲ್ ನಂಬರ್ ನಮ್ಮಲ್ಲಿರುವುದರಿಂದ ಇದು ರೈತರಿಗೆ ದೊಡ್ಡ ಮಟ್ಟದ ನೆರವಾಗಲಿದೆ. ಆಂಧ್ರದಲ್ಲಿಯೂ ಇದೆ ಮಾದರಿ ಅಪ್ಲಿಕೇಶನ್ ಈ ಬಾರಿ ತಯಾರಿಸುತ್ತಾರಾದರೂ, ಸಂಬಂಧಪಟ್ಟವರಿಗೆ ಮಾಹಿತಿ ನೀಡುವ ವ್ಯವಸ್ಥೆ ಅವರಲಿಲ್ಲ ಎನ್ನುತ್ತಾರೆ ಶ್ರೀನಿವಾಸ್ ರೆಡ್ಡಿ.

ಪ್ರತಿ ವರ್ಷ ರಾಜ್ಯ ಗುಡುಗು ಸಿಡಲಿನ ದಾಳಿಗೆ ಕನಿಷ್ಠ 70 ರಿಂದ 80 ಮಂದಿ ಸಾಯುತ್ತಿದ್ದಾರೆ. ಇತ್ತೀಚಿನ ಮುಂಗಾರು ಮುನ್ನ ಸಿಡಿಲಿನ ಅಪಘಾತಕ್ಕೆ ಬಂಟ್ವಾಳದಲ್ಲಿ ಮೂರೂ ಮಂದಿ ಸಾವಿಗೀಡಾಗಿದ್ದರು. ಈ ಸಾವು - ನೋವು ಕಡಿಮೆಗೊಳಿಸುವ ಉದ್ದೇಶದಿಂದ ಮೊಬೈಲ್ ಅಪ್ಲಿಕೇಶನ್ ಅಳವಡಿಸುವ ಯೋಜನೆ ಕೈಗೊಳ್ಳಲಾಗಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications