ಮೂಡಬಿದಿರೆಯ ಜನಪ್ರಿಯ 'ಗಾರ್ಡ್' ಗೆ ಅಂತಿಮ ನಮನ
ಮಂಗಳೂರು, ಡಿ.3: ಮಂಗಳವಾರ ಮುಂಜಾನೆ ನಿಧನರಾದ ಮೂಡಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಈ ಭಾಗದ ಜನಪ್ರಿಯ ವ್ಯಕ್ತಿ ರಾಧಾಕೃಷ್ಣ ನಾಯಕ್ ಅವರಿಗೆ ಅಂತಿಮ ನಮನ ಸಲ್ಲಿಸಲಾಗಿದೆ.
ಕಳೆದ ಹದಿನೈದು ವರ್ಷಗಳಿಂದ ರಾಧಾಕೃಷ್ಣ ನಾಯಕ್(54) ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಅಪರೇಷನ್ ನಡೆದ ಬಳಿಕ ತಮ್ಮ ದೇಹದ ತೂಕವನ್ನು ಕಳೆದುಕೊಂಡು ಹಾಸಿಗೆ ಹಿಡಿದಿದ್ದರು.
ಹೀಗೆ ಮಾನಸಿಕವಾಗಿ, ದೈಹಿವಾಗಿ ಕುಗ್ಗಿ ಹೋಗಿದ್ದ ನಾಯಕ್ ಮಂಗಳವಾರ ಮುಂಜಾನೆ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದರು. ಪತ್ನಿ ರಾಧಾ ಮತ್ತು ತಮ್ಮ ಉದಯ್ ನಾಯಕ್ ಅಲ್ಲದೆ ಅಪಾರ ಅಭಿಮಾನಿಗಳನ್ನು ಆರ್ ಕೆ ನಾಯಕ್ ಅಗಲಿದ್ದಾರೆ. ಆರ್ ಕೆ ನಾಯಕ್ ಅವರ ಅಂತಿಮ ಯಾತ್ರೆಯ ಚಿತ್ರಗಳು ನಿಮಗಾಗಿ ಇಲ್ಲಿದೆ...

ಆರ್ ಕೆ ನಾಯಕ್ ಎಂದೇ ಜನಪ್ರಿಯರಾಗಿದ್ರು
ಕಾರ್ಕಳದ ಬಂಗ್ಲೆಗುಡ್ಡೆ ನಿವಾಸಿಯಾಗಿದ್ದ ರಾಧಾಕೃಷ್ಣ ನಾಯಕ್ ಅವರನ್ನು ಎಲ್ಲರೂ ಆರ್ ಕೆ ನಾಯಕ್ ಎಂದೇ ಕರೆಯುತ್ತಿದ್ದರು. ಆಳ್ವಾಸ್ ಆಸ್ಪತ್ರೆಯ ಭದ್ರತಾ ಸಿಬಂದಿಯಾಗಿದ್ದ ಇವರ ಜನಪ್ರಿಯತೆ ಇವರ ಉಡುಗೆ ತೊಡುಗೆ ದೈತ್ಯ ದೇಹ ಕಾರಣವಾಗಿತ್ತು.

ನಾಯಕ್ ರನ್ನು ಬೆರಗುಗಣ್ಣಿಂದ ನೋಡುತ್ತಿದ್ದರು
ಆಳ್ವಾಸ್ ನುಡಿಸಿರಿಗೆ ಭೇಟಿ ನೀಡಿದವರು ಆರ್ ಕೆ ನಾಯಕ್ ರನ್ನು ಬೆರಗುಗಣ್ಣಿಂದ ನೋಡುತ್ತಿದ್ದರು. ಕೆಲವರು ಧೈರ್ಯ ಮಾಡಿ ಜೊತೆಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರು.
ಡಬ್ಲ್ಯು ಡಬ್ಲ್ಯು ಇ ರೆಸ್ಲಿಂಗ್ ನ ಅಂಡರ್ ಟೇಕರ್ ಹೋಲುವ ಹ್ಯಾಟ್, ಬಟ್ಟೆ, ಚೈನ್ ಧರಿಸುತ್ತಿದ್ದ ಆರ್ ಕೆ ನಾಯಕ್ ರನ್ನು ಆಳ್ವಾಸ್ ಕಾಲೇಜ್ ಅಥವಾ ಆಸ್ಪತ್ರೆ ಬಳಿ ಗುರುತಿಸುವುದು ಸುಲಭವಾಗಿತ್ತು. ಅದರೆ, ಈ ವಸ್ತ್ರ ವಿನ್ಯಾಸವೆಲ್ಲ ಹೈದರಾಬಾದ್ ಕಡೆಯಿಂದ ಬಂದ ಬಳುವಳಿ ಎನ್ನುವವರೂ ಇದ್ದಾರೆ.

ಆರ್ ಕೆ ನಾಯಕರಿಗೂ ಸಿನಿಮಾ ಹುಚ್ಚಿತ್ತು
ದೈತ್ಯ ದೇಹಿ ಆರ್ ಕೆ ನಾಯಕರಿಗೂ ಸಿನಿಮಾ ಹುಚ್ಚಿತ್ತು. ಅದರೆ, ಸಾಹಸ ದೃಶ್ಯವೊಂದರಲ್ಲಿ ಪಾಲ್ಗೊಂಡಿದ್ದಾಗ ಗಾಯಗೊಂಡವರು ಮತ್ತೆ ಬಣ್ಣದ ಬದುಕಿಗೆ ಮರಳು ಆಗಲಿಲ್ಲ. ಹೈದರಾಬಾದಿನಲ್ಲಿ ಹೋಟೆಲ್ ಉದ್ಯಮಿ ಕೈಗೂಡಲಿಲ್ಲ,
ಭದ್ರತಾ ಸಿಬ್ಬಂದಿಯಾಗಿ ಜನಪ್ರಿಯತೆ ಗಳಿಸಿದರು.

ಸಾವಿರಾರು ಮಂದಿ ಜೊತೆ ಫೋಟೋ
ಆರ್ ಕೆ ನಾಯಕ್ ಅವರಿರುವ ಸುಮಾರು 14 ರಿಂದ 16 ಸಾವಿರಕ್ಕೂ ಅಧಿಕ ಫೋಟೊಗಳು ಇದುವರೆವಿಗೂ ಕ್ಲಿಕ್ಕಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಆಳ್ವಾಸ್ ಸಂಸ್ಥೆಯ ಡಾ. ಮೋಹನ್ ಆಳ್ವಾ ಅವರಿಗೆ ನಿಷ್ಠಾವಂತರಾಗಿದ್ದ ಆರ್ ಕೆ ನಾಯಕ್ ಅವರನ್ನು ಈ ಭಾಗದ ಜನರು ಹಾಗೂ ಮುಂಬರುವ ನುಡಿಸಿರಿಗೆ ಬರುವ ಜನರು ಖಂಡಿತಾ ಮಿಸ್ ಮಾಡಿಕೊಳ್ಳದೇ ಇರಲು ಸಾಧ್ಯವಿಲ್ಲ.

ಆರ್ ಕೆ ನಾಯಕ್ ಜೊತೆ ಅಭಿಮಾನಿ
ಆಳ್ವಾಸ್ ವಿದ್ಯಾ ಸಂಸ್ಥೆ ಮಾಜಿ ಉದ್ಯೋಗಿ ವಿನ್ಯಾಸಗಾರ ಪ್ರಕಾಶ್ ಶೆಟ್ಟಿ ಉಳೈಪಾಡಿ ಅವರು ಆರ್ ಕೆ ನಾಯಕ್ ಜೊತೆಗಿನ ತಮ್ಮ ಫೋಟೊವನ್ನು ಹಂಚಿಕೊಂಡಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications