ವಿದ್ಯುತ್ ಕಂಬ ಹತ್ತುವ ಸಾಧನ ಕಂಡುಹಿಡಿದ ಬೈಂದೂರು ಯತೀಶ್
ನವೆಂಬರ್ 10, ಮಂಗಳೂರು : ವಿದ್ಯುತ್ ನಿಗಮದ ಕಾರ್ಮಿಕ ಸಿಬ್ಬಂದಿ ಹೆಸರು ಈಗ "ಲೈನ್ ಮ್ಯಾನ್ "ನಿಂದ "ಪವರ್ ಮ್ಯಾನ್ "ಎಂದು ಬದಲಾಯಿಸಲಾಗಿದೆ. ಈ ನಡುವೆ ಇನ್ನೊಂದು ಸಿಹಿ ಸುದ್ದಿ ಏನೆಂದರೆ ಈ ಪವರ್ ಮ್ಯಾನ್ ಗಳ ಕಂಬ ಹತ್ತುವ ಸರ್ಕಸ್ ಗೆ ಬ್ರೇಕ್ ಬೀಳಲಿದೆ .
ದಿನನಿತ್ಯ ಕಾಲಿಗೆ ಹಗ್ಗ ಸಿಕ್ಕಿಸಿ ಸರ್ಕಸ್ ಮಾಡುತ್ತಾ ವಿದ್ಯುತ್ ಕಂಬ ಹತ್ತಿ ದುರಸ್ತಿ ಕಾರ್ಯ ನಡೆಸುವ ಈ ಶ್ರಮಜೀವಿಗಳಿಗೆ ಸಂತಸದ ಸಂಗತಿ ಎಂದರೆ ಇನ್ನೂ ವಿದ್ಯುತ್ ಕಂಬವನ್ನು ಅತ್ಯಂತ ಸುಲಭವಾಗಿ ಹತ್ತುವ ಸುಧಾರಿತ ಸಾಧನವನ್ನು ತಯಾರಿಸಲಾಗಿದೆ . ಇದರಿಂದ ಕಂಬ ಏರುವುದು ನೀರು ಕುಡಿದಷ್ಟು ಸುಲಭವಾಗಲಿದೆ .

ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುವ ಸಂದರ್ಭದಲ್ಲಿ ದುರಂತ ಸಂಭವಿಸಿ ಅದೆಷ್ಟು ಸಿಬ್ಬಂದಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕಂಬದಿಂದ ಆಯತಪ್ಪಿ ಬಿದ್ದು ಹಲವಾರು ವಿದ್ಯುತ್ ನಿಗಮದ ಸಿಬ್ಬಂದಿಗಳು ತಮ್ಮ ಪ್ರಾಣ ಕಳೆದುಕೊಂಡ ನೂರಾರು ಉದಾಹರಣೆಗಳು ನಮ್ಮ ಮುಂದಿವೆ.
ಮೆಸ್ಕಾಂನಲ್ಲಿ ಪವರ್ ಮ್ಯಾನ್ ಹುದ್ದೆಗೆ ಕಡ್ಡಾಯವಾಗಿ ಕಂಬ ಹತ್ತುವ ಅನುಭವ ಇರಬೇಕು ಎಂಬ ನಿಯಮವಿದೆ. ಸಿಬ್ಬಂದಿ ನೇಮಕಾತಿ ಸಂದರ್ಭದಲ್ಲಿ ಕಂಬ ಹತ್ತುವುದನ್ನು ದೈಹಿಕ ಪರೀಕ್ಷೆಯ ಅತಿ ಮುಖ್ಯ ಭಾಗವಾಗಿ ಪರಿಗಣಿಸಲಾಗಿದೆ .ಈ ಕಾರಣದಿಂದಾಗಿ ಯಾರಿಗೆ ಬೇಕು ಈ ಕಂಬ ಹತ್ತುವ ಕಿರಿಕಿರಿ ಅಂತ ಹೆಚ್ಚಿನ ಯುವಕರು ಈ ಹುದ್ದೆಗೆ ಹೆಚ್ಚಾಗಿ ಆಸಕ್ತಿ ತೋರುವುದಿಲ್ಲ. ಆದರೆ ಇನ್ನು ಮುಂದೆ ವಿದ್ಯುತ್ ನಿಗಮದ ಪವರ್ ಮ್ಯಾನ್ ಹುದ್ದೆಗೆ ಕಂಬ ಹತ್ತುವ ಅನುಭವ ಬೇಕಿಲ್ಲ.

ಉಡುಪಿ ಜಿಲ್ಲೆಯ ಯತೀಶ್ ಆಚಾರ್ಯ ಎಂಬ ಯುವಕ ಈ ಸುಧಾರಿತ ಸಾಧನವನ್ನು ತಯಾರಿಸಿದ್ದಾರೆ ವಿದ್ಯುತ್ ನಿಗಮ ಸಿಬ್ಬಂದಿಗಳ ನಿತ್ಯ ಬವಣೆಯನ್ನು ಮನಗಂಡ ಯತೀಶ್ ಆಚಾರ್ಯ ಅತ್ಯಂತ ಸುಲಭವಾಗಿ ಕಂಬ ಏರುವ ಸುಧಾರಿತ ಸಾಧನ ಸಿದ್ಧಪಡಿಸಿದ್ದಾರೆ. ಈ ಸಾಧನ ಬಳಸಿ ಯಾವುದೇ ಶ್ರಮವಿಲ್ಲದೆ ಸರಸರನೆ ಕಂಬ ಏರಬಹುದಾಗಿದೆ. ಅದಲ್ಲದೆ ಈ ಸಾಧನದ ಮೇಲೆ ಕುಳಿತು ಕಂಬದ ಮೇಲೆ ಕೆಲಸ ಮಾಡಬಹುದಾಗಿದೆ.
"ಎಲ್ " ಆಕೃತಿಯ ಕಬ್ಬಿಣದ ರಾಡ್ ಹಾಗೂ ಪ್ಲಾಸ್ಟಿಕ್ ಚಪ್ಪಲಿ ಬಳಸಿ ಅತ್ಯಂತ ಸುಧಾರಿತ ಸರಳ ಸಾಧನವನ್ನು ಯತೀಶ್ ತಯಾರಿಸಿದ್ದಾರೆ .ಈ ಸಾಧನಕ್ಕೆ ಪ್ಲಾಸ್ಟಿಕ್ ಚಪ್ಪಲಿ ಮಾತ್ರವಲ್ಲದೆ ಯಾವುದೇ ಮೆಟೀರಿಯಲ್ ನ ಸೇಫ್ಟಿ ಶೂಗಳನ್ನು ಕೂಡ ಅಳವಡಿಸಬಹುದಾಗಿದೆ.

ಈ ಹಿಂದೆ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಯತೀಶ್ ತಮ್ಮ ತಂದೆಯ ಅನಾರೋಗ್ಯ ನಿಮಿತ್ತ ತನ್ನ ಹುಟ್ಟೂರು ಬೈಂದೂರಿಗೆ ಮರಳಿದ್ದರು . ತಮ್ಮ ಸಹೋದರನೊಂದಿಗೆ ಕಬ್ಬಿಣದ ಸಲಕರಣೆಗಳನ್ನು ತಯಾರಿಸುವ ಕೆಲಸವನ್ನು ಯತೀಶ್ ಮಾಡುತ್ತಿದ್ದಾರೆ .ಈ ನಡುವೆ ಊರಿನ ವಿದ್ಯುತ್ ನಿಗಮದ ಸಿಬ್ಬಂದಿ ಲೋಹಿತ್ ಎಂಬವರು ಕಂಬ ಹತ್ತುವ ಸಾಧನವನ್ನು ಸಿದ್ದ ಪಡಿಸಲು ಒತ್ತಾಯಿಸಿದ್ದರು .ಈ ಬಗ್ಗೆ ಗಮನ ಹರಿಸಿದ ಯತೀಶ್ ಈ ಸರಳ ಸಾಧನವನ್ನು ಈಗ ತಯಾರಿಸಿದ್ದಾರೆ. ಈ ಸರಳ ಸಾಧನವನ್ನು ತಯಾರಿಸಲು ತಗಲುವ ಖರ್ಚು ಕೇವಲ 1500 ರೂಪಾಯಿ.

ಈ ಹಿಂದೆ ಕೂಡ ವಿದ್ಯುತ್ ಕಂಬ ಹತ್ತುವ ಸಾಧನವನ್ನು ತಯಾರಿಸುವ ಪ್ರಯತ್ನಗಳು ನಡೆದಿವೆ . 2015 ರಲ್ಲಿ ಹೆಸ್ಕಾಂ ಕಾರ್ಮಿಕ ಮುತಾಲಿಕ್ ದೇಸಾಯಿ ಎಂಬುವರು ಸರಳ ಸಾಧನವನ್ನು ತಯಾರಿಸಿದ್ದರು. ಇತ್ತೀಚೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಮೆಸ್ಕಾಂ ನೌಕರ ಚಂದ್ರಪ್ಪ ಎಂಬುವರು ಕೂಡ ಈ ರೀತಿಯ ಸಾಧನವನ್ನು ಸಿದ್ಧಪಡಿಸಿದ್ದರು .

ಆದರೆ ಯತೀಶ್ ಅವರು ತಯಾರಿಸಿರುವ ಸಾಧನ ಅತ್ಯಂತ ಸುಧಾರಿತ, ಸರಳ ಮತ್ತು ಸುರಕ್ಷಿತ, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ವಿದ್ಯುತ್ ನಿಗಮ ಈ ಸರಳ ಸಾಧನದ ಬಗ್ಗೆ ಗಮನ ಹರಿಸಬೇಕಿದೆ .
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications