ಧರ್ಮಸ್ಥಳದಲ್ಲಿ ಪ್ರದರ್ಶನಗೊಂಡ ಸುಂದರವಾದ ಮಾದರಿ ಮನೆ
ಅಚ್ಚುಕಟ್ಟಾದ ಮನೆಯ ಸುಂದರ ವಿನ್ಯಾಸ. ಸುತ್ತಲೂ ಕೃಷಿ ಹಾಗೂ ಹೂದೋಟ. ಬದಲಿ ಇಂಧನ ವ್ಯವಸ್ಥೆಯ ಉಪಯೋಗ. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿರುವ ಮನೆಯ ವಾತಾವರಣ... ಇದು ಯಾವುದೇ ನೈಜ ಮನೆಯಲ್ಲ; ಬದಲಾಗಿ ಮನೆಯ ಒಂದು ಮಾದರಿ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವದಲ್ಲಿ ದೀಪಾಲಂಕಾರ, ಉತ್ಸವ, ಧಾರ್ಮಿಕ ಆಚರಣೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಅಚ್ಚುಕಟ್ಟಾಗಿ ನಿಮಾಣಗೊಂಡಿರುವ ಮನೆಯ ಮಾದರಿಯೊಂದು ಎಲ್ಲರ ಗಮನಸೆಳೆಯಿತು.
ಈ ಮಾದರಿ ಮನೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಮಾಣಗೊಂಡಿದ್ದು, ಮನೆಯೆಂದರೆ ಲಕ್ಷದೀಪೋತ್ಸವದಲ್ಲಿ ನಿರ್ಮಿತವಾಗಿರುವ ಮಾದರಿ ಮನೆಯಂತಿರಬೇಕು ಎಂಬ ಸಂದೇಶ ಸಾರುತ್ತಿದೆ.
ಮಾದರಿ ಮನೆ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಸೌರಶಕ್ತಿಯನ್ನು ಮನೆಯಲ್ಲಿ ಯಾವೆಲ್ಲ ಕಾರ್ಯಗಳಿಗೆ ಬಳಸಬಹುದು ಹಾಗೂ ವಿದ್ಯುತ್ಗೆ ಬದಲಿ ವ್ಯವಸ್ಥೆಯಾಗಿ ಸೌರಶಕ್ತಿಯನ್ನು ಹೇಗೆ ಉಪಯೋಗಿಸಬಹುದು ಎಂಬ ಕುರಿತು ಮಾಹಿತಿ ನೀಡುತ್ತಿದೆ.

ಸೋಲಾರ್ ಲೈಟ್ ಅಳವಡಿಕೆ
ಮನೆಯಲ್ಲಿ ಸೋಲಾರ್ ಲೈಟ್ ಹಾಗೂ ಬಿಸಿ ನೀರಿಗಾಗಿ ಸೋಲಾರ್ ಅಳವಡಿಸಲಾಗಿದೆ. ದನದ ಹಾಲು ಕರೆಯುವ ಯಂತ್ರವೂ ವಿದ್ಯುತ್ ಬದಲು ಸೌರಶಕ್ತಿಯನ್ನೇ ಉಪಯೋಗಿಸುತ್ತದೆ. ಮನೆಯಲ್ಲಿ ಹೈನುಗಾರಿಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಹಸುವಿನ ಗೊಬ್ಬರವನ್ನು ಕೃಷಿ ಹಾಗೂ ಗೋಬರ್ ಗ್ಯಾಸ್ಗೆ ಬಳಸಲಾಗುತ್ತಿದೆ. ಕೃಷಿಯಲ್ಲಿ ಕಡಿಮೆ ನೀರು ಬಳಸುವ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಗಿದೆ.

ಇಂಧನ ಉಳಿತಾಯ ಸೂತ್ರ
ಕಡಿಮೆ ಕಟ್ಟಿಗೆ ಉಪಯೋಗಿಸಿ ಅಡುಗೆ ಮಾಡವ ಒಲೆಯೂ ಈ ಮನೆಯಲ್ಲಿದೆ. ಸೌದೆ, ಬೆರಣಿ ಹಾಗೂ ಕೃಷಿ ತ್ಯಾಜ್ಯವನ್ನು ಉಪಯೋಗಿಸಿ ಅಡುಗೆ ಮಾಡಬಹುದು. ಇತರ ಒಲೆಗಳಿಗೆ ಹೋಲಿಸಿದರೆ ಈ ಒಲೆ ಕಡಿಮೆ ಹೊಗೆ ಬಿಡುತ್ತದೆ. ಈ ಒಲೆಯಿಂದ ಸಮಯ ಹಾಗೂ ಇಂಧನದ ಉಳಿತಾಯ ಸಾಧ್ಯವಿದೆ.

ಹೂ ಗಿಡಗಳಿಂದ ಆವೃತವಾದ ಮನೆ
ಮನೆಯ ಮಾದರಿಯಲ್ಲಿ ತುಳಸಿಕಟ್ಟೆ, ಬಾವಿ, ಜೇನು ಸಾಕಣಿಕಾ ಯಂತ್ರ ಹಾಗೂ ಶೌಚಾಲಯದ ಮಾದರಿಯೂ ಇದೆ. ಅಲಂಕಾರಕ್ಕಾಗಿ ನೈಜ ಹೂವಿನ ಗಿಡಗಳನ್ನು ಬಳಸಲಾಗಿದೆ. ವಿವಿಧ ರೀತಿಯ ಕೃಷಿಯನ್ನು ಬಿಂಬಿಸುವ ಸಸಿಗಳಿವೆ.

ಕಡಿಮೆ ಖರ್ಚಿನಲ್ಲಿ ಮಾದರಿ ಮನೆ
ಮರ, ಬಿದಿರು ಹಾಗೂ ಸಿಮೆಂಟ್ ಉಪಯೋಗಿಸಿ ಈ ಮಾದರಿ ಮನೆಯನ್ನು ನಿರ್ಮಿಸಲಾಗಿದೆ. ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆಂದೇ ಈ ಮಾದರಿ ಮನೆಯನ್ನು ನಿರ್ಮಿಸಿದ್ದು ವಿಶೇಷವಾಗಿದೆ. ಮನೆಯೆಂದರೆ ಕೇವಲ ಐಷಾರಮಿ ಬಂಗಲೆಗಳಲ್ಲ; ಬದಲಾಗಿ ಕಡಿಮೆ ಖರ್ಚಿನಲ್ಲಿ ಇಂತಹ ಮಾದರಿ ಮನೆಯ ನಿರ್ಮಾಣವನ್ನು ಮಾಡಬಹುದು ಎಂದು ಸಾರುತ್ತಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications