ಮಂಗಳೂರು: ಮಾಸ್ಕ್ ಹಾಕದ ಕಾರ್ಮಿಕರ ಮೇಲೆ ರೇಗಾಡಿದ ಜಿಲ್ಲಾಧಿಕಾರಿ
ಮಂಗಳೂರು, ಮಾರ್ಚ್ 23: ಮಾಸ್ಕ್ ಹಾಕದ ಕಾರಣ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುವವರನ್ನು ಪೊಲೀಸರು ಅಪರಾಧಿಯಂತೆ ಎಳೆದುಕೊಂಡು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಾಸ್ಕ್ ಹಾಕದ ಕಾರಣ ಬಡವರ ಮೇಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸರು ದರ್ಬಾರ್ ತೋರಿಸಿದ್ದಾರೆ. ಇದೇ ರೀತು ಮಂಗಳೂರಿನಲ್ಲಿ ಇರುವ ಪಬ್, ಬಾರ್ ಗಳಿಗೆ ಭೇಟಿ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಬ್, ಬಾರ್ ಗಳಲ್ಲಿ ಯಾವ ರೀತಿ ಇರುತ್ತಾರೆ ನೋಡಿ ಸ್ವಾಮಿ, ಆಸ್ಪತ್ರೆಯಲ್ಲಿ ಕೋವಿಡ್ ಹೆಸರಿನಲ್ಲಿ ಎಷ್ಟೊಂದು ಲೂಟಿ ಹೊಡೆದವರನ್ನು ನೋಡಿ, ಮಾಸ್ಕ್ ಇಲ್ಲದಿದ್ದರೆ ಉಚಿತ ಮಾಸ್ಕ್ ಕೊಡಿ ಅದನ್ನು ಬಿಟ್ಟು ಈ ರೀತಿ ಮಾಡಿದರೆ ಹೇಗೆ ಸಾರ್ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.












Click it and Unblock the Notifications