ಮೂಡುಬಿದರೆ : ಆಳ್ವಾಸ್ ವಿರಾಸತ್ ಸುದ್ದಿ ಮತ್ತು ಚಿತ್ರಗಳು
ಮೂಡಬಿದಿರೆ,
ಜ.
9
:
ನಾಲ್ಕು
ದಿನಗಳ
ರಾಷ್ಟ್ರೀಯ
ಸಾಂಸ್ಕತಿಕ
ಉತ್ಸವ
'ಆಳ್ವಾಸ್
ವಿರಾಸತ್
2015'ಗೆ
ಗುರುವಾರ
ಚಾಲನೆ
ದೊರಕಿದೆ.
ಮೂಡುಬಿದರೆ
ವಿದ್ಯಾಗಿರಿಯ
ಆಳ್ವಾಸ್
ಪ್ಯಾಲೇಸ್
ಗ್ರೌಂಡ್ನಲ್ಲಿನ
ಉದ್ಘಾಟನಾ
ಕಾರ್ಯಕ್ರಮಕ್ಕೆ
20
ಸಾವಿರಕ್ಕೂ
ಅಧಿಕ
ಜನರು
ಸಾಕ್ಷಿಯಾದರು.
ಸಮ್ಮೇಳನ
ಉದ್ಘಾಟನೆಗೂ
ಮುನ್ನ
ನಾಡಿನ
ವಿವಿಧ
ಜಾನಪದ
ಕಲಾತಂಡಗಳ
ಅದ್ದೂರಿ
ಮೆರವಣಿಗೆ
ನಡೆಯಿತು.
ಕೊಂಬು,
ಕಹಳೆ,
ಚೆಂಡೆಗಳ
ಸದ್ದಿನ
ನಡುವೆ
ಕಾರ್ಯಕ್ರಮದ
ಸಂಯೋಜಕ
ಡಾ.
ಎಂ.
ಮೋಹನ್
ಆಳ್ವ
ಮುಂದಾಳತ್ವದಲ್ಲಿ
ಸರೋದ್
ವಾದಕ
ಪದ್ಮವಿಭೂಷಣ
ಉಸ್ತಾದ್
ಅಮ್ಜದ್
ಆಲಿಖಾನ್
ಹಾಗೂ
ಗಣ್ಯರನ್ನು
ಸ್ವಾಗತಿಸಲಾಯಿತು.
ವೇದಿಕೆ
ಕಾರ್ಯಕ್ರಮದಲ್ಲಿ
2015ನೇ
ಸಾಲಿನ
ಆಳ್ವಾಸ್
ವಿರಾಸತ್
ಪ್ರಶಸ್ತಿ
ಸ್ವೀಕರಿಸಿ
ಮಾತನಾಡಿದ
ಸರೋದ್
ಮಾಂತ್ರಿಕ
ಉಸ್ತಾದ್
ಅಮ್ಜದ್
ಅಲಿಖಾನ್,
ಸಂಗೀತವೇ
ದೇವರೆಂದು
ತಿಳಿದಿರುವ
ತಾನು
ಆ
ಮೂಲಕ
ಸಮಾಜದಲ್ಲಿ
ಶಾಂತಿ
ಮತ್ತು
ಸಾಮರಸ್ಯ
ಮೂಡಿಸುವ
ಮಹತ್ತರ
ಜವಾಬ್ದಾರಿಯನ್ನು
ಮುಂದುವರಿಸಿಕೊಂಡು
ಹೋಗುತ್ತೇನೆ
ಎಂದು
ಹೇಳಿದರು.
[ಅಮ್ಜದ್
ಅಲಿಖನ್
ಗೆ
ವಿರಾಸತ್
ಪ್ರಶಸ್ತಿ]
ಶೈಕ್ಷಣಿಕ
ಹಾಗೂ
ವೈಜ್ಞಾನಿಕವಾಗಿ
ಮುಂದುವರಿದ
21ನೇ
ಶತಮಾನದಲ್ಲಿ
ಶಾಂತಿ
ಮತ್ತು
ಸಾಮರಸ್ಯ
ಇರಬೇಕು
ಎಂಬುದಾಗಿ
ಅಪೇಕ್ಷಿಸುತ್ತಿದ್ದರೂ,
ಧರ್ಮದ
ಹೆಸರಿನಲ್ಲಿ
ದ್ವೇಷ
ಮೂಡುತ್ತಿರುವುದು
ವಿಪರ್ಯಾಸ
ಎಂದು
ಅವರು
ಬೇಸರ
ವ್ಯಕ್ತಪಡಿಸಿದರು.
ಕಾರ್ಯಕ್ರಮ
ಉದ್ಘಾಟಿಸಿದ
ದಕ್ಷಿಣ
ಕನ್ನಡ
ಜಿಲ್ಲಾ
ಉಸ್ತುವಾರಿ
ಸಚಿವ
ಬಿ.ರಮಾನಾಥ
ರೈ
ಅವರು,
ಆಳ್ವಾಸ್
ವಿರಾಸತ್
ಸಾಂಸ್ಕತಿಕ
ಉತ್ಸವ
ಸಾಮಾಜಿಕ
ಸಾಮರಸ್ಯಕ್ಕೆ
ಮೂಲವಾಗಲಿ
ಎಂದು
ಆಶಿಸಿದರು.
ಸಾಂಸ್ಕತಿಕ
ಕಾರ್ಯಕ್ರಮವನ್ನು
ಹೊಸ
ಪರಿಕಲ್ಪನೆಯೊಂದಿಗೆ
ನೀಡುವ
ಆಳ್ವಾಸ್
ವಿರಾಸತ್,
ಕೇವಲ
ಒಂದು
ಹೋಬಳಿ
ಕೇಂದ್ರವಾಗಿರುವ
ಮೂಡುಬಿದಿರೆಗೆ
ವಿರಾಟ್
ಖ್ಯಾತಿಯನ್ನು
ತಂದಿದೆ
ಎಂದರು.
ಕಾರ್ಯಕ್ರಮದ
ಅಧ್ಯಕ್ಷತೆ
ವಹಿಸಿದ್ದ
ನಿಟ್ಟೆ
ಎಜುಕೇಶನ್
ಟ್ರಸ್ಟ್
ಅಧ್ಯಕ್ಷ
ಡಾ.ಎನ್.ವಿನಯ್
ಹೆಗ್ಡೆ
ಅವರು
ಮಾತನಾಡಿ,
ಅಂತಾರಾಷ್ಟ್ರೀಯ
ಮಟ್ಟದ
ಕಲಾವಿದರ
ಕಾರ್ಯಕ್ರಮ
ಆಯೋಜಿಸಿ
ಯುವ
ವಿದ್ಯಾರ್ಥಿಗಳಲ್ಲಿ
ಆಸಕ್ತಿ
ಉಂಟು
ಮಾಡುವ
ಮೂಲಕ
ಅನೇಕ
ಕಲಾವಿದರು
ಆಳ್ವಾಸ್
ಶಿಕ್ಷಣ
ಸಂಸ್ಥೆಯಲ್ಲಿ
ಸಷ್ಟಿಯಾಗಿದ್ದಾರೆ
ಎಂದರು.
ಆಳ್ವಾಸ್
ಶಿಕ್ಷಣ
ಪ್ರತಿಷ್ಠಾನದ
ಅಧ್ಯಕ್ಷ
ಡಾ.ಎಂ.ಮೋಹನ್
ಆಳ್ವ
ಮಾತನಾಡಿ,
ಯುವ
ವಿದ್ಯಾರ್ಥಿ
ಸಮುದಾಯದಲ್ಲಿ
ಮಾತ್ರವಲ್ಲದೆ
ಗ್ರಾಮೀಣ
ಭಾಗದಲ್ಲಿ
ಸಾಂಸ್ಕತಿಕ
ಸೌಂದರ್ಯ
ಪ್ರಜ್ಞೆ
ಬೆಳೆಸುವ
ಕಾರ್ಯ
ವಿರಾಸತ್ನ
ಗುರಿಯಾಗಿದೆ.
ಮುಂದಿನ
ದಿನದಲ್ಲಿ
ಪ್ರತಿ
10
ವರ್ಷಕ್ಕೊಮ್ಮೆ
''ಆಳ್ವಾಸ್
ವಿಶ್ವ
ನುಡಿಸಿರಿ
ವಿರಾಸತ್'
ಅಯೋಜಿಸಲಾಗುವುದು
ಎಂದು
ಹೇಳಿದರು.
ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ನಿಕ್, ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ವಿ.ಎಸ್.ಕಷ್ಣ ಕುಮಾರ್, ಕರ್ಣಾಟಕ ಬ್ಯಾಂಕ್ ಸಿಇಒ ಪಿ.ಜಯರಾಮ ಭಟ್, ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ನಾಡೋಜ ಜಿ.ಶಂಕರ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.