Get Updates
Get notified of breaking news, exclusive insights, and must-see stories!

ಮಂಗಳೂರಿನ ಆರ್ ಎಸ್ ಎಸ್ ಶಕ್ತಿ ಕೇಂದ್ರದಲ್ಲಿ ಏಕದಂತನಿಗೆ ಪೂಜೆ ಸಲ್ಲಿಸಿದ ಕ್ರೈಸ್ತ ಧರ್ಮಗುರು, ಭಗಿನಿಯರು

ಮಂಗಳೂರು, ಸೆಪ್ಟೆಂಬರ್.16: ಗಣೇಶ ಚತುರ್ಥಿ ಕೇವಲ ಹಿಂದೂಗಳ ಉತ್ಸವ ಮಾತ್ರವಾಗಿರದೇ ಸರ್ವ ಧರ್ಮಿಯರೂ ಸೇರಿ ವಿಜೃಂಭಣೆಯಿಂದ ಆಚರಿಸುವ ಹಲವಾರು ನಿದರ್ಶನಗಳ ನಮ್ಮ ಮುಂದಿದೆ. ಈ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ.

ಮಂಗಳೂರಿನ ಸಂಘನಿಕೇತನದಲ್ಲಿ ಪೂಜಿಸಲಾಗುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಕ್ರೈಸ್ತ ಧರ್ಮಗುರುಗಳು ಹಾಗು ಭಗಿನಿಯರು ಭಾಗವಹಿಸಿದ್ದಾರೆ.

ಆರ್ ಎಸ್ ಎಸ್ ನ ಶಕ್ತಿ ಕೇಂದ್ರ ಎಂದೇ ಹೇಳಲಾಗುವ ಸಂಘನಿಕೇತನದ ಗಣೇಶೋತ್ಸವ ಸೌಹಾರ್ದತೆಗೆ ವೇದಿಕೆಯಾಗುತ್ತಿದೆ. ಈ ಬಾರಿ ಕ್ರೈಸ್ತ ಧರ್ಮಗುರುಗಳು ಹಾಗು ಕ್ರೈಸ್ತ ಭಗಿನಿಯರು ಈ ಗಣೇಶನ ಪಾದತಲಕ್ಕೆ ಹಣ್ಣುಹಂಪಲು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

christian priests and Nuns offered pooja to Ganesha

ಕಳೆದ ಬಾರಿಯೂ ಬಾಲ ಏಸು ಕ್ಷೇತ್ರದ ಧರ್ಮಗುರುಗಳು ಬಂದು ಗಣಪತಿಗೆ ಪೂಜೆ ಮಾಡಿಸಿ ಪ್ರಾರ್ಥನೆ ಸಲ್ಲಿಸಿದ್ದರು.

ಸಂಘನಿಕೇತನದ ವತಿಯಿಂದ ಈ ಬಾರಿ 71ನೇ ವರ್ಷದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘನಿಕೇತನ ಸಭಾಂಗಣದಲ್ಲಿ ಇರಿಸಲಾದ ಗಣೇಶನ ವಿಗ್ರಹಕ್ಕೆ ಮಂಗಳೂರಿನ ಕ್ಯಾಥೊಲಿಕ್ ಸಭಾ ಮತ್ತು ಸೈಂಟ್ ಜೋಸೆಫ್ ಕಾನ್ವೆಂಟ್ ನ ಭಗಿನಿಯರು ಬಂದು ಫಲಪುಷ್ಪ ಸಮರ್ಪಿಸಿ, ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

ಮಂಗಳೂರು ಕ್ಯಾಥೊಲಿಕ್ ಸಭಾದ ಕಾರ್ಯದರ್ಶಿ ಸೆಲೆಸ್ಟೀನ್ ಡಿಸೋಜಾ, ಸೈಂಟ್ ಜೋಸೆಫ್ ಕಾನ್ವೆಂಟ್ ನ ಭಗಿನಿಯರಾದ ಸಿಸ್ಟರ್ ಜ್ಯೋತಿ, ಸಿಸ್ಟರ್ ಮರಿಯಾ, ಸಿಸ್ಟರ್ ಅನಿತ, ಸಿಸ್ಟರ್ ರೋಸಾ, ಸಿಸ್ಟರ್ ಸುಜಾತ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದರು.

christian priests and Nuns offered pooja to Ganesha

ಹಲವು ವರ್ಷಗಳಿಂದ ಈ ಕ್ರೈಸ್ತ ಧರ್ಮಕೇಂದ್ರಗಳ ಧರ್ಮಗುರುಗಳು ಗಣೇಶೋತ್ಸವದಂದು ಸಂಘನಿಕೇತನಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಯಾವುದೇ ಜಾತಿ-ಧರ್ಮ ರಾಜಕೀಯವಿಲ್ಲದೆ ನಾವೆಲ್ಲರೂ ಒಂದಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇವೆ. ಮುಂದೆಯೂ ಇದೇ ರೀತಿ ಭಾಗಿಯಾಗಲು ದೇವರು ಅನುಗ್ರಹಿಸಲಿ ಎಂದು ಕ್ರೈಸ್ತ ಧರ್ಮಗುರುಗಳು ಹಾಗು ಭಗಿನಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+