ಮಂಗಳವಾರ ಮಂಗಳೂರಿಗೆ ಬರ್ತಾರೆ ಕೇಜ್ರಿವಾಲ್
ಮಂಗಳೂರು, ಸೆಪ್ಟೆಂಬರ್, 07 : ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ಸೆ.8ರಂದು ಅವರು ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಅರವಿಂದ್
ಕೇಜ್ರಿವಾಲ್
ಅವರು
ಸೆ.9ರ
ಬುಧವಾರ
ಶ್ರೀ
ಧರ್ಮಸ್ಥಳ
ಮಂಜುನಾಥೇಶ್ವರ
ಯೋಗ
ವಿಜ್ಞಾನ
ಮತ್ತು
ಪ್ರಕೃತಿ
ಚಿಕಿತ್ಸಾ
ಕಾಲೇಜಿನ
ಘಟಿಕೋತ್ಸವದಲ್ಲಿ
ಪಾಲ್ಗೊಳ್ಳಲಿದ್ದಾರೆ.
ಆದ್ದರಿಂದ
ಸೆ.
8ರಂದು
ಮಂಗಳೂರಿಗೆ
ವಿಮಾನದ
ಮೂಲಕ
ಆಗಮಿಸಲಿದ್ದಾರೆ.
ಮಂಗಳವಾರ ರಾತ್ರಿ ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಲಿದ್ದು, ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೆ. 9ರಂದು ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. 2015ರ ಮಾರ್ಚ್ನಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಕೇಜ್ರಿವಾಲ್ ಅವರು, ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕೆಮ್ಮು ಮತ್ತು ಮಧುಮೇಹಕ್ಕೆ ಚಿಕಿತ್ಸೆ ಪಡೆದಿದ್ದರು. [ಚಿತ್ರಗಳು : ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಜ್ರಿವಾಲ್]
ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಮಂಜುನಾಥೇಶ್ವರ ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಡಾ.ಬಬಿತಾ ಅವರ ನೇತೃತ್ವದ ತಂಡ ಅರವಿಂದ್ ಕೇಜ್ರಿವಾಲ್ ಅವರಿಗೆ ಚಿಕಿತ್ಸೆ ನೀಡಿತ್ತು.
ಆತಂಕ
ಮೂಡಿಸಿದ
ಗ್ಯಾಸ್
ಟ್ಯಾಂಕರ್
:
ಮಂಗಳೂರಿನ
ಪಡೀಲ್
ಬಳಿ
ಎಚ್ಪಿಸಿಎಲ್
ಸಂಸ್ಥೆಗೆ
ಸೇರಿದ
ಗ್ಯಾಸ್
ಟ್ಯಾಂಕರ್
ಚಾಲಕನ
ನಿಯಂತ್ರಣ
ಕಳೆದುಕೊಂಡು
ರಸ್ತೆ
ವಿಭಜಕಕ್ಕೆ
ಡಿಕ್ಕಿ
ಹೊಡೆದು,
ಅದರ
ಮೇಲೆ
ಹತ್ತಿನಿಂತು
ಕೆಲಕಾಲ
ಆತಂಕ
ಮೂಡಿಸಿತ್ತು.
[ಕುಮಟಾ
ಟ್ಯಾಂಕರ್
ದುರಂತದ
ಚಿತ್ರಗಳು]
ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು, ಕಳೆದ ವಾರ ಕುಮಟಾ ಸಮೀಪ ಗ್ಯಾಸ್ ಟ್ಯಾಂಕರ್ ಉರುಳಿಬಿದ್ದು ಆದ ಅನಾಹುತವನ್ನು ನೆನಪಿಸಿತು. ಅಪಘಾತವಾಗುತ್ತಿದ್ದಂತೆ ಹತ್ತಿರದ ಮನೆಗಳಲ್ಲಿದ್ದ ಜನರು ಗಾಬರಿಗೊಂಡು ರಸ್ತೆಗೆ ಓಡಿ ಬಂದರು.
ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾಗುಗತ್ತಿಲ್ಲ ಎಂದು ಖಚಿತ ಪಡಿಸಿದ ಬಳಿಕ ಆತಂಕ ದೂರವಾಯಿತು.