ಗಾಂಧೀಜಿ,ಮೋದಿ: ಮಂಗಳೂರಿನಲ್ಲಿ ಜಾಹೀರಾತು ಸಮರ
ಮಂಗಳೂರು, ನ 13: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಕೊಂದವರು ಯಾರು? ರಾಷ್ಟ್ರಪಿತನ ತತ್ವಾದರ್ಶವನ್ನು ಮಣ್ಣುಪಾಲು ಮಾಡಿದವರು ಯಾರು?
ಹೀಗೆ ಬಂದರು ನಗರಿ ಮಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಸಿಟಿಜನ್ ಕೌನ್ಸಿಲ್ ನಡುವೆ ಜಾಹೀರಾತು ಸಮರ ಏರ್ಪಟ್ಟಿದೆ. ಎಐಸಿಸಿ ಸದಸ್ಯ ಪಿ ವಿ ಮೋಹನ್ ನ 11ರಂದು 'ಗಾಂಧೀಜಿಯವರನ್ನು ಕೊಂದವರು ಯಾರೆಂದು ತಿಳಿದಿದೆಯೇ' ಎನ್ನುವ ಮುಖಬರಹವಿರುವ ಜಾಹೀರಾತನ್ನು ಪ್ರಕಟಿಸಿದ್ದರು.
ಕಾಂಗ್ರೆಸ್ಸಿನ ಈ ಜಾಹೀರಾತಿಗೆ ಉತ್ತರ ನೀಡುವ ನೀಡುವ ಇನ್ನೊಂದು ಜಾಹೀರಾತನ್ನು ಸಿಟಿಜನ್ ಕೌನ್ಸಿಲಿನ ಸಂಚಾಲಕ ಮತ್ತು ನಮೋ ಬ್ರಿಗೇಡ್ ಸಂಚಾಲಕರೂ ಆಗಿರುವ ನರೇಶ್ ಶೆಣೈ ನ 12ರಂದು ಪ್ರಕಟಿಸಿದ್ದಾರೆ.
ಕಾಂಗ್ರೆಸ್ಸಿನ ಜಾಹೀರಾತು ಇಂಗ್ಲಿಷ್ ನಲ್ಲಿದ್ದರೆ, ಸಿಟಿಜನ್ ಕೌನ್ಸಿಲಿನ ಜಾಹೀರಾತು ಕನ್ನಡದಲ್ಲಿ ಪ್ರಕಟವಾಗಿದೆ. ಈ ಎರಡೂ ಜಾಹೀರಾತುಗಳು ನಗರದ ಹೃದಯ ಭಾಗದಲ್ಲಿರುವ ಬಲ್ಮಠ ಪ್ರದೇಶದಲ್ಲಿ ಒಂದಕ್ಕೊಂದು ಹೊಂದಿಕೊಂಡತೆ ಇದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಪ್ರಧಾನಿ
ನರೇಂದ್ರ
ಮೋದಿ
ಮತ್ತು
ಬಿಜೆಪಿಯನ್ನು
ಟಾರ್ಗೆಟ್
ಮಾಡಲೆಂದೇ
ಹಾಕಲಾಗಿರುವ
ಕಾಂಗ್ರೆಸ್
ಜಾಹೀರಾತಿನ
ಪ್ರಮುಖ
ಅಂಶಗಳು
ಏನಂದರೆ?
>
ಗಾಂಧೀಜಿಯವರನ್ನು
ಕೊಂದ
ನಂತರ
ಅವರನ್ನು
ಮುಖವಾಡವಾಗಿ
ಬಳಸಿಕೊಳ್ಳುತ್ತಿದ್ದಾರೆ.
>
ಮಹಾತ್ಮ
ಗಾಂಧಿಯವರು
ನುರಿತ
ರಾಜಕಾರಣಿಯಾಗಿದ್ದರು
ಮತ್ತು
ಸ್ವಾತಂತ್ರ್ಯ
ಹೋರಾಟಗಾರರಾಗಿದ್ದರು.
ಅಲ್ಪಸಂಖ್ಯಾತರ ಪಾಲಿಗೆ ಸ್ನೇಹಿತ
>
ಗಾಂಧೀಜಿ
ಅಲ್ಪಸಂಖ್ಯಾತರ
ಪಾಲಿಗೆ
ಸ್ನೇಹಿತರಂತೆ
ಮತ್ತು
ದಲಿತರ
ಪಾಲಿಗೆ
ಹಿತರಕ್ಷಕರಾಗಿದ್ದರು.
>
ಶಾಂತಿಯ
ದೂತರಾಗಿದ್ದ
ಗಾಂಧೀಜಿ,
ಮಹಿಳೆಯರ
ಪಾಲಿಗೆ
ಆಶಾಕಿರಣರಾಗಿದ್ದರು.
ಸ್ವಚ್ಚತಾ ಅಭಿಯಾನಕ್ಕೆ ಗಾಂಧೀಜಿ ಪ್ರಚಾರದ ವಸ್ತುವಲ್ಲ
>
ಸ್ವಚ್ಚತಾ
ಅಭಿಯಾನಕ್ಕೆ
ಗಾಂಧೀಜಿ
ಪ್ರಚಾರದ
ವಸ್ತುವಲ್ಲ
>
ಗಾಂಧೀಜಿ
ಹೆಸರನ್ನು
ಪ್ರಚಾರಕ್ಕೆ
ಬಳಸಿ
ಅವರ
ಹೆಸರಿಗೆ
ಬಿಜೆಪಿ
ಮಸಿ
ಬಳೆಯುತ್ತಿದೆ.
ಸಿಟಿಜನ್ ಕೌನ್ಸಿಲ್ ಜಾಹೀರಾತಿನ ಹೈಲೈಟ್ಸ್
ಕಾಂಗ್ರೆಸ್ಸಿನ
ಈ
ಜಾಹೀರಾತಿಗೆ,
ಸಿಟಿಜನ್
ಕೌನ್ಸಿಲ್
ಮೋದಿ
ಬೆಂಬಲಿಸುವ
ತಿರುಗೇಟಿನ
ಜಾಹೀರಾತಿನ
ಕೆಲವು
ಪ್ರಮುಖ
ಹೈಲೈಟ್ಸ್
>
ಗಾಂಧೀಜಿ
ಎಂದರೆ
ಭಾರತೀಯರ
ಪ್ರತಿಪಾದಕ
ಮತ್ತು
ನೈಜ
ಜಾತ್ಯಾತೀತ
>
ಗಾಂಧೀಜಿ
ಸ್ವಚ್ಚ
ಮತ್ತು
ಸರಳ
ಭಾರತದ
ಚಿಂತಕ
ಗ್ರಾಮ ಸ್ವರಾಜ್ಯದ ಪ್ರತಿಪಾದಕ
>
ನೈಜ
ಜಾತ್ಯಾತೀತವಾದಿಯಾಗಿದ್ದ
ಗಾಂಧೀಜಿ,
ಸಮಾನತೆಯ
ಹರಿಕಾರ
>
ಗ್ರಾಮ
ಸ್ವರಾಜ್ಯದ
ಪ್ರತಿಪಾದಕರಾಗಿದ್ದ
ಗಾಂಧೀಜಿ
ರಾಮರಾಜ್ಯದ
ಕನಸುಗಾರ
>
ಕಾಂಗ್ರೆಸ್
ವಿಸರ್ಜನೆ
ಮೋದಿಯ
ಕನಸು,
ಕಾಂಗ್ರೆಸ್
ಮುಕ್ತ
ಭಾರತ
ಮೋದಿಯ
ಕನಸು
ಗಾಂಧಿ ಕನಸು, ಮೋದಿ ನನಸು
>
ಗಾಂಧೀ
ಕನಸು
ಕಂಡರು,
ಮೋದಿ
ನನಸು
ಮಾಡುವರು
>
ನೀವು
ಗಾಂಧಿವಾದಿಯೇ
ಹಾಗಿದ್ದರೆ
ಮೋದಿಯೊಬ್ಬರೇ
ದಾರಿ