ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಂಧೀಜಿ,ಮೋದಿ: ಮಂಗಳೂರಿನಲ್ಲಿ ಜಾಹೀರಾತು ಸಮರ

|
Google Oneindia Kannada News

ಮಂಗಳೂರು, ನ 13: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಕೊಂದವರು ಯಾರು? ರಾಷ್ಟ್ರಪಿತನ ತತ್ವಾದರ್ಶವನ್ನು ಮಣ್ಣುಪಾಲು ಮಾಡಿದವರು ಯಾರು?

ಹೀಗೆ ಬಂದರು ನಗರಿ ಮಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಸಿಟಿಜನ್ ಕೌನ್ಸಿಲ್ ನಡುವೆ ಜಾಹೀರಾತು ಸಮರ ಏರ್ಪಟ್ಟಿದೆ. ಎಐಸಿಸಿ ಸದಸ್ಯ ಪಿ ವಿ ಮೋಹನ್ ನ 11ರಂದು 'ಗಾಂಧೀಜಿಯವರನ್ನು ಕೊಂದವರು ಯಾರೆಂದು ತಿಳಿದಿದೆಯೇ' ಎನ್ನುವ ಮುಖಬರಹವಿರುವ ಜಾಹೀರಾತನ್ನು ಪ್ರಕಟಿಸಿದ್ದರು.

ಕಾಂಗ್ರೆಸ್ಸಿನ ಈ ಜಾಹೀರಾತಿಗೆ ಉತ್ತರ ನೀಡುವ ನೀಡುವ ಇನ್ನೊಂದು ಜಾಹೀರಾತನ್ನು ಸಿಟಿಜನ್ ಕೌನ್ಸಿಲಿನ ಸಂಚಾಲಕ ಮತ್ತು ನಮೋ ಬ್ರಿಗೇಡ್ ಸಂಚಾಲಕರೂ ಆಗಿರುವ ನರೇಶ್ ಶೆಣೈ ನ 12ರಂದು ಪ್ರಕಟಿಸಿದ್ದಾರೆ.

ಕಾಂಗ್ರೆಸ್ಸಿನ ಜಾಹೀರಾತು ಇಂಗ್ಲಿಷ್ ನಲ್ಲಿದ್ದರೆ, ಸಿಟಿಜನ್ ಕೌನ್ಸಿಲಿನ ಜಾಹೀರಾತು ಕನ್ನಡದಲ್ಲಿ ಪ್ರಕಟವಾಗಿದೆ. ಈ ಎರಡೂ ಜಾಹೀರಾತುಗಳು ನಗರದ ಹೃದಯ ಭಾಗದಲ್ಲಿರುವ ಬಲ್ಮಠ ಪ್ರದೇಶದಲ್ಲಿ ಒಂದಕ್ಕೊಂದು ಹೊಂದಿಕೊಂಡತೆ ಇದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟಾರ್ಗೆಟ್ ಮಾಡಲೆಂದೇ ಹಾಕಲಾಗಿರುವ ಕಾಂಗ್ರೆಸ್ ಜಾಹೀರಾತಿನ ಪ್ರಮುಖ ಅಂಶಗಳು ಏನಂದರೆ?
> ಗಾಂಧೀಜಿಯವರನ್ನು ಕೊಂದ ನಂತರ ಅವರನ್ನು ಮುಖವಾಡವಾಗಿ ಬಳಸಿಕೊಳ್ಳುತ್ತಿದ್ದಾರೆ.
> ಮಹಾತ್ಮ ಗಾಂಧಿಯವರು ನುರಿತ ರಾಜಕಾರಣಿಯಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಅಲ್ಪಸಂಖ್ಯಾತರ ಪಾಲಿಗೆ ಸ್ನೇಹಿತ

ಅಲ್ಪಸಂಖ್ಯಾತರ ಪಾಲಿಗೆ ಸ್ನೇಹಿತ

> ಗಾಂಧೀಜಿ ಅಲ್ಪಸಂಖ್ಯಾತರ ಪಾಲಿಗೆ ಸ್ನೇಹಿತರಂತೆ ಮತ್ತು ದಲಿತರ ಪಾಲಿಗೆ ಹಿತರಕ್ಷಕರಾಗಿದ್ದರು.
> ಶಾಂತಿಯ ದೂತರಾಗಿದ್ದ ಗಾಂಧೀಜಿ, ಮಹಿಳೆಯರ ಪಾಲಿಗೆ ಆಶಾಕಿರಣರಾಗಿದ್ದರು.

ಸ್ವಚ್ಚತಾ ಅಭಿಯಾನಕ್ಕೆ ಗಾಂಧೀಜಿ ಪ್ರಚಾರದ ವಸ್ತುವಲ್ಲ

ಸ್ವಚ್ಚತಾ ಅಭಿಯಾನಕ್ಕೆ ಗಾಂಧೀಜಿ ಪ್ರಚಾರದ ವಸ್ತುವಲ್ಲ

> ಸ್ವಚ್ಚತಾ ಅಭಿಯಾನಕ್ಕೆ ಗಾಂಧೀಜಿ ಪ್ರಚಾರದ ವಸ್ತುವಲ್ಲ
> ಗಾಂಧೀಜಿ ಹೆಸರನ್ನು ಪ್ರಚಾರಕ್ಕೆ ಬಳಸಿ ಅವರ ಹೆಸರಿಗೆ ಬಿಜೆಪಿ ಮಸಿ ಬಳೆಯುತ್ತಿದೆ.

ಸಿಟಿಜನ್ ಕೌನ್ಸಿಲ್ ಜಾಹೀರಾತಿನ ಹೈಲೈಟ್ಸ್

ಸಿಟಿಜನ್ ಕೌನ್ಸಿಲ್ ಜಾಹೀರಾತಿನ ಹೈಲೈಟ್ಸ್

ಕಾಂಗ್ರೆಸ್ಸಿನ ಈ ಜಾಹೀರಾತಿಗೆ, ಸಿಟಿಜನ್ ಕೌನ್ಸಿಲ್ ಮೋದಿ ಬೆಂಬಲಿಸುವ ತಿರುಗೇಟಿನ ಜಾಹೀರಾತಿನ ಕೆಲವು ಪ್ರಮುಖ ಹೈಲೈಟ್ಸ್
> ಗಾಂಧೀಜಿ ಎಂದರೆ ಭಾರತೀಯರ ಪ್ರತಿಪಾದಕ ಮತ್ತು ನೈಜ ಜಾತ್ಯಾತೀತ
> ಗಾಂಧೀಜಿ ಸ್ವಚ್ಚ ಮತ್ತು ಸರಳ ಭಾರತದ ಚಿಂತಕ

ಗ್ರಾಮ ಸ್ವರಾಜ್ಯದ ಪ್ರತಿಪಾದಕ

ಗ್ರಾಮ ಸ್ವರಾಜ್ಯದ ಪ್ರತಿಪಾದಕ

> ನೈಜ ಜಾತ್ಯಾತೀತವಾದಿಯಾಗಿದ್ದ ಗಾಂಧೀಜಿ, ಸಮಾನತೆಯ ಹರಿಕಾರ
> ಗ್ರಾಮ ಸ್ವರಾಜ್ಯದ ಪ್ರತಿಪಾದಕರಾಗಿದ್ದ ಗಾಂಧೀಜಿ ರಾಮರಾಜ್ಯದ ಕನಸುಗಾರ
> ಕಾಂಗ್ರೆಸ್ ವಿಸರ್ಜನೆ ಮೋದಿಯ ಕನಸು, ಕಾಂಗ್ರೆಸ್ ಮುಕ್ತ ಭಾರತ ಮೋದಿಯ ಕನಸು

ಗಾಂಧಿ ಕನಸು, ಮೋದಿ ನನಸು

ಗಾಂಧಿ ಕನಸು, ಮೋದಿ ನನಸು

> ಗಾಂಧೀ ಕನಸು ಕಂಡರು, ಮೋದಿ ನನಸು ಮಾಡುವರು
> ನೀವು ಗಾಂಧಿವಾದಿಯೇ ಹಾಗಿದ್ದರೆ ಮೋದಿಯೊಬ್ಬರೇ ದಾರಿ

English summary
Advertisement flex banner war in Mangaluru between Congress and Citizen Council. The flex comparing Mahatma Gadhiji and Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X