ತಂದೆ-ತಾಯಿಯಿಂದ ನಿರಾಕರಣೆ: ಕ್ರಿಶ್ಚಿಯನ್ ಕುಟುಂಬದ ಮಡಿಲು ಸೇರಿದ ಲೀಲಾವತಿ ಬಾಲ್ಯ ಹೇಗಿತ್ತು..?
ಮಂಗಳೂರು, ಡಿಸೆಂಬರ್ 09: ಕಲಾ ಸರಸ್ವತಿಯಲ್ಲಿ ಐಕ್ಯರಾದ ದಕ್ಷಿಣ ಭಾರತದ ಮೇರ ನಟಿ ಲೀಲಾವತಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಲೀಲಾವತಿಯವರ ಬಾಲ್ಯದ ಜೀವನ, ತುಳು ಸಿನಿಮಾರಂಗಕ್ಕೆ ಅವರ ಕೊಡುಗೆ, ಸಿನಿಮಾದ ಆರಂಭದ ಜೀವನದ ನೆನಪನ್ನು ತುಳು ಚಿತ್ರರಂಗದ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಬಿಚ್ಚಿಟ್ಟಿದ್ದಾರೆ.
ಲೀಲಾವತಿಯವರೊಂದಿಗೆ ಒಡನಾಟದಲ್ಲಿದ್ದ ತಮ್ಮ ಲಕ್ಷ್ಮಣ ಅವರು ಅವರ ತುಳು ಭಾಷಾ ಪ್ರೇಮ, ತುಳು ಸಿನಿಮಾದ ಆರಂಭದ ಕಾಲದಲ್ಲಿ ಲೀಲಾವತಿಯವರು ಬೆನ್ನೆಲುಬಾಗಿ ನಿಂತದ್ದು, ತುಳುನಾಡಿನ ವಿಶೇಷ ಮೀನಿನ ಖಾದ್ಯವನ್ನು ತಯಾರಿಸುತ್ತಿದ್ದುದು, ವಿನೋದ್ ರಾಜ್ ಹಾಗೂ ಲೀಲಾವತಿಯವರು ತುಳು ಭಾಷೆಯಲ್ಲಿಯೇ ನಿತ್ಯ ವ್ಯವಹರಿಸುತ್ತಿರುವುದು ಎಲ್ಲವನ್ನೂ ನೆನಪು ಮಾಡಿದ್ದಾರೆ.

ಹಿರಿಯ ನಟಿ ಲೀಲಾವತಿ ವಿಧಿವಶರಾಗಿದ್ದು, ಅವರು ಬಾಲ್ಯದ ದಿನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಾವೂರಿನಲ್ಲಿ ಕಳೆದಿದ್ದರು. ಬಾಲ್ಯದಲ್ಲಿ ಲೀಲಾವತಿಯವರು ವಾಸವಿದ್ದ ಮನೆ ಈಗ ಇಲ್ಲದಿದ್ದರೂ, ಆ ಜಾಗದ ಕುರುಹು ಈಗಲೂ ಇದೆ.
ಲೀಲಾವತಿಯವರು ಹುಟ್ಟಿದಾಗ ಮಗು ಹೆಣ್ಣೆಂದು ಅವರ ತಂದೆ ತಾಯಿ ತೊರೆದಿದ್ದರು. ಆಗ ಅವರನ್ನು ಕ್ರಿಶ್ಚಿಯನ್ ದಂಪತಿ ಸಾಕಿದ್ದರು. ಈ ದಂಪತಿಯ ಸಂಬಂಧಿ, ಲೀಲಾವತಿಯವರೊಂದಿಗೆ ಒಡನಾಟವಿದ್ದ ದನ್ವಿಲ್ ಡಿಸಿಲ್ವಾ ಲೀಲಾವತಿವಯವರಿದ್ದ ಮನೆಯಿದ್ದ ಸ್ಥಳದ ಕುರುಹನ್ನು ತೋರಿಸಿದ್ದಾರೆ.
ಅಲ್ಲದೆ 15 ವರ್ಷಗಳ ಹಿಂದೆ ನಾವೂರಿನ ಮನೆಗೆ ಅವರು ಬಂದಿದ್ದರು. ಇಲ್ಲಿ ಬಂದು ತನಗೆ ಸಂತೋಷವಾಗಿದೆ. ಬಾಲ್ಯ ನೆನಪಾಗುತ್ತದೆ ಎಂದು ಲೀಲಾವತಿ ಹೇಳಿದ್ದರು ಎಂದು ದನ್ವಿಲ್ ಡಿಸೋಜ ನೆನಪಿಸಿದ್ದಾರೆ. ಆದರೆ ಲೀಲಾವರಿಯವರಿದ್ದ ಮನೆ ಈಗ ಇಲ್ಲ ಅವರು ಮುಳಿ ಹುಲ್ಲಿನ ಮನೆಯಲ್ಲಿ ವಾಸವಿದ್ದರಂತೆ.
ಲೀಲಾವತಿಯವರನ್ನು ಸಾಕಿದ್ದ ಕ್ರಿಶ್ಚಿಯನ್ ಕುಟುಂಬದ ಮಗಳು, ಲೀಲಾವತಿಯವರಿಗೆ ಸೋದರಿಯಂತಿದ್ದ ಲೂಸಿ ಸಿಕ್ವೇರಾ ತಮ್ಮಿಬ್ಬರ ಒಡನಾಟದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. ಬಾಲ್ಯದಿಂದಲೂ ಕಷ್ಟ-ಸುಖಗಳನ್ನು ನೋಡಿಕೊಂಡು ಬೆಳೆದ ಲೀಲಾವತಿ ಅವರು ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿ ಚಿತ್ರರಂಗತ್ತ ಹೆಜ್ಜೆ ಇಟ್ಟರು.

ಲೀಲಾವತಿ ಅವರ ಸಿನಿಮಾ ಪ್ರಯಾಣ
ಲೀಲಾವತಿ ಅವರು 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಸುಬ್ಬಯ್ಯ ನಾಯ್ಡು ಅವರ 'ಭಕ್ತ ಪ್ರಹ್ಲಾದ'ದಲ್ಲಿ ಕೂಡಾ ಲೀಲಾವತಿ ಅಭಿನಯಿಸಿದ್ದರು.
ಲೀಲಾವತಿ ಅವರು ತಮ್ಮ 50 ವರ್ಷಗಳ ವೃತ್ತಿ ಜೀವನದಲ್ಲಿ 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 'ಭಕ್ತ ಕುಂಬಾರ', 'ಮನ ಮೆಚ್ಚಿದ ಮಡದಿ' ಮತ್ತು 'ಸಂತ ತುಕಾರಂ' ಚಿತ್ರಗಳಲ್ಲಿನ ಸ್ಮರಣೀಯ ನಟನೆಗೆ 1999 ರಲ್ಲಿ ಡಾ. ರಾಜ್ಕುಮಾರ್ ಪ್ರಶಸ್ತಿ ಮತ್ತು ಫಿಲ್ಮ್ಫೇರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಲೀಲಾವತಿ ಕೇವಲ ನಟನೆ ಚಿತ್ರರಂಗ ಮಾತ್ರವಲ್ಲದೇ ಸಮಾಜಸೇವೆಯಲ್ಲೂ ಗುರುತಿಸಿಕೊಂಡಿದ್ದರು.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election












Click it and Unblock the Notifications